Menu

ಕುಟುಂಬದ ಸಾವಿಗೆ ಕಾರಣವಾದ ಕಲ್ಲಂಗಡಿಯಲ್ಲಿತ್ತು ಇಲಿ ಪಾಷಾಣ

ಮುಂಬೈನ ಅಬ್ದುಲ್ಲಾ ಡೊಕಾಡಿಯಾ, ಪತ್ನಿ ನಸ್ರೀನ್ ಮಕ್ಕಳಾದ ಆಯೇಷಾ ಮತ್ತು ಜೈನಾಬ್ ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ಹಣ್ಣು ತಿಂದು ಮಲಗಿದ್ದವರು ಅಸ್ವಸ್ಥಗೊಂಡು ಮೃತಪಟ್ಟ ಪ್ರಕರಣದ ತನಿಖೆಯಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣವಿತ್ತು ಎಂಬ ವಿಚಾರ ಬಯಲಾಗಿದೆ. ಕುಟುಂಬಸ್ಥರು ತಾವೇ ವಿಷ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದರಾ ಅಥವಾ ಯಾರಾದರೂ ಕೊಲೆ ಮಾಡಲು ಸಂಚು ಮಾಡಿದ್ದರಾ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರುಮೃತಪಟ್ಟಿದ್ದರು. ಬಿರಿಯಾನಿ ತಿಂದ

ಕನಕಪುರದಲ್ಲಿ ವೈದ್ಯನ ಬಳಿಕ ನರ್ಸ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕನಕಪುರ ನಗರದ ಮಹದೇಶ್ವರ ಬಡಾವಣೆಯಲ್ಲಿ ಎರಡು ದಿನಗಳ ಹಿಂದೆ ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಎರಡು ದಿನಗಳ ಬಳಿಕ ಅವರ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಮಹಿಳೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೋದಯ ಆಸ್ಪತ್ರೆಯ ನರ್ಸ್ ಸರಸ್ವತಿ (45)

ಪತ್ನಿ, ಮಕ್ಕಳ ಕರೆದೊಯ್ಯಲು ಹೋದವನ ಮೇಲೆ ಪೆಟ್ರೋಲ್‌ ಹಾಕಿ ಸುಟ್ಟ ಅತ್ತೆ ಮಾವ

ಪತ್ನಿ ಮತ್ತು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಅಳಿಯನ ಮೇಲೆ ಅತ್ತೆ-ಮಾವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ. 25 ವರ್ಷದ ನವೀನ್ ಅತ್ತೆ ಮಾವನಿಂದ ಕೊಲೆಯಾದ ವ್ಯಕ್ತಿ ಎಂದು

ಪಡಿತರ ಅಕ್ಕಿ ಅಕ್ರಮ ಸಾಗಣೆ: ಮೂರು ಲಕ್ಷ ರೂ. ವಸೂಲಿ ಮಾಡಿದ ಎಸ್ಪಿ ಗನ್ ಮ್ಯಾನ್ ಅರೆಸ್ಟ್‌

ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್ ಮ್ಯಾನ್ ದೇವರಾಜ್ ಮತ್ತು ಸಹಚರರು ಅಕ್ರಮ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಶರಭಯ್ಯ ಎಂಬವರಿಂದ ಮೂರು ಲಕ್ಷ ರೂ. ವಸೂಲಿ ಮಾಡಿದ ಆರೋಪದಡಿ

ಅಪಘಾತದಲ್ಲಿ ಮಹಿಳೆಯ ಸಾಯಿಸಿ ಮನೆಯಿಂದ ಹಣ ದೋಚಿದ್ದವರ ಬಂಧನ

ಹಣಕ್ಕಾಗಿ ಮಹಿಳೆಯೊಬ್ಬರಿಗೆ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿ ಕೊಲೆಗೈದಿರುವ ಘಟನೆ ಏಪ್ರಿಲ್ 21ರಂದು ಬೆಂಗಳೂರಿನ ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ನಡೆದಿದೆ. ಆರಂಭದಲ್ಲಿ ಇದೊಂದು ಅಪಘಾತ ಎಂದು ಹೇಳಲಾಗಿತ್ತು. ಮಹಾಲಕ್ಷ್ಮಿ ಲೇಔಟ್ ಪೊಲೀಸರ ತನಿಖೆಯಿಂದಾಗಿ ವ್ಯವಸ್ಥಿತ ಕೊಲೆ ಎಂಬುದು ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ

ಬ್ಯಾಂಕಲ್ಲಿ ಚಿನ್ನ ಅಡವಿಟ್ಟು ಹಣ ಜಮೆಯಾದ ಕೂಡಲೇ ಎಗರಿಸಿದ ಸೈಬರ್‌ ವಂಚಕರು

ಚಿನ್ನವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಖಾತೆಗೆ ಹಣ ಜಮೆ ಮಾಡಿ ಹೊರ ಬರುವಷ್ಟರಲ್ಲಿ ಸೈಬರ್‌ ವಂಚಕರು ಆ ಹಣವನ್ನು ಎಗರಿಸಿರುವ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ. ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ

26 ವರ್ಷದ ಮಹಿಳೆಯ ಮೋಹಕ್ಕೆ ಬಿದ್ದ 15 ವರ್ಷದ ಬಾಲಕ ಆತ್ಮಹತ್ಯೆ

26 ವರ್ಷದ ಮಹಿಳೆಯನ್ನು ಮದುವೆಯಾಗುವೆನೆಂದು ಹೊರಟಿದ್ದ 15 ವರ್ಷದ ಬಾಲಕ ಪೋಷಕರ ಬುದ್ಧಿವಾದಕ್ಕೆ ಬೇಸರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಡದಿಯಲ್ಲಿ ನಡೆದಿದೆ. ಬಿಡದಿಯ ಭೂಮಿಕಾ ಪೃಥ್ವಿ ಲೇಔಟ್‌ನ ಆರ್. ತನ್ಮಯ್ ನಾಯಕ್ ಮೃತ ಬಾಲಕ. ಮಹಿಳೆಯನ್ನು ಮದುವೆಯಾಗಲು ಬಾಲಕ ಇಚ್ಛಿಸಿದ್ದ, ಆಕೆಯನ್ನು

ವೃದ್ಧೆಯನ್ನು ಬೆದರಿಸಿ 2.1 ಕೋಟಿ ರೂ. ಕಿತ್ತುಕೊಂಡ ಸೈಬರ್‌ ವಂಚಕರು

ಸೈಬರ್‌ ವಂಚಕರು ಎನ್‌ಐಎ ಅಧಿಕಾರಿಯ ಹೆಸರಿನಲ್ಲಿ ವೃದ್ಧೆಯೊಬ್ಬರನ್ನು ಬೆದರಿಸಿ 2.1 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣವು ಬೆಂಗಳೂರಿನ ಜಯನಗರದಲ್ಲಿ ಬೆಳಕಿಗೆ ಬಂದಿದೆ. ನಿಮಗೆ ಪಿಎಫ್‌ಐ ಸಂಘಟನೆ ಜೊತೆ ಸಂಪರ್ಕ ಇದೆ ಎಂದು ಹೆದರಿಸಿದ ವಂಚಕರು ಬಂಧನ ಭೀತಿ ಹುಟ್ಟಿಸಿ ಬ್ಯಾಂಕ್ ಖಾತೆಗಳ

ಮದುವೆಯಾಗಿ ಎಂಟು ತಿಂಗಳಲ್ಲೇ ಮಹಿಳೆ ಆತ್ಮಹತ್ಯೆ

ಬೆಂಗಳೂರಿನ ಯಶವಂತಪುರದಲ್ಲಿ ಮದುವೆಯಾಗಿ ಎಂಟು ತಿಂಗಳಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.  ಶಾರದ ಎಂಬ ಮಹಿಳೆ ಪತಿ ಮಹೇಶ್ ಮನೆಯಲ್ಲಿಯೇ ಇದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಶಾರದಾ ವೀಡಿಯೊ ಕಾಲ್ ಮಾಡಿ ನಾನು ಸಾಯುತ್ತೇನೆ

ವೋಟರ್‌ ಐಡಿ ದುರುಪಯೋಗ: ಅಮಾಯಕನ ವಿರುದ್ಧ ದಾಖಲಾಯ್ತು ಕೊಲೆ ಪ್ರಕರಣ

ವ್ಯಕ್ತಿಯೊಬ್ಬರ ವೋಟರ್ ಐಡಿ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್​ ಖರೀದಿಸಿ, ಅದನ್ನು ಕೊಲೆ ಕೃತ್ಯದಲ್ಲಿ ಬಳಸಿಕೊಂಡ ಪ್ರಕರಣವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಸಂತ್ರಸ್ತನ ಹಳೆಯ ವೋಟರ್ ಐಡಿ ಪೋಟೊ ಬದಲಿಸಿ ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿಸಿದ್ದ ಆರೋಪಿ ಅದನ್ನು ಕೊಲೆ ಕೃತ್ಯದ ವೇಳೆ