ಶಿಕ್ಷಕಿ ಬೈದಿದ್ದಕ್ಕೆ ನೊಂದ ಆನೇಕಲ್ನ ಮರಸೂರು ಸರ್ಕಾರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮೊದಲು ಬಾಲಕಿ ಡೆತ್ನೋಟ್ ಬರೆದಿಟ್ಟಿದ್ದು, ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯಲ್ಲಿ ನಡೆದ ಘಟನೆ ತನಗೆ ಬಹಳ ನೋವು ತಂದಿದೆ. ತನ್ನ ಮೇಲೆ ಇಲ್ಲ ಸಲ್ಲದ ಅಪರಾಧ ಹೊ
ರಿಸಿದ್ದಾರೆ. ಈ ಅವಮಾನ ಸಹಿಸಿಕೊಂಡು ಬದುಕಲು ಆಗುತ್ತಿಲ್ಲ. ಮನಸ್ಸಿಗೆ ನೋವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಅಮ್ಮ, ಅಕ್ಕ, ತಂಗಿ ಮತ್ತು ತಮ್ಮ ಯಾರದ್ದು ತಪ್ಪಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನನ್ನು ಯಾರೂ ಬೈಯ್ಯಬೇಡಿ. ತನಗೆ ಈ ಭೂಮಿ ಮೇಲೆ ಬದುಕಲು ಆರ್ಹತೆ ಇಲ್ಲ. ಅಮ್ಮ ಮತ್ತು ಎಲ್ಲರೂ ನನ್ನನ್ನ ಕ್ಷಮಿಸಿ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ.
ಶಾಲಾ ವಾಹನಕ್ಕೆ ಸಿಲುಕಿ ಐದು ವರ್ಷದ ಮಗು ಸಾವು
ಬೆಂಗಳೂರು ಉತ್ತರ ತಾಲೂಕಿನ ದಾಸನಪುರದಲ್ಲಿ ಐದು ವರ್ಷದ ಮಗುವೊಂದು ಶಾಲಾ ವಾಹನದಡಿ ಸಿಲುಕಿ ಮೃತಪಟ್ಟಿದೆ. ಕಿಶೋರ್ ಹಾಗೂ ಮಧು ದಂಪತಿಯ ಪುತ್ರಿ ತನಿಷಾ ಮೃತಪಟ್ಟ ಮಗು.
ಶಾಲೆಯಿಂದ ಬಂದ ಹಿರಿಯ ಮಗಳು ಕನಿಕಾಳನ್ನು ಕರೆದುಕೊಂಡು ಬರಲು ತಾಯಿ ಹೋಗುವಾಗ ತನಿಷಾಳನ್ನು ಕರೆದೊಯ್ದಿದ್ದರು. ತಾಯಿ-ಮಗು ರಸ್ತೆಯಲ್ಲಿ ನಿಂತಿದ್ದಾಗ ವೇಗವಾಗಿ ಬರುತ್ತಿದ್ದ ಶಾಲಾ ವ್ಯಾನ್ಗೆ ಮಗು ಅಡ್ಡ ಹೋಗಿದೆ. ಜುಲೈ 0೮ರ ಸಂಜೆ ಈ ದುರಂತ ನಡೆದಿದೆ, ಇಂದು ಶುಕ್ರವಾರ ತನಿಷಾ ಹುಟ್ಟು ಹಬ್ಬವಿತ್ತು.


