ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳೂರ ಗ್ರಾಮದಲ್ಲಿ ಜಂಟಿ ಆಸ್ತಿ ಬೇರ್ಪಡಿಸುವ ವಿಚಾರಕ್ಕಾಗಿ ನಡೆದ ಕಲಹದಲ್ಲಿ ಒಡಹುಟ್ಟಿದ ತಮ್ಮನನ್ನೇ ಅಣ್ಣನನ್ನು ಕೊಂದಿದ್ದಾನೆ.
ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಮಾಭಿವೃದ್ದಿ ಕಚೇರಿ ಎದುರೇ ಕಲ್ಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ. ಶಿವಪ್ಪ (44) ಹತ್ಯೆಯಾದ ವ್ಯಕ್ತಿ, ಹುಣಸಗಿ ತಾಲೂಕಿನ ಬೊಮ್ಮನಗುಡ್ಡ ತಾಂಡಾದ ನಿವಾಸಿ ಶಿವಪ್ಪ ಆಸ್ತಿ ಜಂಟಿ ಖಾತೆ ಬೇರ್ಪಡಿಸುವ ಸಲುವಾಗಿ ಅಧಿಕಾರಿಗಳ ಬಳಿ ಮಾಹಿತಿ ಕಲೆ ಹಾಕಲು ಬಂದಿದ್ದರು.
ಈ ವೇಳೆ ಸಹೋದರರ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡು ಅಣ್ಣ ಚಂದಪ್ಪ ಶಿವಪ್ಪನಿಗೆ ಕಲ್ಲಿನಿಂದ ಹೊಡೆದಿದ್ದಾನೆ. ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಶಿವಪ್ಪ ಮೃತಪಟ್ಟಿದ್ದಾನೆ.