Menu

ಚಾಹಲ್-ಧನ್ಯಶ್ರೀ ಡಿವೋರ್ಸ್ ತೀರ್ಪು ನಾಳೆ: 4.75 ಕೋಟಿ ಜೀವನಾಂಶಕ್ಕೆ ಇತ್ಯರ್ಥ?

ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪ್ರಕರಣವನ್ನು ಮಾರ್ಚ್ ೨೦ರೊಳಗೆ ಬಗೆಹರಿಸುವಂತೆ ಬಾಂಬೆ ಹೈಕೋರ್ಟ್, ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿದೆ.

ಐಪಿಎಲ್ ಟಿ-೨೦ ಟೂರ್ನಿ ಹಿನ್ನೆಲೆಯಲ್ಲಿ ಯಜುರ್ವೆಂದ್ರ ಚಾಹಲ್ ಮೂರು ತಿಂಗಳು ಬ್ಯುಸಿ ಆಗುವುದರಿಂದ ಇದಕ್ಕೂ ಮುನ್ನ ಡಿವೋರ್ಸ್ ಪ್ರಕರಣವನ್ನು 6 ತಿಂಗಳ ಕಾಯುವಿಕೆ ಅವಧಿಯನ್ನು ಸಹ ಮನ್ನಾ ಮಾಡಿದೆ.

ಚಾಹಲ್ ಹಾಗೂ ಧನಶ್ರೀ ವರ್ಮಾ ಅವರ ವಿಚ್ಛೇದನ ತೀರ್ಪು ಮಾರ್ಚ್ ೨೦ರಂದು ಹೊರಬೀಳಲಿದ್ದು, ಚಾಹಲ್ ೪.೭೫ ಕೋಟಿ ರೂ. ಜೀವನಾಂಶ ರೂಪದಲ್ಲಿ ಪರಿಹಾರ ಮೊತ್ತ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೂಲಿಂಗ್-ಆಫ್ ಅವಧಿ ಮನ್ನಾ ಮಾರ್ಚ್ 22 ರಿಂದ ಐಪಿಎಲ್ ಆರಂಭವಾಗಲಿದೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಚಾಹಲ್ ಕೂಡ ಆಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಚಾಹಲ್, ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿಯಲಿದ್ದು, ಈ ತಂಡ ಮಾರ್ಚ್ 25 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ಬಳಿಕ ಮುಂದಿನ ಎರಡು ತಿಂಗಳು ಚಾಹಲ್ ಐಪಿಎಲ್‌ನಲ್ಲಿ ನಿರತರಾಗಲಿದ್ದಾರೆ.

ಚಾಹಲ್ ಅವರ ಭಾಗವಹಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 20 ರೊಳಗೆ ವಿಚ್ಛೇದನ ಅರ್ಜಿಯ ಕುರಿತು ಅಂತಿಮ ನಿರ್ಧಾರವನ್ನು ನೀಡುವಂತೆ ಹೈಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಎರಡೂವರೆ ವರ್ಷಗಳಿಂದ ಪ್ರತ್ಯೇಕ ವಾಸ ಚಾಹಲ್ ಮತ್ತು ಧನಶ್ರೀ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಬಹಿರಂಗಪಡಿಸಿದೆ. ಇದರರ್ಥ 2022 ರ ಜೂನ್​ನಿಂದಲೇ ದಂಪತಿಗಳಿಬ್ಬರು ಬೇರ್ಪಟ್ಟಿದ್ದು, ಬೇರೆ ಬೇರೆ ವಾಸುತ್ತಿದ್ದಾರೆ ಎಂಬುದು ಖಚಿತವಾಗಿದೆ. ಫೆಬ್ರವರಿ 5 ರಂದು ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಜಂಟಿ ಅರ್ಜಿಯನ್ನು ಸಲ್ಲಿಸಿದ್ದು, ಪರಸ್ಪರ ಒಪ್ಪಿಗೆಯ ಮೂಲಕ ವಿಚ್ಛೇದನವನ್ನು ಕೋರಿದ್ದಾರೆ. ಇದರಿಂದ ಚಾಹಲ್ ಮತ್ತು ಧನಶ್ರೀ ಇನ್ನು ಮುಂದೆ ಒಟ್ಟಿಗೆ ಬಾಳುವ ಸಾಧ್ಯೆಗಳಿಲ್ಲ ಎಂಬುದನ್ನು ಸಹ ಹೈಕೋರ್ಟ್ ಆದೇಶ ದೃಢಪಡಿಸಿದೆ.

4.75 ಕೋಟಿ ಜೀವನಾಂಶ ವರದಿಯ ಪ್ರಕಾರ, ಜೀವನಾಂಶಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಪರಸ್ಪರ ಒಪ್ಪಂದಕ್ಕೆ ಬರಲಾಗಿದೆ. ಇದರ ಅಡಿಯಲ್ಲಿ ಯುಜ್ವೇಂದ್ರ ಚಾಹಲ್ ಧನಶ್ರೀ ವರ್ಮಾ ಅವರಿಗೆ 4.75 ಕೋಟಿ ರೂ.ಗಳನ್ನು ಜೀವನಾಂಶವಾಗಿ ನೀಡಲಿದ್ದಾರೆ. ಕುಟುಂಬ ನ್ಯಾಯಾಲಯದ ಪ್ರಕಾರ, ಚಾಹಲ್ ಈಗಾಗಲೇ ಇದರಲ್ಲಿ 2.37 ಕೋಟಿ ರೂ.ಗಳನ್ನು ಧನಶ್ರೀ ಅವರಿಗೆ ನೀಡಿದ್ದಾರೆ. ಇಬ್ಬರ ನಡುವಿನ ಒಪ್ಪಂದದ ಪ್ರಕಾರ, ವಿಚ್ಛೇದನ ಆದೇಶದ ನಂತರವೇ ಎರಡನೇ ಕಂತಿನ ಜೀವನಾಂಶವನ್ನು ಚಾಹಲ್ ಪಾವತಿಸಲಿದ್ದಾರೆ.

Related Posts

Leave a Reply

Your email address will not be published. Required fields are marked *