Menu

ಹೂಣಸೂರು ದರೋಡೆ ಪ್ರಕರಣ: ಬಿಹಾರ ಮೂಲದ ಇಬ್ಬರು ಅರೆಸ್ಟ್

hunasuru

ಮೈಸೂರು: ಹುಣಸೂರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರೂ ಡಕಾಯಿತಿ ಚೋರರನ್ನು ಪತ್ತೆ ಹಚ್ಚಿದ್ದು, ಇನ್ನೂ ಹತ್ತಕ್ಕೂ ಹೆಚ್ಚಕ್ಕೂ ಮಂದಿಯ ಶೋಧ ಕಾರ್ಯ ಮುಂದುವರೆಸಿದ್ದಾರೆ‌.

ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಿ.28ರಂದು ಹುಣಸೂರು ಪಟ್ಟಣದಲ್ಲಿ 2 ಗಂಟೆ 4 ನಿಮಿಷದ ಸಮಯದಲ್ಲಿ 5 ಮಂದಿ ಮುಸುಕುಧಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ಬಂದು 8 ಕೆಜಿ 10 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದು, ದರೋಡೆ ಪ್ರಕರಣ ದಾಖಲಾಗಿತ್ತು. ಐಜಿಪಿ ಬೋರಲಿಂಗಯ್ಯ ಮಾರ್ಗದರ್ಶನ ಹಾಗೂ ಹಿಂದಿನ ಎಸ್ಪಿ ವಿಷ್ಣು ವರ್ಧನ್ ಕಾರ್ಯಾಚರಣೆಗೆ ಇಳಿದು ಐದು ತಂಡವಾಗಿ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಅಂದಿನಿಂದಲೂ ಅಡಿಷನಲ್  ಎಸ್ಪಿ ನಾಗೇಶ್ ನೇತೃತ್ವದಲ್ಲಿ ಐದು ತಂಡ ತನಿಖೆ ಕೈಗೊಂಡಿದ್ದರು.

ಯಾರು ಮೊಬೈಲ್ ಬಳಸದ ಹಿನ್ನೆಲೆಯಲ್ಲಿ ದರೋಡೆ ಪ್ರಕರಣ ಬೇಧಿಸಲು ಕಷ್ಟವಾಗಿತ್ತು. ಹೊರ ರಾಜ್ಯದವರು ಭಾಗಿಯಾಗಿರುವುದಾಗಿ ಬಿಹಾರ ಸೇರಿ ಇತರೆ ರಾಜ್ಯಗಳಲ್ಲಿ ಎರಡು ವಾರದಿಂದ ಶೋಧ ಕಾರ್ಯ ನಡೆಸಿದ್ದೇವು. ಈ ವೇಳೆ ಅಲ್ಲಿಯ ಪೊಲೀಸರ ಸಹಾಯದಿಂದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದೇವೆ. ದೆಹಲಿ ಜೇತ್ ಪುರ್ ಜಿಲ್ಲೆಯ ಹರಿನಗರ ಬಡಾವಣೆಯ ರಿಷಿಕೇಶ್ ಕುಮಾರ್ ಸಿಂಗ್( ವಿಜಯಕುಮಾರ್ ಸಿಂಗ್) ಹಾಗೂ ಬಿಹಾರದ ಬಾಗಲ್ ಪುರ ಜಿಲ್ಲೆಯ ಪಂಕಜ್ ಕುಮಾರ್ ( ರಾಮನಾಥ್ ಪ್ರಸಾದ್ ಸಿಂಗ್) ವಶಕ್ಕೆ ಪಡೆದಿದ್ದೇವೆಂದರು.

ಈ ಪೈಕಿ ಪಂಕಜ್ ಕುಮಾರ್ ಡಕಾಯಿತಿಗೆ ಸ್ಕೇಚ್ ಹಾಕಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಬಂದಿತರಿಂದ 92 ಸಾವಿರ 12.5 ಗ್ರಾಂ ಚಿನ್ನ, ಒಂದು ಬುಲೆಟ್ ಬೈಕ್ ವಶ ಪಡಿಸಿಕೊಂಡಿದ್ದೇವೆ. 8 ಕೆಜಿಕ್ಕಿಂತಲೂ ಹೆಚ್ಚು ಚಿನ್ನಾಭರಣ ದೋಚಿದ್ದರು. ಇಷ್ಟೊಂದು ಪ್ರಮಾಣದ ಚಿನ್ನ ವಶಕ್ಕೆ ಪಡೆಯುವುದೇ ಮುಖ್ಯವಾಗಿದೆ. ಅದು ಎಲ್ಲಿ ಹೋಗಿದೆ. ಇದರಲ್ಲಿ ಭಾಗಿಯಾಗಿರುವ 10 ಕ್ಕೂ ಹೆಚ್ಚು ಮಂದಿಯ ಹುಡುಕಾಟದಲ್ಲಿ ತಂಡ ನಿರತವಾಗಿದೆ ಎಂದರು.

ಬಂಧಿತರಲ್ಲಿ ಪಂಕಜ್ ಸಿಂಗ್ ಹಿಂದೆಯೂ 27 ಕೊಲೆ, ಕಳವು ಪ್ರಕರಣಗಳಲ್ಲಿ ಭಾಗಯಾಗಿದ್ದನು. ಚೋಟು ಸಿಂಗ್ 4 ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇವರೂ ಕಳ್ಳತನವನ್ನೇ ಗುರಿಯಾಗಿಸಿಕೊಂಡಿದ್ದು, ಕಳವಿಗೆ ಸೂಕ್ತ ಜಾಗ ನೋಡುತ್ತಾರೆ. ಈ ಘಟನೆಗೂ ಮುನ್ನ ಹಾಸನ, ತುಮಕೂರು, ಕೊಡಗಿನಲ್ಲಿಯೂ ಹೊಂಚು ಹಾಕಿದ್ದರು. ಅಂತಿಮವಾಗಿ ಹುಣಸೂರು ಅಂಗಡಿ ಆಯ್ಕೆ ಮಾಡಿಕೊಂಡರು. ಯಾವ ಕಾರಣಕ್ಕೆ ಆ ಅಂಗಡಿ ಆಯ್ಕೆ ಮಾಡಿಕೊಂಡರು ಎಂಬಿತ್ಯಾದಿ ಅಂಶ ಪೂರ್ಣ ತನಿಖೆಯಿಂದಷ್ಟೇ ಹೊರಬರಬೇಕಿದೆ. ಉಳಿದ ಮಾಲು ಸಹ ವಶಕ್ಕೆ ಪಡೆಯಬೇಕಿದೆ ಎಂದರು.

ಇನ್ನೂ 10ಕ್ಕೂ ಹೆಚ್ಚು ಮಂದಿ ಆರೋಪಿಗಳಿರುವ ಸಂಶಯವಿದೆ. ವಿಡಿಯೋದಲ್ಲಿನ ಮುಖ ಚಹರೆ ಹಾಗೂ ಇವರ ಮೇಲಿನ ಹಳೆಯ ಪ್ರಕರಣಗಳಿಂದ ಇವರನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಸದರಿ ಗ್ಯಾಂಗ್ ಜೈಲಿನಲ್ಲಿ ಬೇರೆ ಬೇರೆ ಆರೋಪಿತರ ಸಂಪರ್ಕ ಆಗಿರಬಹುದು ಎಂಬಿತ್ಯಾದಿ ಸಂಶಯವಿದೆ. ಎಲ್ಲರ ಬಂಧನ ಬಳಿಕ‌ ಅದು‌ ತಿಳಿಯಲಿದೆ. ಕೇರಳ, ಆಂದ್ರ ಪ್ರದೇಶದಲ್ಲಿಯೂ ಇಂತಹ

ಡಕಾಯಿತು ಪ್ರಕರಣಗಳು ನಡೆದಿವೆ. ಕೆಲವು ಪ್ರಕರಣ ಇದುವರೆಗೂ ಪತ್ತೆ ಮಾಡಲಾಗಿಲ್ಲ. ಇನ್ನೂ ಕೆಲವು ಪ್ರಕರಣಗಳಲ್ಲಿ ಪೂರ್ಣ ಆರೋಪಿಗಳ ಬಂದಿಸಲಾಗಿಲ್ಲ. ಹೀಗಿರುವಾಗ ರಾಜ್ಯದಲ್ಲಿ ನಡೆಸಿದ ಮೊದಲ ಪ್ರಯತ್ನದಲ್ಲೇ ನಮ್ಮ ಪೊಲೀಸರ ತಂಡ ಅವರನ್ನು ಪತ್ತೆ ಹಚ್ಚಿದ್ದು, ಉಳಿದವರನ್ನು ಶೀಘ್ರ ಬಂದಿಸಲಿದ್ದೇವೆಂದರು.

ಘಟನೆಗೂ ಮುನ್ನ ಮೂರು ನಾಲ್ಕು ದಿನಗಳಿಂದ‌‌ ಸ್ಥಳೀಯ ಲಾಡ್ಜ್ ಗಳಲ್ಲಿ ಸುಳ್ಳು ಆಧಾರ್, ಮೊಬೈಲ್ ನಂಬರ್ ನೀಡಿ ವಾಸ್ತವ್ಯ ಹೂಡಿದ್ದರು. ಇವರ ಸೆರೆಹಿಡಿಯಲು 50 ಮಂದಿಯ ಪೊಲೀಸರ ತಂಡ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು. ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಪರ ಪೊಲೀಸ್ ಅಧೀಕ್ಷಕ ಎಲ್. ನಾಗೇಶ್, ಸಿ. ಮಲ್ಲಿಕ್, ಹುಣಸೂರು ಉಪವಿಭಾಗದ ಡಿವೈಎಸ್ ಪಿ ರವಿ ಡಿವೈಎಸ್‌ಪಿ,

ಸೈಬರ್ ಠಾಣೆ ಡಿಎಸ್ ಪಿ ಶ್ರೀಕಾಂತ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಆರ್. ಸಂತೋಷ್ ಕಶ್ಯಪ್, ದೀಪಕ್, ಪುನೀತ್ ಪ್ರಸನ್ನಕುಮಾರ್, ಗಂಗಾಧರ್, ಎಸ್.ಪಿ.ಸುನೀಲ್, ಪಿ.ಎಸ್‌.ಐ.ಗಳಾದ ಅಜಯ್ ಕುಮಾರ್,ಜಗದೀಶ, ರವಿ ಕುಮಾರ್, ಚಂದ್ರಹಾಸ ನಾಯಕ, ಸಿಬ್ಬಂದಿಗಳಾದ ಎಚ್.ಎನ್.ಅರುಣ ಹೆಚ್.ಎನ್, ಆರ್. ಪ್ರಭಾಕರ, ಶ್ರೀನಿವಾಸ್ ಪ್ರಸಾದ್, ಡಿ.

ಎ. ಇರ್ಫಾನ್, ವಿಜಯ್ ಪವಾರ್, ಸತೀಶ್, ಪುನೀತ್, ಚಂದು, ಮಹೇಂದ್ರ ಸಂಜಯ್ ಹಾಗೂ ಜಿಲ್ಲಾ ಬೆಕ್ನಿಕಲ್ ವಿಭಾಗದ ಎ.ಎಸ್.ಐ ವಸಂತ್ ಕುಮಾರ್, ಲೋಕೇಶ್, ಪೀರ್ ಖಾನ್, ಸುನಿತಾ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *