Menu

ಅಪಘಾತ ಮಾಡಿದ್ದಿ ಎಂದು ವೃದ್ಧರೊಬ್ಬರಿಂದ ಹಣ ಸುಲಿಗೆ ಮಾಡಿ ವ್ಯಕ್ತಿ ಪರಾರಿ

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ 78 ವರ್ಷದ ಚಂದ್ರಶೇಖರ್ ಎಂಬವರಿಗೆ ನಿಮ್ಮ ಕಾರು ಟಚ್‌ ಆಗಿ ನನ್ನ ತಮ್ಮ ಗಾಯಗೊಂಡಿದ್ದಾನೆಂದು ಹಣ ನೀಡುವಂತೆ ಜಮೀಲ್‌ ಎಂಬಾತ ಕಿರುಕುಳ ನೀಡಿ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದಾನೆ.

ಜೂ.2ರಂದು ಈ ಘಟನೆ ನಡೆದಿದ್ದು, ಜಮೀಲ್ ಎಂಬಾತ ಚಂದ್ರಶೇಖರ್ ಅವರ ಕಾರು ಅಡ್ಡ ಹಾಕಿದ್ದಾನೆ, ನನ್ನ ಬೈಕ್ ಗೆ ಕಾರು ಟಚ್ ಆಗಿ ತಮ್ಮನಿಗೆ ಗಾಯವಾಗಿದೆ ಎಂದು ಸುಳ್ಳು ಹೇಳಿ 1 ಲಕ್ಷ ರೂ.‌ನೀಡುವಂತೆ ದಾರಿ ಉದ್ದಕ್ಕೂ ಗಲಾಟೆ ಮಾಡಿದ್ದ. ನಂತರ ಚಂದ್ರಶೇಖರ್ ಅವರಿಂದ 5 ಸಾವಿರ ರೂ. ಹಣ ಸುಲಿಗೆ ಮಾಡಿ ಹೊರಟು ಹೋಗಿದ್ದ.

ಈ ಬಗ್ಗೆ ಚಂದ್ರಶೇಖರ್‌ ತಡವಾಗಿ ಅಶೋಕ್‌ನಗರ ಠಾಣೆಗೆ ದೂರು‌ ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗೆ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಜಮೀಲ್ ಈ ಹಿಂದೆಯೂ ಇದೇ ರೀತಿ ಕೃತ್ಯ ಎಸಗಿದ್ದ , ಆತನ ವಿರುದ್ಧ ಜಮೀಲ್‌ ವಿರುದ್ಧ 16 ಪ್ರಕರಣಗಳಿವೆ ಎನ್ನಲಾಗಿದೆ. ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಕೇಸ್ ನಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ.

Related Posts

Leave a Reply

Your email address will not be published. Required fields are marked *