Menu

ಸಿಎಂ-ಡಿಸಿಎಂ ಮುಸುಕಿನ ಗುದ್ದಾಟವೇ ಆರ್‌ಸಿಬಿ ವಿಜಯೋತ್ಸವ ದುರಂತಕ್ಕೆ ಕಾರಣವೇ: ಆರ್‌. ಅಶೋಕ್‌

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ಶೀತಲ ಸಮರ, ಮುಸುಕಿನ ಗುದ್ದಾಟವೇ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ದುರಂತಕ್ಕೂ ಕಾರಣವಾಯ್ತಾ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ದುರಂತದ ಬಗ್ಗೆ  ಡಿಸಿಎಂ ಡಿಕೆ ಶಿವಕುಮಾರ್‌  ಅವರು ಪೊಲೀಸರು ಮೊದಲೇ ಅಪಾಯದ ಮುನ್ಸೂಚನೆ ನೀಡಿದ್ದರು, ಈ ದುರ್ಘಟನೆಗೆಪೊ ಲೀಸರು ಹೊಣೆಯಲ್ಲ ಎಂದು ಹೇಳಿದ್ದರು. ಆದರೆ  ಸಿಎಂ ಸಿದ್ದರಾಮಯ್ಯ ಅವರು ಈ ಸಂಬಂಧ  ಏಕಾಏಕಿ ಬೆಂಗಳೂರು ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು  ಹೇಳಿದ್ದಾರೆ.

ಏಕಾಏಕಿ ವಿಜಯೋತ್ಸವ ಆಯೋಜನೆ ಮಾಡಿದರೆ  ಬಂದೋಬಸ್ತ್‌ ಸೇರಿದಂತೆ ಸಮಸ್ಯೆಯಾಗಬಹುದು, ಒಂದೆರಡು ದಿನ ಸಿದ್ಧತೆ ಬಳಿಕ ಮಾಡಬಹುದು ಎಂದು ಪೊಲೀಸ್‌ ಇಲಾಖೆ ಸಲಹೆ ನೀಡಿತ್ತು ಎಂಬ ವಿಚಾರ ಮಾಧ್ಯಮಗಳಲ್ಲೂ ವರದಿಯಾಗಿತ್ತು, ಇಷ್ಟಾದ ಮೇಲೂ ಹೇಗೆ ಆಯೋಜನೆಗೊಂಡಿತು ಎಂಬ ಪ್ರಶ್ನೆಗೆ  ಉತ್ತರ ಸಿಕ್ಕಿಲ್ಲ.  ಅಷ್ಟೊಂದು ತರಾತುರಿಯಲ್ಲಿ ಏಕೆ ಇಂಥ ಕಾರ್ಯಕ್ರಮ ಮಾಡಿದ್ದು ಎಂಬ ಬಗ್ಗೆಯೂ ಅಶೋಕ್‌ ಸೇರಿದಂತೆ ರಾಜ್ಯ ಬಿಜೆಪಿ ಮುಖಂಡರು ಪ್ರಶ್ನಿಸಿದ್ದರು.

Related Posts

Leave a Reply

Your email address will not be published. Required fields are marked *