ಅಪರಾಧ
ಬಳ್ಳಾರಿಯಲ್ಲಿ ಉಗ್ರರ ನಂಟು ಹೊಂದಿದ್ದ ವ್ಯಕ್ತಿ ಅರೆಸ್ಟ್
ಉಗ್ರ ಸಿದ್ಧಾಂತಗಳನ್ನು ಆನ್ಲೈನ್ ಮೂಲಕ ಪ್ರಚಾರ ಮಾಡುತ್ತಿದ್ದಾನೆಂಬ ಗಂಭೀರ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಜಯವಾಡ ಪೊಲೀಸರ ವಿಶೇಷ ತಂಡವು ಬಳ್ಳಾರಿ ನಗರದಲ್ಲಿ ಲಾರಿ ಚಾಲಕನನ್ನು ಬಂಧಿಸಿದೆ. ಬಂಧಿತನನ್ನು ನಗರದ ಕೌಲ್ ಬಜಾರ್ ಪ್ರದೇಶದ ಅಬ್ದುಲ್ ಕಲಾಂ ಬೀದಿಯ ನಿವಾಸಿ ಅಬ್ದುಲ್ ಸಲಾಂ (36) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಗೌಪ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ವಿಜಯವಾಡ ಪೊಲೀಸರು ಬಳ್ಳಾರಿಗೆ ಆಗಮಿಸಿ
ಕಲಬುರಗಿಯಲ್ಲಿ ಪತ್ನಿಯ ಕೊಲೆಗೈದು ಶವದ ಮೇಲೆ ಕಾರು ಹರಿಸಿ ವಿಕೃತಿ
ಕಲಬುರಗಿಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನು ಪತಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರದ ಶೈಲಾ (28) ಕೊಲೆಯಾದ ಮಹಿಳೆ. ಆರೋಪಿ ಪತಿ ಅಕ್ಷಯ್ ಎರ್ಟಿಗಾ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು ಬಳೂರಗಿ ಗ್ರಾಮದ
ತರಗತಿಯಲ್ಲಿ ಚಾಕೊಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್: ಪ್ರೊಫೆಸರ್ಗೆ ಚಪ್ಪಲಿ ಸೇವೆ
ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದಲ್ಲಿರುವ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಪ್ರೊಫೆಸರ್ವೊಬ್ಬ ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ ಪ್ರಪ್ರೋಸ್ ಮಾಡಿದ್ದು. ವಿದ್ಯಾರ್ಥಿನಿಯಿಂದ ಚಪ್ಪಲಿ ಸೇವೆ ಸ್ವೀಕರಿಸಿರುವ ಘಟನೆ ನಡೆದಿದೆ. ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್ ಅಬ್ದುಲ್ ಪ್ರಪೋಸ್
10 ಕೋಟಿ ರೂ. ಭ್ರಷ್ಟಾಚಾರ: ಕೊಪ್ಪಳ ನಗರಸಭೆ ಜೆಇ ಅಮಾನತು
ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ ವೇಳೆ 10 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆ ಬಂದ ಹಿನ್ನೆಲೆ ಕೊಪ್ಪಳ ನಗರಸಭೆಯ ಜೆಇ ಸೋಮಲಿಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ. 2023-24 ಹಾಗೂ 24-25ನೇ ಸಾಲಿನ ಕಾಮಗಾರಿಗಳಲ್ಲಿ ಸುಳ್ಳು ಬಿಲ್ ಹಾಕಿದ್ದು, ಒಟ್ಟು 366 ಕಾಮಗಾರಿಗಳಲ್ಲಿ 10
ಪ್ರಿಯಕರನ ಜೊತೆ ಸೇರಿ ತಾಯಿಯ ಕೊಲೆಗೈದು ಮನೆಯಲ್ಲೇ ಹೂತು ಹಾಕಿದ ಮಗಳು
ಹೈದರಾಬಾದ್ನಲ್ಲಿ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಒಂದು ವರ್ಷದ ಹಿಂದೆ ಮಗಳೇ ತಾಯಿಯನ್ನು ಕೊಂದು ಶವವನ್ನು ಮನೆಯಲ್ಲೇ ಹೂತು ಹಾಕಿರುವ ಪ್ರಕರಣ ಬಹಿರಂಗಗೊಂಡಿದೆ. ತಾಯಿಯ ದ್ವಿಚಕ್ರವಾಹನವನ್ನು ಮಾರುವುದಕ್ಕೆ ಯತ್ನಿಸಿದಾಗ ಹೈದರಾಬಾದ್ನ ಜವಾಹರನಗರದಲ್ಲಿ ನಡೆದ ಭಯಾನಕ ಕೃತ್ಯ ಬಯಲಾಗಿದೆ. ಮಗಳು ಪ್ರಿಯಕರನೊಂದಿಗೆ ಸೇರಿ ತಾಯಿಯನ್ನು
ಐಸಿಸ್, ಅಲ್-ಖೈದಾ ಸಂಪರ್ಕ: 12 ಶಂಕಿತರು ಅರೆಸ್ಟ್
ಆಂಧ್ರಪ್ರದೇಶ ಪೊಲೀಸರು ನಾನಾ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ 12 ಜನರನ್ನು ಬಂಧಿಸಿದ್ದಾರೆ ಬಂಧಿತರಲ್ಲಿ ಆಂಧ್ರದ ಮೂವರು ಸೇರಿದ್ದು, ವಿಜಯವಾಡ ನಗರದ ಮೊಹಮ್ಮದ್ ರಹಮತುಲ್ಲಾ ಶರೀಫ್, ಮಿರ್ಜಾ ಸೊಹೈಲ್ ಬೇಗ್ ಮತ್ತು ಮೊಹಮ್ಮದ್ ಡ್ಯಾನಿಶ್ ಎಂದು
ಆಂಧ್ರದಲ್ಲಿ ಬಸ್ ಅಪಘಾತ: 13 ಪ್ರಯಾಣಿಕರು ಸಜೀವ ದಹನ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಆಂಧ್ರ ಪ್ರದೇಶದಲ್ಲಿ ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ಗೆ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರಲ್ಲಿ 13 ಮಂದಿ ಸಜೀವ ದಹನಗೊಂಡಿದ್ದಾರೆ. ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಭಸ್ಮವಾಗಿ ಹೋಗಿದ್ದಾರೆ. ರಾಯಲಸೀಮೆ ಪ್ರದೇಶದ ಮಾರ್ಕಪುರಂ ಜಿಲ್ಲೆಯ ರಾಯವರಂ ಸಮೀಪದ ಹಲಗೆ
ಮನಿ ಡಬ್ಲಿಂಗ್ ಆಮಿಷ: 24 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ಗುತ್ತಿಗೆದಾರ
ಹಣದ ಮಳೆ ಸುರಿಯಲಿದೆ ಎಂಬ ವಂಚಕರ ಮಾತು ನಂಬಿದ ಬೆಂಗಳೂರಿನ ಗುತ್ತಿಗೆದಾರ 24 ಲಕ್ಷ ರೂ. ಕಳೆದುಕೊಂಡಿದ್ದಾರೆ. ತಾನು ಮೋಸ ಹೋಗಿರುವುದು ಅರಿವಾದ ಮೇಲೆ ಪೊಲೀಸ್ಗೆ ದೂರು ನೀಡಿದ್ದಾರೆ. ಪೊಲೀಸರು ಮೂವರು ವಂಚಕರನ್ನು ಬಂಧಿಸಿ 40 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ
ಗಾಜಾದಲ್ಲಿ ತಂದೆ ಎದುರೇ ಮಗುವಿಗೆ ಚಿತ್ರಹಿಂಸೆ ನೀಡಿದ ಇಸ್ರೇಲ್ ಸೈನಿಕರು
ಮಾರ್ಚ್ 21 ರಂದು ಮಧ್ಯ ಗಾಜಾದ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ಇಸ್ರೇಲ್ ಸೈನಿಕರು 18 ತಿಂಗಳ ಪ್ಯಾಲೇಸ್ಟಿನಿಯನ್ ಮಗುವನ್ನು 10 ಗಂಟೆ ಬಂಧನದಲ್ಲಿಟ್ಟು, ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ. ತಂದೆಯಿಂದ ಬಲವಂತದ ತಪ್ಪೊಪ್ಪಿಗೆ ಪಡೆಯಲು ಹಸುಗೂಸನ್ನು
ಮುಳಬಾಗಿಲಿನಲ್ಲಿ ಮನೆ ಕುಸಿದು ಬಾಲಕಿ ಸಾವು
ಹಳೆಯ ಮನೆ ಕುಸಿದು ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಕೋಲಾರದ ಮುಳಬಾಗಿಲು ನಗರದಲ್ಲಿ ನಡೆದಿದೆ. ಈ ದುರಂತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಬಾಲಕಿಯನ್ನು ವಹಿನೂರ್ (15) ಎಂದು ಗುರುತಿಸಲಾಗಿದೆ. ಸುಹೇಲ್, ಕೌಸರ್, ಅಯಾಜ್ ಮತ್ತು ಅಬ್ಜರ್ ಗಾಯಗೊಂಡವರು. ಗಾಯಾಳುಗಳನ್ನು ಕೋಲಾರದ




