Menu

ರಾಜ್ಯದಲ್ಲಿ ಪ್ರತಿದಿನ 67 ಜನ ನಾಪತ್ತೆ! ಹೊಣೆ ಯಾರು

ರಾಜ್ಯದಲ್ಲಿ ದಿನಕ್ಕೆ ಸರಾಸರಿ 67 ಜನರು ನಾಪತ್ತೆಯಾಗುತ್ತಿದ್ದಾರೆ. ಮಕ್ಕಳಿಗಿಲ್ಲ ರಕ್ಷಣೆ… ಹೆಣ್ಣುಮಕ್ಕಳಿಗಿಲ್ಲ ಭದ್ರತೆ… ಕರ್ನಾಟಕವನ್ನು ಅಪರಾಧಿಗಳ ಸ್ವರ್ಗವನ್ನಾಗಿ ಮಾಡಿದೆ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಟೀಕಿಸಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳು ರಾಜ್ಯದ ಭಯಾನಕ ವಾಸ್ತವವನ್ನು ಬಯಲಿಗೆಳೆದಿವೆ. ಇದು ಕೇವಲ ಅಂಕಿ-ಅಂಶಗಳ ವರದಿ ಅಲ್ಲ — ಸಾವಿರಾರು ಕುಟುಂಬಗಳ ಕಣ್ಣೀರು ಮತ್ತು ಆತಂಕದ ಕಥೆ ಎಂದು ಹೇಳಿದ್ದಾರೆ.

2022ರಲ್ಲಿ 1,110 ಇದ್ದ ಮಕ್ಕಳ ನಾಪತ್ತೆ ಪ್ರಕರಣಗಳು, 2024ರಲ್ಲಿ 1,879ಕ್ಕೆ ಏರಿಕೆ! ಅಂದರೆ ಸುಮಾರು 70% ಏರಿಕೆ.  2024ರಲ್ಲಿ ದಾಖಲೆ ಮಟ್ಟದ 15,420 ಮಹಿಳೆಯರು ನಾಪತ್ತೆ! ಹೆಣ್ಣುಮಕ್ಕಳ ಸುರಕ್ಷತೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ವರ್ಷವೊಂದರಲ್ಲೇ 551 ಮಕ್ಕಳನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆ ತಂದೆ-ತಾಯಿಗಳ ನೋವಿಗೆ @siddaramaiah ಹಾಗೂ ಗೃಹ ಸಚಿವ @DrParameshwara ಅವರ ಬಳಿ ಉತ್ತರ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಗ್ಯಾರೆಂಟಿಗಳ ಪ್ರಚಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುವ ಸರ್ಕಾರಕ್ಕೆ, ಜನರ ಜೀವ ಮತ್ತು ಮಹಿಳೆಯರ ಸುರಕ್ಷತೆ ಮಾತ್ರ ಆದ್ಯತೆಯೇ ಆಗಿಲ್ಲ. ಪೊಲೀಸ್ ಇಲಾಖೆಯನ್ನು ರಾಜಕೀಯ ದ್ವೇಷಕ್ಕೆ ಬಳಸುವುದನ್ನು ಬಿಟ್ಟು, ಅಪರಾಧ ನಿಯಂತ್ರಣಕ್ಕೆ ಬಳಸಿದ್ದರೆ ಇಂದು ಕರ್ನಾಟಕ ಈ ದುಸ್ಥಿತಿಗೆ ಬರುತ್ತಿರಲಿಲ್ಲ. ನಾಪತ್ತೆಯಾಗುತ್ತಿರುವ ಮಕ್ಕಳ ಹೊಣೆ ಯಾರು, ಹೆಣ್ಣುಮಕ್ಕಳ ಭದ್ರತೆ ಎಲ್ಲಿದೆ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಜನರ ಭದ್ರತೆಯನ್ನು ಕಾಪಾಡಲು ಸಂಪೂರ್ಣ ವಿಫಲವಾದ @INCKarnataka ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *