Friday, September 18, 2026
Menu

ಹತ್ತು ಲಕ್ಷಕ್ಕೆ ಒಂದು ಕೋಟಿ ವಾಪಸ್‌ ಆಮಿಷ: ವಂಚಕರ ಬಂಧನ

ಹತ್ತು ಲಕ್ಷ ರೂಪಾಯಿ ನೀಡಿದರೆ ವಾಪಸ್‌ ಒಂದು ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ವಂಚಿಸುತ್ತಿದ್ದ ಗ್ಯಾಂಗ್‌ ಅನ್ನು ಬಯಲಿಗೆಳೆದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದಿ. ಜಯಲಲಿತಾ ಅವರ ಬೇನಾಮಿ ಅಸ್ತಿ ಬಂದಿದೆ, ಹತ್ತು ಲಕ್ಷ ನೀಡಿದರೆ ಒಂದು ಕೋಟಿ ರೂಪಾಯಿ ಸಿಗಲಿದೆ ಎಂದು ಆರ್‌ಬಿಐ ಮ್ಯಾನೇಜರ್‌ ಎಂದು ಒಬ್ಬನನ್ನು ತೋರಿಸಿದ ವಂಚಕರ ಗ್ಯಾಂಗ್‌ ಸಾರ್ವಜನಿಕರಿಂದ ಕೋಟಿ ಕೋಟಿ ರೂಪಾಯಿ ದೋಚಿದೆ. ಮುಖ್ಯ ಆರೋಪಿ ಯಳಚೇನಹಳ್ಳಿ

ಯುವತಿ ಮೇಲೆ ನಾನಾ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ, ಅಕ್ರಮ ಬಂಧನ: ಯಾದಗಿರಿಯ ಇಬ್ಬರು ರೈಲ್ವೆ ಪೊಲೀಸ್‌ ಸೇರಿ ಆರು ಮಂದಿ ವಿರುದ್ಧ ಪ್ರಕರಣ

ಬೆಂಗಳೂರಿನಿಂದ ಯಾದಗಿರಿಗೆ ತೆರಳಿದ್ದ ಯುವತಿಯ ಮೇಲೆ ರಾಜ್ಯದ ನಾನಾ ಸ್ಥಳಗಳಲ್ಲಿ ಪದೇ ಪದೆ ಲೈಂಗಿಕ ದೌರ್ಜನ್ಯ ನಡೆಸಿ ಬೆದರಿಸಿ ಅಕ್ರಮವಾಗಿ ಬಂಧಿಸಿಟ್ಟ ಆರೋಪದಡಿ ಇಬ್ಬರು ರೈಲ್ವೆ ಪೊಲೀಸರು ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ತುರ್ತು ಸ್ಪಂದನಾ ಸಿಬ್ಬಂದಿ ಸಂತ್ರಸ್ತೆಯನ್ನು

ಮದುವೆಯಾಗುವುದಾಗಿ ನಂಬಿಸಿ ಟ್ಯಾಟೂ ಆರ್ಟಿಸ್ಟ್‌ಗೆ ಲಕ್ಷಾಂತರ ರೂ. ವಂಚಿಸಿದ ಎರಡು ಮಕ್ಕಳ ತಾಯಿ

ಎರಡು ಮಕ್ಕಳ ತಾಯಿ ಮದುವೆಯಾಗುವುದಾಗಿ ಹೇಳಿದ್ದನ್ನು ನಂಬಿ ಪ್ರೀತಿಗಾಗಿ ಆಕೆಯ ಹಿಂದೆ ಬಿದ್ದ ಟ್ಯಾಟೂ ಕಲಾವಿದ ಹಾಗೂ ನಟನಿಗೆ ಆಕೆಯಿಂದ ಲಕ್ಷಾಂತರ ರೂ. ವಂಚನೆ ಮಾತ್ರವಲ್ಲದೆ ಹಲ್ಲೆಗೂ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಪ್ರಿತಾ ಎಂಬ ಮಹಿಳೆ ಲಕ್ಷಾಂತರ ರೂಪಾಯಿ ಪಡೆದು

ಜಮೀನು ದಾಖಲೆ ತಿದ್ದುಪಡಿಗೆ 50 ಲಕ್ಷ ರೂ. ಪಡೆಯುತ್ತಿದ್ದ ತಹಸೀಲ್ದಾರ್‌ ಲೋಕಾಯುಕ್ತ ಬಲೆಗೆ

ಕೋಟ್ಯಾಂತರ ರೂ. ಮೌಲ್ಯದ ಜಮೀನಿನ ದಾಖಲೆ ತಿದ್ದುಪಡಿಗಾಗಿ ಐವತ್ತು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಧಾರವಾಡದ ತಹಶೀಲ್ದಾರ್‌ ಸಚ್ಚಿದಾನಂದ ಕುಚನೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಧಾರವಾಡ- ಕಲಘಟಗಿ ನಡುವೆ ಯರಿಕೊಪ್ಪ ಗ್ರಾಮದಲ್ಲಿ ಇದ್ದ ೩೩೩ ಎಕರೆಯಲ್ಲಿ ೧೩ ಎಕರೆ ಖರಾಬು ಜಮೀನು

ಪ್ರದೋಷ್‌ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ್ದು, ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಪ್ರದೋಷ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಸಿಹೆಚ್ 59 ಕೋರ್ಟ್ ಅಂಗೀಕರಿಸಿದೆ. ಪ್ರದೋಷ್‌ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಟ ದರ್ಶನ್‌ ಮಾಫಿ ಸಾಕ್ಷಿ ತಡೆ ಹಿಡಿಯುವಂತೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ

ಕಿತ್ತೂರಿನಲ್ಲಿ ಆಸ್ತಿ ದಾಖಲೆಗಾಗಿ ಕಚೇರಿಗೆ ಬಂದಿದ್ದ ತಂದೆ- ಮಗಳ ಹತ್ಯೆ

ಆಸ್ತಿ ದಾಖಲೆ ಪಡೆದುಕೊಳ್ಳುವುದಕ್ಕಾಗಿ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದ ತಂದೆ ಮತ್ತು ಮಗಳನ್ನು ಹತ್ಯೆ ಮಾಡಿರುವ ಘಟನೆಯು ಬೆಳಗಾವಿಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ. ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಮಗಳು ಶಶಿಕಲಾ ಕುಂದರಗಿ (26) ಹತ್ಯೆಯಾದವರು.

ಐಎಎಫ್‌ನಲ್ಲಿ ಉದ್ಯೋಗ ಆಮಿಷ: ಯುವಕನ ಚಿನ್ನ ದೋಚಿದ ನಕಲಿ ಅಧಿಕಾರಿ

ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಹೇಳಿಕೊಂಡು ವಂಚಕನೊಬ್ಬ ಉದ್ಯೋಗ ಕೊಡಿಸುವುದಾಗಿ ಯುವಕನನ್ನು ನಂಬಿಸಿ ಚಿನ್ನದ ಚೈನ್‌ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪಟ್ಟೇಗಾರ್ ಪಾಳ್ಯದ ನಿವಾ, 25 ವರ್ಷದ ಸುಜನ್ ಆರ್.ಕೆ. ವಂಚನೆಗೊಳಗಾದ ಯುವಕ. ಭಾರತೀಯ

ಜ್ಯೋತಿಷ್ಯ, ಪೂಜೆಯೆಂದು ನಂಬಿಸಿ ಬೆಂಗಳೂರಿನಲ್ಲಿ ಮಹಿಳೆಯ 40 ಲಕ್ಷ ರೂ. ಮೌಲ್ಯದ ಚಿನ್ನ ದೋಚಿದ ವಂಚಕ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಜ್ಯೋತಿಷ್ಯ ಮತ್ತು ಚೌಡೇಶ್ವರಿ ದೇವಿಯ ಪೂಜೆ ಹೆಸರಿನಲ್ಲಿ ವಂಚಕನೊಬ್ಬ ಮಹಿಳೆಯಿಂದ ನಲ್ವತ್ತು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದು, ಬಳಿಕ ತನಗೆ ಅಪಘಾತವಾಗಿರುವುದಾಗಿ ಎಐ ವೀಡಿಯೊ ಕಳಿಸಿ ನಂಬಿಸಿದರುವ ಘಟನೆ ಬಹಿರಂಗಗೊಂಡಿದೆ. ಬ್ಯಾಟರಾಯನಪುರದ ನಿವಾಸಿಯಾಗಿರುವ 62 ವರ್ಷದ

ಸೋಮವಾರಪೇಟೆಯಲ್ಲಿ ಪತ್ನಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

ವೃದ್ಧ ಪತ್ನಿಗೆ ಗುಂಡು ಹಾರಿಸಿ ಕೊಂದು, ನಂತರ ಪತಿಯೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಪೇಟೆಯ ಕುಂಬಾರಗಡಿಗೆ ಗ್ರಾಮದಲ್ಲಿ ಸಂಭವಿಸಿದೆ. ಕುಂಬಾರಗಡಿಗೆ ಗ್ರಾಮದ ಕೃಷಿಕರಾದ ಕೆ.ಟಿ.ಸುಬ್ಬಯ್ಯ(೭೭), ಬೋಜಮ್ಮ(೭೪) ಮೃತಪಟ್ಟವರು. ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದು, ಪತ್ನಿಗೆ ತಲೆಯ

ಪ್ರಿಯಕರ, ಸ್ನೇಹಿತನ ಜೊತೆ ಸಕಲೇಶಪುರ ಲಾಡ್ಜ್‌ನಲ್ಲಿದ್ದ ಯುವತಿ ಸಾವು

ಸಕಲೇಶಪುರದ ವಳಲಹಳ್ಳಿ ಕೂಡಿಗೆಯ ಲಾಡ್ಜ್‌ವೊಂದರಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವತಿಯನ್ನು ಬೆಂಗಳೂರು ನಾಗಸಂದ್ರ ನಿವಾಸಿ ೨೫ ಹರೆಯದ ವರ್ಷಾ ಎಂದು ಗುರುತಿಸಲಾಗಿದೆ. ಆಕೆ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಜೊತೆ ಟ್ರಿಪ್‌ಗೆಂದು ಬಂದಿದ್ದಳು. ಮೂವರೂ ಶನಿವಾರ,