ರಾಜ್ಯಾದ್ಯಂತ ಮೇ ಆರರಿಂದ ಭಾರಿ ಮಳೆಯಾಗಲಿದೆ, ಬೆಂಗಳೂರು ಸೇರಿ 12 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಭಾನುವಾರ (ಇಂದು) ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದು ಮಳೆಯಾಗಲಿದೆ.
ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಕೋಲಾರ, ವಿಜಯನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೇ ಆರರಿಂದ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಹೊನ್ನಾಳಿ, ದಾವಣಗೆರೆ, ಚಿಕ್ಕಮಗಳೂರು, ಟಿಜಿ ಹಳ್ಳಿ, ಸೋಮವಾರಪೇಟೆ, ಹಿರೇಕೆರೂರು, ತ್ಯಾಗರ್ತಿ, ಹರಪನಹಳ್ಳಿ, ನಾಯಕರಹಟ್ಟಿ, ದಾವಣಗೆರೆ, ನಾಗಮಂಗಲ, ಹಗರಿಬೊಮ್ಮನಹಳ್ಳಿ, ಗಂಗಾವತಿ, ಮುನಿರಾಬಾದ್, ಬೆಳ್ತಂಗಡಿ, ಸುಳ್ಯ, ತರೀಕೆರೆ, ಕಳಸ, ಕುಣಿಗಲ್, ಶೃಂಗೇರಿ, ಎಚ್ಡಿಕೋಟೆ, ಬೆಂಗಳೂರು ಜಿಕೆವಿಕೆ, ಬೆಂಗಳೂರು ಕೆಐಎಎಲ್, ಜಗಳೂರು, ಶಿಗ್ಗಾಂವ್, ಯಲಬುರ್ಗಾ, ಕುಷ್ಟಗಿ, ಸಿಂಧನೂರು, ಮಾನ್ವಿ, ಎಂಎಂ ಹಿಲ್ಸ್, ಜಯಪುರ, ಮಿಡಿಗೇಶಿ, ಹುಂಚದಕಟ್ಟೆ, ಮಧುಗಿರಿ, ಮಾಗಡಿ, ಕೊಟ್ಟಿಗೆಹಾರ, ಅರಕಲಗೂಡಿನಲ್ಲಿ ಮಳೆಯಾಗಿದೆ.