Menu

ಅಕ್ರಮ ಸಂಬಂಧ: ಜಾತ್ರೆಗೆ ಕರೆದೊಯ್ದು ಖಾನಾಪುರದ ಶಿಕ್ಷಕಿಯ ಕೊಲೆ

ಬೆಳಗಾವಿ ಖಾನಾಪುರ ತಾಲೂಕಿನ ನಂದಗಡದ ಅಂಗನವಾಡಿ ಶಿಕ್ಷಕಿ ಅಶ್ವಿನಿ ಪಾಟೀಲ್ (50) ಹತ್ಯೆ ಪ್ರಕರಣದ ಆರೋಪಿ ಶಂಕರ್ ಪಾಟೀಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ವಿನಿ ಪಾಟೀಲ್‌ ಮತ್ತು ಆರೋಪಿ ಅಕ್ರಮ ಸಂಬಂಧ ಹೊಂದಿದ್ದರು. ಆಕೆ ಶಂಕರ್‌ ಪಾಟೀಲ್‌ಗೆ ನೀಡಿದ್ದ ಐದು ಲಕ್ಷ ರೂ. ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಕೊಂದೇ ಬಿಟ್ಟಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ. ಸಾಲವಾಗಿ ಪಡೆದ ಹಣವನ್ನು ವಾಪಸ್ ಕೇಳಿದ ಕಾರಣಕ್ಕೆ ಕೊಲೆ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.