Menu

ಪ್ರಧಾನಿ ಮೋದಿ ವೀಡಿಯೊಗೆ ತಾತ್ಕಾಲಿಕ ನಿರ್ಬಂಧ: ಮೆಟಾ ಕ್ಷಮೆ ಯಾಚನೆ

ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೊ ಸಂದೇಶವೊಂದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದಕ್ಕೆ ತಂತ್ರಜ್ಞಾನ ದಿಗ್ಗಜ ಮೆಟಾ ಭಾರತ ಸರ್ಕಾರದ ಬಳಿ ಕ್ಷಮೆ ಯಾಚಿಸಿದೆ. ಈ ದಿಢೀರ್
ನಿರ್ಬಂಧಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ತಿಳಿಸಿರುವ ಕಂಪನಿಯು, ವಿಷಯವನ್ನು ತಪ್ಪಾಗಿ ತೆಗೆದುಹಾಕಲಾಗಿದ್ದು,  ಅದನ್ನು ಸಂಪೂರ್ಣ ಮರುಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಜುಲೈ 23 ರಂದು ಅಪ್‌ಲೋಡ್ ಮಾಡಲಾಗಿದ್ದ ಈ ವೌಡಿಯೊದಲ್ಲಿ, ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗಳ ಮಧ್ಯೆ ಪ್ರಧಾನಿ ಮೋದಿ ಅವರು ಜೆನ್-ಜಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದ ಈ ಸೆಲ್ಫಿ ಶೈಲಿಯ ವಿಡಿಯೊದಲ್ಲಿ ಪ್ರಧಾನಿಯವರು  ಯುವಕರ ಕಳಕಳಿಗೆ ನೇರವಾಗಿ ಸ್ಪಂದಿಸಿ, ಪರೀಕ್ಷಾ ವಂಚನೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದರು.

ನೀಟ್ ಹಗರಣವನ್ನು ತಡೆಯಲು ಮುಂಬರುವ ಕಠಿಣ ಕ್ರಮಗಳ ಕುರಿತು ಅವರು ಮಾತನಾಡಿದರು. ಕಠಿಣ ಕಾನೂನು  ರೂಪಿಸುವುದು, ವಿಶೇಷ ವೇಗದ ನ್ಯಾಯಾಲಯಗಳನ್ನು (ಫಾಸ್ಟ್-ಟ್ರಾಕ್ ಕೋರ್ಟ್) ಪರಿಚಯಿಸುವುದು ಮತ್ತು ಸಂಸತ್ತಿಗೆ ತರುವ ಮುನ್ನ ಹೊಸ ಪೇಪರ್ ಲೀಕ್ ವಿರೋಧಿ ಮಸೂದೆಯನ್ನು ಕೇಂದ್ರ ಸಂಪುಟದ ಮುಂದೆ ಮಂಡಿಸುವುದಾಗಿ ಅವರು ತಿಳಿಸಿದ್ದಾರೆ.

ವೀಡಿಯೊ ಮರುಸ್ಥಾಪನೆಗೊಳ್ಳುವ ಮೊದಲು, ಭಾರತದಲ್ಲಿ ಇದನ್ನು ವೀಕ್ಷಿಸಲು ಪ್ರಯತ್ನಿಸಿದ ಬಳಕೆದಾರರಿಗೆ ಕಾನೂನುಬದ್ಧ ವಿನಂತಿಯ ಮೇರೆಗೆ ಈ ವಿಷಯವನ್ನು ಸ್ಥಳೀಯವಾಗಿ ತಡೆಹಿಡಿಯಲಾಗಿದೆ ಎಂಬ ಸೂಚನೆ
ಕಾಣಿಸಿಕೊಂಡಿತ್ತು. ಇದು ಆನ್‌ಲೈನ್‌ನಲ್ಲಿ ತೀವ್ರ ರಾಜಕೀಯ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ದೇಶದ ನಾಯಕತ್ವದ ಅಧಿಕೃತ ಸಂವಹನಗಳನ್ನು ಸೆನ್ಸಾರ್ ಮಾಡಲು ವಿದೇಶಿ ಸಾಮಾಜಿಕ ಜಾಲತಾಣಗಳು ಯತ್ನಿಸುತ್ತಿವೆ ಎಂದು ಹಲವಾರು  ಆಡಳಿತ ಪಕ್ಷದ ನಾಯಕರು ಟೀಕಿಸಿದ್ದರು.

ಆಂತರಿಕ ಮೂಲಗಳ ಪ್ರಕಾರ, ಭಾರತ ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಮತ್ತು ಇನ್‌ಸ್ಟಾಗ್ರಾಮ್‌ನ ಜಾಗತಿಕ ಮುಖ್ಯಸ್ಥರನ್ನು ಕರೆಸಿ ಅಧಿಕೃತ ವಿವರಣೆ ನೀಡುವಂತೆ ಸೂಚಿಸಿದೆ ಎಂದು ವರದಿಯಾಗಿದೆ. ಈ ದೋಷದ ಹಿಂದಿನ ಪರಿಸ್ಥಿತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಮತ್ತು ಪ್ರಧಾನಿ ಕಚೇರಿಯ ಅಧಿಕೃತ ಪ್ರಮುಖ ಸಂದೇಶವನ್ನು ಹೇಗೆ ತಪ್ಪಾಗಿ ಫಿಲ್ಟರ್ ಮಾಡಲಾಗಿದೆ ಎಂಬುದನ್ನು ಪರಾಮರ್ಶಿಸುತ್ತಿದ್ದಾರೆ.

ತೆಗೆದುಹಾಕುವಿಕೆಯು ಉದ್ದೇಶಪೂರ್ವಕ ನೀತಿ ಜಾರಿ ಕ್ರಮವಲ್ಲದೆ ಸಂಪೂರ್ಣವಾಗಿ ತಾಂತ್ರಿಕ ವೇದಿಕೆಯ ದೋಷವಾಗಿದೆ ಎಂದು ಮೆಟಾ ಸಮರ್ಥಿಸಿಕೊಂಡಿದ್ದರೂ, ಈ ಘಟನೆಯು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಜಾಗತಿಕ ತಂತ್ರಜ್ಞಾನ ಕಂಪನಿಗಳ ಪಾರದರ್ಶಕತೆ, ಜವಾಬ್ದಾರಿ ಮತ್ತು ಸ್ವಯಂಚಾಲಿತ ವಿಷಯ ನಿಯಂತ್ರಣ ವ್ಯವಸ್ಥೆಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Related Posts

Leave a Reply

Your email address will not be published. Required fields are marked *