Thursday, September 17, 2026
Menu

ಮೈಕ್ರೋ ಫೈನಾನ್ಸ್ ಕಿರುಕುಳ,ಅವಮಾನಕ್ಕೆ ನೊಂದು ನದಿಗೆ ಹಾರಿದ ಶಿಕ್ಷಕಿಯ ಶವ ಪತ್ತೆ

ಮೈಕ್ರೋ ಫೈನಾನ್ಸ್ ಕಿರುಕುಳ ಮತ್ತು ಅವಮಾನ ತಾಳಲಾರದೇ   ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೊನ್ನಾಳಿಯ ಶಿಕ್ಷಕಿ ಪುಷ್ಪಲತಾ ಅವರ ಶವ ಪತ್ತೆಯಾಗಿದೆ.

ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಹಾಗೂ ಆಕೆಯ ಪತಿ ಶಿಕ್ಷಕ ಹಾಲೇಶ್ ಮನೆ ಕಟ್ಟಲು ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದರು.‌ ಒಂದು ಕಂತು ಬಾಕಿ ಇಟ್ಟುಕೊಂಡಿದ್ದಕ್ಕೆ ಫೈನಾನ್ಸ್‌ನವರ ಕಿರುಕುಳ ಶುರುವಾಗಿತ್ತು.

ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುವ ಜೊತೆಗೆ ಶಾಲೆಯ ಬಳಿ ಬಂದು ಪೀಡಿಸುತ್ತಿದ್ದರು. ಪೊಲೀಸ್ ಸ್ಟೇಷನ್‌ನಲ್ಲಿ ಶಿಕ್ಷಕ ದಂಪತಿ ವಿರುದ್ಧ ಕೇಸ್ ಹಾಕಿ ಇಬ್ಬರನ್ನು ಠಾಣೆಗೆ ಕರೆಸಿದ್ದರು. ಇದರಿಂದ ಪುಷ್ಪಲತಾ ನೊಂದಿದ್ದರು. ಡಿ. 26 ರಂದು ಶಾಲೆಯ ಕಾರ್ಯಕ್ರಮ ಮುಗಿಸಿ ನದಿಗೆ ಹಾರಿದ್ದರು. ತುಂಗಭದ್ರಾ ನದಿಯ ಬಳಿ ರಾಘವೇಂದ್ರ ಮಠದ ಹತ್ತಿರ ಅವರ ಬ್ಯಾಗ್ ಹಾಗೂ ಮೊಬೈಲ್ ಪತ್ತೆ ಆಗಿತ್ತು. ಮೂರನೇ ದಿನಕ್ಕೆ ಶವ ಪತ್ತೆಯಾಗಿದೆ.

Related Posts

Leave a Reply

Your email address will not be published. Required fields are marked *