2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ ) ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ 22 ಮಂದಿ ಆ ಬಾರಿ ಯುಪಿಎಸ್ಸಿಗೆ ಆಯ್ಕೆಯಾಗಿದ್ದಾರೆ. ಕಿರಣ್ ಕಮಟೆ ದೇಶದಲ್ಲಿ 53ನೇ ರ್ಯಾಂಕ್ ಗಳಿಸಿ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಒಟ್ಟು 958 ಅಭ್ಯರ್ಥಿಗಳನ್ನು ಐಎಎಸ್, ಐಪಿಎಸ್, ಐಎಫ್ಎಸ್ ಸೇರಿದಂತೆ ಇತರ ಕೇಂದ್ರ ಸೇವೆಗಳಿಗೆ ಮಾಡಲಾಗಿದೆ. ಅನುಜ್ ಅಗ್ನಿಹೋತ್ರಿ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ರಾಜ್ಯದ ಕಿರಣ್ ಕಮತೆ 53 ರ್ಯಾಂಕ್, ಸಂದೀಪ್ ಬಡದ್ 82, ಶ್ರೇಯಸ್ ಗೋಮೇಶ್ 169, ಚಿನ್ಮಯಿ ಪಿ. 310, ಮನೋಜ್ ಜಿ.ಎಸ್ 389, ಎ. ಮಧು 436, ವರುಣ್ ಗೌಡ ಪಿ.462, ನಿವೇದಿತಾ ಸಿ. ಭಾವಿಮಣಿ 469, ವಿಶಾಕಾ ಕದಂ 504, ಸೂರಜ್ ಕೆ.ಎಲ್ 525, ಧನಂಜಯ ಆರ್ 554, ಉಲ್ಲಾಸ್ ಎಂ.ಎಸ್ 556, ಮುತ್ತೇಶ್ ಗೌಡ ಎ.ಎಸ್ 622, ಸಾಗರ್ ಎ 641, ಪಾಂಡುರಂಗ ಎಸ್. ಕಂಬಳಿ 660, ಚಂದನ್ ವೈ 661, ಬಸವರಾಜ ಎಂ. ಜವಳಿ 664, ಪ್ರವೀಣ್ ಹೆಚ್.ಟಿ ೭೨೦, ಯತೀಶ್ ಎಂ.ಎ 732, ಬಸವರಾಜ ಎಂ. ಪಾಟೀಲ್ 739, ಅನಿರುದ್ಧ ಕಟ್ಟೀಮನಿ 786 ಚಂದ್ರಶೇಖರ್ 880 ರ್ಯಾಂಕ್ ಗಳಿಸಿದ್ದಾರೆ.


