Menu

ಶಾಸಕ ಪ್ರದೀಪ್​​ ಈಶ್ವರ್‌ಗೆ ಜಾಮೀನು ರಹಿತ ವಾರಂಟ್‌

ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪ್ರದೀಪ್‌ ಈಶ್ವರ್‌ ತನ್ನ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆಂದು ಮಾನನಷ್ಟ ಕೇಸ್‌ ದಾಖಲಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್​ ಈ ಆದೇಶ ಹೊರಡಿಸಿದೆ.

ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಮಾನನಷ್ಟ ಕೇಸ್ ದಾಖಲಿಸಿದ್ದರು. ಈ ಕೇಸ್‌ ವಿಚಾರಣೆಗೆ ಶಾಸಕ ಪ್ರದೀಪ್​ ಈಶ್ವರ್​​ ಹಾಗೂ ಅವರ ವಕೀಲರು ಹಾಜರಾಗಿಲ್ಲ. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್​ ಜಾರಿ ಮಾಡಿದೆ. ನ್ಯಾ. ಸಂದೀಪ್ ಪಾಟೀಲ್‌ ಪೀಠದಲ್ಲಿ ಈ ಆದೇಶ ಹೊರಡಿಸಿ ಸೆಪ್ಟೆಂಬರ್​​ 7ಕ್ಕೆ ವಿಚಾರಣೆ ನಿಗದಿಗೊಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಪ್ರತಾಪ್‌ ಸಿಂಹ ಮತ್ತು ಶಾಸಕ ಪ್ರದೀಪ್​ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪ್ರದೀಪ್​ ಅವರು ಪ್ರತಾಪ್​ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರತಾಪ್​ ಸಿಂಹ ಅವರು ಪ್ರದೀಪ್​ ಈಶ್ವರ್​ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಕೇಸ್‌ ವಿಚಾರಣೆ ವೇಳೆ ಪ್ರದೀಪ್​ ಈಶ್ವರ್​ ಹಾಗೂ ಅವರ ವಕೀಲರು ಗೈರಾಗಿದ್ದರಿಂದ ಕೋರ್ಟ್‌, ಪ್ರದೀಪ್​ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರೆಂಟ್​ ಜಾರಿಗೊಳಿಸಿದೆ.

Related Posts

Leave a Reply

Your email address will not be published. Required fields are marked *