ತಿರುಮಲ ತಿರುಪತಿ ದೇವಸ್ಥಾನಂ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ. ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂಬ ಟಿಟಿಡಿ ಬೇಡಿಕೆಯಂತೆ ಕೆಎಂಎಫ್ ತಿರುಪತಿಗೆ ತುಪ್ಪವನ್ನು ಕಳುಹಿಸಿ ಕೊಟ್ಟಿದೆ.
ಸೋಮವಾರ ತಿರುಪತಿಗೆ 2.50 ಲಕ್ಷ ಕೆಜಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಭದ್ರತೆಯೊಂದಿಗೆ ಕಳುಹಿಸಿಕೊಟ್ಟಿದೆ. ಮಂಡ್ಯದ ಹಾಲು ಒಕ್ಕೂಟದಿಂದ ತುಪ್ಪ ಪೊರೈಕೆ ಮಾಡಿದ್ದು, ಇನ್ನುಳಿದ ತುಪ್ಪವನ್ನು ಇತರ ಮಹಾ ಮಂಡಳಿಯಿಂದ ಕೆಎಂಎಫ್ ಕಳುಹಿಸಿ ಕೊಡಲಿದೆ. ತಿರುಪತಿಯ ಅಗತ್ಯಕ್ಕೆ ತಕ್ಕಂತೆ ನಂದಿನಿ ತುಪ್ಪ ಪೂರೈಕೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ.
ತಿರುಪತಿಯ ಲಡ್ಡುಗೆ ಮೊದಲು ಕೆಎಂಎಫ್ನಿಂದಲೇ ತುಪ್ಪ ಸರಬರಾಜು ಆಗುತ್ತಿತ್ತು. ಆದರೆ ಕೆಎಂಎಫ್ ತುಪ್ಪದ ಬೆಲೆ ಜಾಸ್ತಿ ಆಗಿದೆ ಎಂಬ ಕಾರಣ ನೀಡಿ ಜಗನ್ ಸರ್ಕಾರ ಖಾಸಗಿ ಡೈರಿಯಿಂದ ತುಪ್ಪ ಖರೀದಿ ಮಾಡಿತ್ತು.
ಆಂಧ್ರದಲ್ಲಿ ಟಿಟಿಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಿರುಪತಿ ಲಡ್ಡಿನಲ್ಲಿ ಬಳಸುವ ತುಪ್ಪ ಖರೀದಿ ಟೆಂಡರ್ನಲ್ಲಿ ಅವ್ಯವಹಾರ, ಕಳಪೆ ಗುಣಮಟ್ಟ, ಕಲಬೆರಕೆ ಮತ್ತಿತರ ವಿವಾದ ಸದ್ದು ಮಾಡಿತ್ತು.
ಈ ಸಂಬಂಧ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ ಬಳಿಕ ಟಿಟಿಡಿ ಖಾಸಗಿ ಡೈರಿಯಿಂದ ತುಪ್ಪ ಖರೀದಿ ಮಾಡುವುದನ್ನು ನಿಲ್ಲಿಸಿ ಕೆಎಂಎಫ್ನಿಂದಲೇ ತುಪ್ಪ ಖರೀದಿಗೆ ಮುಂದಾಗಿದೆ.