Menu

ಐಶ್ವರ್ಯಾ ಗೌಡ ವಂಚನೆ ಕೇಸ್‌ಗಳ ತನಿಖೆ ಸಿಐಡಿಗೆ ವರ್ಗಾವಣೆ

ಐಶ್ವರ್ಯಾ ಗೌಡ ವಿರುದ್ಧ ರಾಜರಾಜೇಶ್ವರಿ ನಗರ, ಚಂದ್ರಾಲೇಔಟ್ ಸೇರಿದಂತೆ  ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳಲ್ಲಿ  ಹಾಗೂ ಮಂಡ್ಯದಲ್ಲಿ  ದಾಖಲಾಗಿದ್ದ  ವಂಚನೆ ಕೇಸ್‌ಗಳನ್ನು ಪೊಲೀಸರು ಸಿಐಡಿಗೆ ವರ್ಗಾವಣೆ ಮಾಡಲಿದ್ದಾರೆ.

ಸಿಐಡಿಯ ಆರ್ಥಿಕ ಅಪರಾಧ ವಿಭಾಗ ಪ್ರಕರಣದ ತನಿಖೆ ನಡೆಸಲಿದೆ. ಈಗಾಗಲೇ ಬ್ಯಾಟರಾನಪುರ ಉಪವಿಭಾಗ ಎಸಿಪಿ ಭರತ್ ರೆಡ್ಡಿ ಕೇಸ್ ನ ತನಿಖೆ ನಡೆಸಿದ್ದು, ಮುಂದಿನ ತನಿಖೆಗೆಗೆ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಬುಧವಾರವಷ್ಟೇ ಐಶ್ವರ್ಯಾ ಗೌಡ ಸೆಷನ್ಸ್ ಕೋರ್ಟ್ ನಿಂದ ಜಾಮೀನು ಪಡೆದಿದ್ದರು. ಐಶ್ವರ್ಯ ಗೌಡ 9 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಾರಾಹಿ ವರ್ಲ್ಡ್‌ ಆಫ್‌ ಗೋಲ್ಡ್‌ ಜುವೆಲ್ಲರಿಯ ಮಾಲೀಕರಿಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ವಂಚನೆ ಎಸಗಿದ್ದರು. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್​​ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು. ಡಿಕೆ ಸುರೇಶ್ ತಂಗಿ ಎಂದು ಐಶ್ವರ್ಯಗೌಡ ಹೇಳಿಕೊಂಡು ಅನೇಕರಿಗೆ ವಂಚಿಸಿದ್ದರಾರೆ ಎನ್ನುವ ಆರೋಪ ವಿದೆ. ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಂಸದ ಡಿ.ಕೆ.ಸುರೇಶ್​ಗೆ ಇಡಿ ನೋಟಿಸ್​ ನೀಡಿದೆ. ಐಶ್ವರ್ಯಾ ಗೌಡ ಇಡಿಗೆ ನೀಡಿದ ಹೇಳಿಕೆ ಹಾಗೂ ಸಾಕ್ಷಿಗಳನ್ನು ಆಧರಿಸಿ ಮಾಜಿ ಸಂಸದ ಡಿ.ಕೆ.ಸುರೇಶ್ ಗೆ ಸಮನ್ಸ್ ಜಾರಿ ಮಾಡಲಾಗಿದೆ.

 

Related Posts

Leave a Reply

Your email address will not be published. Required fields are marked *