Menu

ವಿದೇಶೀ ಕರೆ ಸ್ಥಳೀಯ ಕರೆಯಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಜಾಲ ಪತ್ತೆ

ಬೆಂಗಳೂರು:ಆಧುನಿಕ ಸಲಕರಣೆಗಳನ್ನು ಬಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಟೆಲಿಕಾಂ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುವ ಜೊತೆಗೆ, ರಾಷ್ಟ್ರೀಯ ಭದ್ರತೆಗೂ ಆತಂಕ ಸೃಷ್ಟಿಸಿದ ವಿವಿಧ ಸೈಬರ್‌ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದ  ಜಾಲವನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯಲ್ಲಿ 40 ಲಕ್ಷ ಮೌಲ್ಯದ 28 ಸಿಮ್  ಬಾಕ್ಸ್ ವಿವಿಧ ಕಂಪನಿಗಳ 1193 ಸಿಮ್ ಕಾರ್ಡ್ ಗಳು,ಲ್ಯಾಪ್‌ಟಾಪ್, ರೂಟರ್ ಗಳನ್ನು ವಶಪಡಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ

ಆಯುಕ್ತರ ಕಚೇರಿ ಆವರಣದಲ್ಲಿ ಕಳವುಗೈದ ಪೊಲೀಸ್‌

ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಪೊಲೀಸ್‌ ಸಿಬ್ಬಂದಿ ಭಾಗಿಯಾಗಿದ್ದ ಘಟನೆ ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿಯೇ ಪೊಲೀಸ್‌ ಸಿಬ್ಬಂದಿ ಕಳ್ಳತನ ಮಾಡಿರುವುದು ಬಯಲಾಗಿದೆ. ಆರೋಪಿಯನ್ನು ವಿಚಾರಣೆಗೆ ಕರೆ ತಂದ ಪೊಲೀಸ್‌ ಸಿಬ್ಬಂದಿ ಕಳ್ಳನ ಕಾರ್‌ನಲ್ಲಿದ್ದ

ಬಳ್ಳಾರಿಯಲ್ಲಿ ಕಂಪ್ಲಿ ಶಾಸಕರ ಆಪ್ತರಿಂದ ಅಕ್ರಮ ಗ್ರಾವೆಲ್‌ ಸಾಗಾಟಕ್ಕೆ ಪೊಲೀಸ್‌ ಬ್ರೇಕ್‌

ಬಳ್ಳಾರಿಯಲ್ಲಿ ಕಂಪ್ಲಿ ಶಾಸಕರ ಆಪ್ತರಿಂದ ನಡೆಯುತ್ತಿದೆ ಎನ್ನಲಾಗಿರುವ ಅಕ್ರಮ  ಗ್ರಾವೆಲ್‌ ಸಾಗಾಟಕ್ಕೆ ಪೊಲೀಸರು ಬ್ರೇಕ್‌ ಹಾಕಿದ್ದಾರೆ. ಅಕ್ರಮ ಅದಿರು, ಅಕ್ರಮ ಮರಳು ಸಾಗಾಟದ ಬಳಿಕ ಬಳ್ಳಾರಿಯಲ್ಲಿ ಗ್ರಾವೆಲ್‌ ಸಾಗಾಟ ದಂಧೆ ಗರಿಗೆದರಿದೆ. ಬಳ್ಳಾರಿಯ ಮೋಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಪ್ಲಿ ಶಾಸಕರ

ಅನೈತಿಕ ಸಂಬಂಧ: ಚಿಕ್ಕಮಗಳೂರಲ್ಲಿ ಅತ್ತೆ ಮಗನಿಂದ ಮಹಿಳೆಯ ಕೊಲೆ

ಅನೈತಿಕ ಸಂಬಂಧದಲ್ಲಿ ಉಂಟಾದ ಮನಸ್ತಾಪದ ಕಾರಣ ಅತ್ತೆಯ ಮಗನೇ ಮಹಿಳೆಯನ್ನು ಕೊಂದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಗ್ರಾಮದಲ್ಲಿ ನಡೆದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಜನಾರ್ಧನನನ್ನು ಆಲ್ದೂರು ಪೊಲೀಸರು ಬಂಧಿದ್ದಾರೆ. ಕಳೆದೆರೆಡು ದಿನದ ಹಿಂದೆ ಅರೆನೂರು ಗ್ರಾಮದ ಸಂಧ್ಯಾ ಎಂಬ

ತನಗಿಂತ ಅಂದವಿದೆಯೆಂದು 6 ವರ್ಷದ ಮಗು ಕೊಂದ ಸೈಕೋ ಲೇಡಿ, ಈ ಹಿಂದೆ ಮಗ ಸೇರಿದಂತೆ 3 ಮಕ್ಕಳ ಕೊಲೆ

ತನಗಿಂತ ಸುಂದರವಾಗಿ ಕಾಣುತ್ತಿರುವ ಕಾರಣಕ್ಕೆ 6 ವರ್ಷದ ಮುದ್ದು ಸೊಸೆಯನ್ನು ಮಹಿಳೆಯೊಬ್ಬಳು ನೀರಿನ ಟಬ್‌ನಲ್ಲಿ ಮುಳುಗಿಸಿ ಸಾಯಿಸಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭಿಸಿದೆ. ಆರೋಪಿ ಪೂನಂ ಈ ಮೊದಲು

4.14 ಕೋಟಿ ವಿಮೆ ಹಣಕ್ಕಾಗಿ ಅಣ್ಣನನ್ನೇ ಕೊಂದ ತಮ್ಮ!

ಸಾಲ ತೀರಿಸಲು ತನ್ನ ಮಾನಸಿಕವಾಗಿ ಅಪ್ರಬುದ್ಧ ಸಹೋದರನ ಹೆಸರಿನಲ್ಲಿ ವಿಮೆ ಮಾಡಿಸಿ, ಬಳಿಕ ಕ್ರೂರವಾಗಿ ಕೊಂದು ಅಪಘಾತ ಎಂದು ತಮ್ಮ ಬಿಂಬಿಸಿದ ಆಘಾತಕಾರಿ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ರಾಮದುಗು ತಾಲೂಕಿನಲ್ಲಿ ನಡೆದಿದೆ. ವಿಮಾ ಕಂಪನಿ ಪ್ರತಿನಿಧಿಗಳು ನೀಡಿದ್ದ ದೂರಿನ ಮೇರೆಗೆ

ತಳ್ಳೋ ಗಾಡಿಯಲ್ಲಿ ಎಟಿಎಂ ಮಷಿನ್ ಕದ್ದ ಕಳ್ಳರು: ಸಿಸಿಟಿವಿ ದೃಶ್ಯ ನೋಡಿ ಪೊಲೀಸರೇ ಶಾಕ್!

ಬೆಳಗಾವಿ: ಬೆಳಗಾವಿಯಲ್ಲೂ ಖತರ್ನಾಕ್ ಕಳ್ಳರ ಗ್ಯಾಂಗೊಂದು ಎಟಿಎಂ ಯಂತ್ರವನ್ನೇ ತಳ್ಳುಗಾಡಿಯ ಸಹಾಯದಿಂದ ಹೊತ್ತೊಯ್ದು ಘಟನೆ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿದ್ದ ‘ಇಂಡಿಯಾ ಎಟಿಎಂ’ ಕೇಂದ್ರವನ್ನು

ಲಿವ್‌ ಇನ್‌ ಟುಗೆದರ್‌: ಬೆಂಗಳೂರಿನಲ್ಲಿ ಮಹಿಳೆಯ ಕೊಂದು ವ್ಯಕ್ತಿ ಸುಸೈಡ್‌

ಲಿವ್‌ ಇನ್‌ ಟುಗೆದರ್‌ನಲ್ಲಿದ್ದ ಮಹಿಳೆಯನ್ನು ಕೊಂದ ಬಳಿಕ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯೊಂದರಲ್ಲಿ ನಡೆದಿದೆ. 51 ವರ್ಷದ ಲಕ್ಷ್ಮೀನಾರಾಯಣ 49 ವರ್ಷದ ಲಲಿತಾ ಎಂಬಾಕೆಯನ್ನು ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಬಾಲಕಿ ಮೇಲೆ ಗ್ಯಾಂಗ್‌ ರೇಪ್‌

ಬೆಳಗಾವಿಯ ಮುರಗೋಡ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 23ರಂದು ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯ ಕುಟುಂಬಸ್ಥರಿಗೆ ಜೀವ ಬೆದರಿಕೆ ಒಡ್ಡಿದ್ದ ಹಿನ್ನಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೀಡಿ, ಸಿಗರೇಟ್‌, ಮೊಬೈಲ್‌ ಬಂದ್‌: ಊಟ ಬಿಟ್ಟು ಕೈದಿಗಳ ಪ್ರತಿಭಟನೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲವೊಂದು ನಿಯಮಗಳನ್ನು ಕಠಿಣವಾಗಿ ಜಾರಿಗೆ ತರುತ್ತಿದ್ದು, ಅಕ್ರಮವಾಗಿ ಸಿಗುತ್ತಿದ್ದ ಬೀಡಿ, ಸಿಗರೇಟ್‌ ಬಂದ್‌ ಆಗಿದೆ. ಮೊಬೈಲ್‌ ಕೂಡ ಸಿಗದಂತೆ ಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಜೈಲಿನಲ್ಲಿ ಕೈದಿಗಳು ಊಟ, ತಿಂಡಿ