ಭಾರತದ ವೈದ್ಯಕೀಯ ಕ್ಷೇತ್ರವು ತೀವ್ರ ಗತಿಯಲ್ಲಿ ಕುಸಿಯುತ್ತಿದೆ ಎಂಬುದನ್ನು ಸಂಸತ್ತಿನ ಸಮಿತಿಯೇ ಒಪ್ಪಿಕೊಂಡಿದ್ದು, ಬಹುತೇಕ ಈ ಕ್ಷೇತ್ರ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗದು. Zee News ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ, ಭಾರತದಲ್ಲಿ ನಡೆಯುವ ಒಟ್ಟು ಶಸ್ತ್ರಚಿಕಿತ್ಸೆಗಳಲ್ಲಿ ಸುಮಾರು 44% ಶಸ್ತ್ರಚಿಕಿತ್ಸೆಗಳು ನಕಲಿ, ಅನಗತ್ಯ ಅಥವಾ ಸುಳ್ಳು ಆಗಿವೆ. ನಡೆಯುವ ಅರ್ಧದಷ್ಟು ಶಸ್ತ್ರಚಿಕಿತ್ಸೆಗಳು ರೋಗಿಗಳಿಂದ ಅಥವಾ ಸರ್ಕಾರಿ ವಿಮೆಯಿಂದ ಹಣ ಕಸಿಯಲು ಮಾತ್ರ ನಡೆಯುತ್ತಿವೆ.
ದೇಶದ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ 55% ಹೃದಯ ಶಸ್ತ್ರಚಿಕಿತ್ಸೆಗಳು, 48% ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗಳು (ಹಿಸ್ಟರೆಕ್ಟಮಿ), 47% ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು, 48% ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆಗಳು, 45% ಸೀಸೇರಿಯನ್ ಡೆಲಿವರಿಗಳು, ಅನೇಕ ಭುಜ ಮತ್ತು ಬೆನ್ನು ಶಸ್ತ್ರಚಿಕಿತ್ಸೆಗಳು ಅನಗತ್ಯ ಅಥವಾ ನಕಲಿ ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ಹಲವು ಪ್ರತಿಷ್ಠಿತ ಆಸ್ಪತ್ರೆಗಳ ಸಮೀಕ್ಷೆಯಲ್ಲಿ, ದೊಡ್ಡ ಆಸ್ಪತ್ರೆಗಳ ಹಿರಿಯ ವೈದ್ಯರು ತಿಂಗಳಿಗೆ ₹1 ಕೋಟಿ ವರೆಗೆ ಸಂಬಳ ಪಡೆಯುತ್ತಿದ್ರುದಾರೆ, ಕಾರಣ ಅನಗತ್ಯ ಟೆಸ್ಟ್ಗಳು, ಚಿಕಿತ್ಸೆಗಳು, ದಾಖಲುಗಳು ಅಥವಾ ಶಸ್ತ್ರಚಿಕಿತ್ಸೆಗಳಿಗೆ ರೋಗಿಗಳನ್ನು ಒತ್ತಾಯಿಸುವ ವೈದ್ಯರು ಹೆಚ್ಚು ಹಣ ಗಳಿಸುತ್ತಾರೆ.
BMJ Global Health
ಇದೇ ರೀತಿ ಟೈಮ್ಸ್ ಆಫ್ ಇಂಡಿಯಾ ಹಲವು ಪ್ರಕರಣಗಳನ್ನು ವರದಿ ಮಾಡಿದೆ, ಸತ್ತ ರೋಗಿಗಳನ್ನು ಜೀವಂತರೆಂದು ತೋರಿಸಿ ಚಿಕಿತ್ಸೆ ನೀಡಿದಂತೆ ತೋರಿಸಿ ಹಣ ವಸೂಲಿ ಮಾಡಲಾಗಿದೆ ಎಂದು ಹೇಳಿದೆ. ಒಂದು ಪ್ರಸಿದ್ಧ ಆಸ್ಪತ್ರೆಯಲ್ಲಿ, 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದರೂ ಜೀವಂತನಿದ್ದಾನೆ ಎಂದು ತೋರಿಸಿ ಒಂದು ತಿಂಗಳ ಕಾಲ ವೆಂಟಿಲೇಟರ್ನಲ್ಲಿ ಇಟ್ಟು, ನಂತರ ಸತ್ತಿದ್ದಾನೆಂದು ಘೋಷಿಸಲಾಯಿತು. ದೂರುಗಳ ಬಳಿಕ ಆಸ್ಪತ್ರೆ ತಪ್ಪಿತಸ್ಥವೆಂದು ತೀರ್ಪು ಬಂದು ₹5 ಲಕ್ಷ ಪರಿಹಾರ ನೀಡಿತು. ಅಲ್ಲಿಗೆ ಮುಗಿಯಿತು.
ಅನೇಕ ಸಂದರ್ಭಗಳಲ್ಲಿ ಮೃತಪಟ್ಟ ರೋಗಿಗಳ ಮೇಲೆ ನಕಲಿ “ತುರ್ತು ಶಸ್ತ್ರಚಿಕಿತ್ಸೆ” ನಡೆಸಲಾಗುತ್ತದೆ. ಕುಟುಂಬದಿಂದ ತಕ್ಷಣ ಹಣ ಕೇಳಲಾಗುತ್ತದೆ, ನಂತರ “ಶಸ್ತ್ರಚಿಕಿತ್ಸೆ ವೇಳೆ ರೋಗಿ ಮೃತಪಟ್ಟರು” ಎಂದು ಹೇಳಲಾಗುತ್ತದೆ. ಆಸ್ಪತ್ರೆ ಪೂರ್ಣ ಶಸ್ತ್ರಚಿಕಿತ್ಸೆಯ ಶುಲ್ಕ ವಸೂಲಿ ಮಾಡುತ್ತದೆ.
(ಮೂಲ: “Dissenting Diagnosis” – ಡಾ. ಗಾಡ್ರೆ & ಶುಕ್ಲಾ)
ಮೆಡಿಕ್ಲೇಮ್ ವಂಚನೆ ಎಂಬುದು ಭಯಾನಕ ಜಾಲವಾಗಿದೆ. ಭಾರತದಲ್ಲಿ 68% ಜನರಿಗೆ ವೈದ್ಯಕೀಯ ವಿಮೆ ಇದೆ, ಅಗತ್ಯದ ಸಮಯದಲ್ಲಿ ಹೆಚ್ಚಿನ ಕ್ಲೈಮ್ಗಳನ್ನು ತಿರಸ್ಕರಿಸಲಾಗುತ್ತದೆ ಅಥವಾ ಭಾಗಶಃ ಪಾವತಿಸಲಾಗುತ್ತದೆ. ಪರಿಣಾಮವಾಗಿ ಕುಟುಂಬಗಳು ಭಾರೀ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ.
ಪ್ರಮುಖ ವಿಮಾ ಕಂಪನಿಗಳು 3,000ಕ್ಕೂ ಹೆಚ್ಚು ಪ್ರಸಿದ್ಧ ಆಸ್ಪತ್ರೆಗಳನ್ನು ಸುಳ್ಳು ಕ್ಲೈಮ್ಗಳಿಗಾಗಿ ಬ್ಲ್ಯಾಕ್ಲಿಸ್ಟ್ ಮಾಡಿವೆ. ಕೋವಿಡ್ ಅವಧಿಯಲ್ಲಿ ಅನೇಕ ದೊಡ್ಡ ಆಸ್ಪತ್ರೆಗಳು ನಕಲಿ ಕೋವಿಡ್ ಪ್ರಕರಣಗಳಿಗೆ ವಿಮಾ ಹಣ ಪಡೆದುಕೊಂಡಿವೆ.
ಇದರ ಜೊತೆಗೆ ಮಾನವ ಅಂಗಾಂಗ ಕಳ್ಳಸಾಗಣೆ ಜಾಲವೂ ಕಾರ್ಯನಿರ್ವಹಿಸುತ್ತಿದೆ.
ಇಂಡಿಯನ್ ಎಕ್ಸ್ಪ್ರೆಸ್ 2019ರ ವರದಿಯಲ್ಲಿ ಕಾನ್ಪುರದ ಸಂಗೀತಾ ಕಶ್ಯಪ್ ಎಂಬ ಮಹಿಳೆಯನ್ನು ದೆಹಲಿಗೆ ಉದ್ಯೋಗ ಸಂದರ್ಶನಕ್ಕೆ ಕರೆಸಿ, ನೇಮಕಾತಿಗೆ ಮೊದಲು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು. ಆಸ್ಪತ್ರೆಯಲ್ಲಿ ಇದ್ದಾಗ “ಡೋನರ್ಗಳು” ಎಂದು ವೈದ್ಯರು ಮಾತನಾಡುತ್ತಿರುವುದನ್ನು ಕೇಳಿ ಅನುಮಾನಗೊಂಡು ಅಲ್ಲಿಂದ ಓಡಿ ಹೋದಳು. ಆಕೆಯನ್ನು ಕರೆತಂದ ಸ್ನೇಹಿತ ₹50,000 ಬೇಡಿಕೆ ಇಟ್ಟು ಬೆದರಿಸಿದನು. ಪೊಲೀಸರಿಗೆ ದೂರು ನೀಡಿದ ನಂತರ ತನಿಖೆಯಲ್ಲಿ ಪೊಲೀಸರು, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿರುವ ಬಹುಕೋಟಿ ಅಂತರರಾಷ್ಟ್ರೀಯ ಅಂಗಾಂಗ ಕಳ್ಳಸಾಗಣೆ ರಾಕೆಟ್ ಬಯಲಾಗಿತ್ತು.
ಮತ್ತೊಂದು ವಂಚನೆ “Hospital Referral Scam”. ವೈದ್ಯರು ರೋಗಿಗಳಲ್ಲಿ ಗಂಭೀರ ಕಾಯಿಲೆಯಿದೆ ಎಂದು ಹೇಳಿ ದೊಡ್ಡ ಬ್ರ್ಯಾಂಡ್ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಾರೆ ,ಇದು ಪ್ರತಿ ರೋಗಿಗೆ ಹಣ ನೀಡುವ ರೆಫರಲ್ ಯೋಜನೆಯ ಭಾಗವಾಗಿರುತ್ತದೆ.
ಮುಂಬೈನ ಪ್ರಸಿದ್ಧ ಆಸ್ಪತ್ರೆ ಒಮ್ಮೆ ಬಹಿರಂಗವಾಗಿ ಜಾಹೀರಾತು ನೀಡಿತ್ತು, ವರ್ಷಕ್ಕೆ 40 ರೋಗಿಗಳನ್ನು ಕಳುಹಿಸಿದರೆ ₹1 ಲಕ್ಷ, 50 ರೋಗಿಗಳಿಗೆ ₹1.5 ಲಕ್ಷ, 75 ರೋಗಿಗಳಿಗೆ ₹2.5 ಲಕ್ಷ ರೂ. ರೋಗಿಗಳಿಗೆ ನಿಜವಾಗಿಯೂ ಕಾಯಿಲೆಯಿದೆಯೇ ಇಲ್ಲವೇ ಎಂಬುದು ಅಲ್ಲಿನ ವಿಷಯ ಆಗಿರಲಿಲ್ಲ.
“Diagnosis Scam” ಮತ್ತೊಂದು ದೊಡ್ಡ ವಂಚನೆ
ಬೆಂಗಳೂರಿನ ಕೆಲವು ಪ್ರಸಿದ್ಧ ಪಥಾಲಜಿ ಲ್ಯಾಬ್ಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಯಲ್ಲಿ ₹100 ಕೋಟಿಗೂ ಹೆಚ್ಚು ನಗದು ಮತ್ತು 3.5 ಕೆಜಿ ಚಿನ್ನ (ವೈದ್ಯರ ಕಮಿಷನ್ಗಾಗಿ ಇಡಲಾಗಿದ್ದದ್ದು) ಪತ್ತೆಯಾಯಿತು. ವೈದ್ಯರು ಅನಗತ್ಯ ಟೆಸ್ಟ್ಗಳಿಗೆ ರೋಗಿಗಳನ್ನು ಕಳುಹಿಸಿ 40–50% ಕಮಿಷನ್ ಪಡೆಯುತ್ತಾರೆ. ಅನೇಕ ಲ್ಯಾಬ್ಗಳು ಕೇವಲ 1–2 ಟೆಸ್ಟ್ ಮಾಡಿ, ಉಳಿದ ವರದಿಗಳನ್ನು ಸುಳ್ಳಾಗಿ ತಯಾರಿಸುತ್ತವೆ. ಭಾರತದಲ್ಲಿ ಸುಮಾರು 2 ಲಕ್ಷ ಲ್ಯಾಬ್ಗಳಿದ್ದು, ಅವುಗಳಲ್ಲಿ1,000 ಮಾತ್ರ ಪ್ರಮಾಣೀಕೃತ, ಆದರೂ ವ್ಯವಹಾರ ಅತ್ಯಂತ ಲಾಭದಾಯಕ.
ಔಷಧ ಕಂಪನಿಗಳ ಲಂಚ ವ್ಯವಸ್ಥೆ ಕೂಡ ಬಲಿಷ್ಠವಾಗಿಯೇ ಇದೆ. 20–25 ದೊಡ್ಡ ಔಷಧ ಕಂಪನಿಗಳು ವರ್ಷಕ್ಕೆ ₹1,000 ಕೋಟಿ ವೈದ್ಯರ ಮೇಲೆ ಖರ್ಚು ಮಾಡುತ್ತವೆ. ಕೋವಿಡ್ ಸಮಯದಲ್ಲಿ ನೋವಿನ ಔಷಧ Dolo ತಯಾರಕರು ₹1,000 ಕೋಟಿ “ಇನ್ಸೆಂಟಿವ್” ನೀಡಿದ್ದನ್ನು ಬಹಿರಂಗಪಡಿಸಲಾಯಿತು. ವೈದ್ಯರಿಗೆ ನಗದು, ವಿದೇಶ ಪ್ರವಾಸ, ಐಷಾರಾಮಿ ವಾಸ್ತವ್ಯಗಳು — ನಿರ್ದಿಷ್ಟ ಬ್ರ್ಯಾಂಡ್ಗಳನ್ನು ಬರೆಯಲು. ಉದಾಹರಣೆಗೆ, USV Ltd. ವೈದ್ಯರಿಗೆ ₹3 ಲಕ್ಷ ನಗದು ಹಾಗೂ ಆಸ್ಟ್ರೇಲಿಯಾ ಅಥವಾ ಅಮೆರಿಕಾ ಪ್ರವಾಸ ನೀಡುತ್ತದೆ ಎನ್ನಲಾಗಿದೆ. ಔಷಧ ಮತ್ತು ಶಸ್ತ್ರೋಪಕರಣಗಳನ್ನು ಕಂಪನಿಗಳು ಆಸ್ಪತ್ರೆಗಳಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುತ್ತವೆ, ಆದರೆ ರೋಗಿಗಳಿಗೆ ಪೂರ್ಣ MRP ವಸೂಲಿ ಮಾಡಲಾಗುತ್ತದೆ.
India Today ಬಹಿರಂಗಪಡಿಸಿದಂತೆ, Emcure ಕಂಪನಿಯ Temikure (ಕ್ಯಾನ್ಸರ್ ಔಷಧ) ಆಸ್ಪತ್ರೆಗಳಿಗೆ ₹1,950ಗೆ ಮಾರಲಾಗುತ್ತದೆ, ಆದರೆ ರೋಗಿಗಳಿಗೆ ₹18,645 ಬಿಲ್ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ.ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ಕೂಡ ಇದರಲ್ಲಿ ಭಾಗಿಯಾಗಿತ್ತು. 2016ರಲ್ಲಿ ಸರ್ಕಾರ ನೇಮಿಸಿದ ಸಮಿತಿಯೊಂದು, MCI ಹೊಸ ಮೆಡಿಕಲ್ ಕಾಲೇಜುಗಳಿಗೆ ಸುಲಭವಾಗಿ ಅನುಮೋದನೆ ನೀಡಿದರೂ, ವೈದ್ಯರು ಮತ್ತು ಆಸ್ಪತ್ರೆಗಳ ನಿಯಂತ್ರಣ ವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ವರದಿ ಮಾಡಿತು.
ವೈದ್ಯರು MCI ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿದ್ದಾರೆ, ವೈದ್ಯರು ಜನರಿಕ್ (ಉಪ್ಪಿನ ಹೆಸರು) ಮಾತ್ರ ಬರೆಯಬೇಕು, ಆದರೆ ಬಹುತೇಕ ಪಾಲನೆ ಇಲ್ಲ. ಚಿಕಿತ್ಸೆಗೂ ಮೊದಲು ಸಂಪೂರ್ಣ ಶುಲ್ಕ ತಿಳಿಸಬೇಕು ಆದರೆ ಪಾಲನೆಯಿಲ್ಲ, ಪರೀಕ್ಷೆ ಅಥವಾ ಚಿಕಿತ್ಸೆಗೆ ಮುನ್ನ ರೋಗಿಯ ತಿಳುವಳಿಕೆ ಸಹಮತಿ (Informed Consent) ಅಗತ್ಯ, ವೈದ್ಯಕೀಯ ದಾಖಲೆಗಳನ್ನು ಕನಿಷ್ಠ 3 ವರ್ಷ ಸಂರಕ್ಷಿಸಬೇಕು. ಅನೈತಿಕ, ಅಪ್ರಾಮಾಣಿಕ ಅಥವಾ ಅಸಮರ್ಥ ವೈದ್ಯರನ್ನು ಭಯವಿಲ್ಲದೆ ಬಹಿರಂಗಪಡಿಸಬೇಕು.
ಸಣ್ಣ ಸಮಸ್ಯೆಗಳಿಗೆ ರೋಗಿಗಳನ್ನು ದಾಖಲು ಮಾಡಿ, ಸರ್ಕಾರಿ ವಿಮೆ ಅಡಿ ಸುಳ್ಳು ಚಿಕಿತ್ಸೆ ತೋರಿಸಿ ಬಿಲ್ ಮಾಡಲಾಗುತ್ತದೆ. ಭ್ರಷ್ಟ ಅಧಿಕಾರಿಗಳು ಅವನ್ನು ಅನುಮೋದಿಸಿ, ಆಸ್ಪತ್ರೆಗಳು ಹಣ ದೋಚುತ್ತವೆ.


