Menu

ಅಮರನಾಥ ಯಾತ್ರೆಗೆ ಬಿಗಿ ಭದ್ರತೆ; 180 ತುಕಡಿ ಕಾವಲು

ಜಮ್ಮು: ವಾರ್ಷಿಕ ಅಮರನಾಥ ಯಾತ್ರೆಗಾಗಿ ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು, ಜಮ್ಮು ಪ್ರದೇಶದಲ್ಲಿ ಅರೆಸೈನಿಕ ಪಡೆಗಳ 180ಕ್ಕೂ ಹೆಚ್ಚು ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತ್‌ನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಲೋಮೀಟರ್ ಪಹಲ್ಗಾಮ್ ಮಾರ್ಗ ಮತ್ತು ಗಂಡರ್ಬಾಲ್ ಜಿಲ್ಲೆಯ ೧೪ ಕಿಲೋಮೀಟರ್ ಬಾಲ್ತಲ್ ಮಾರ್ಗದ ಮೂಲಕ 3,880  ಮೀಟರ್ ಎತ್ತರದ ಪವಿತ್ರ ಗುಹೆ ದೇವಾಲಯಕ್ಕೆ ಹೋಗುವ ಅವಳಿ ಮಾರ್ಗಗಳಿಂದ ಜುಲೈ ೩ರಂದು ೩೮ ದಿನಗಳ ಸುದೀರ್ಘ ಯಾತ್ರೆ ಪ್ರಾರಂಭವಾಗಲಿದೆ.

ಯಾತ್ರಾರ್ಥಿಗಳ ಮೊದಲ ತಂಡವು ಯಾತ್ರೆ ಪ್ರಾರಂಭವಾಗುವ ಒಂದು ದಿನ ಮೊದಲು ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಕಾಶ್ಮೀರಕ್ಕೆ ತೆರಳಲಿದೆ.

“ಈ ವರ್ಷ ಯಶಸ್ವಿ ಯಾತ್ರೆಯನ್ನು ಖಾತರಿಪಡಿಸಲು ಆಡಳಿತವು ಸಿದ್ಧವಾಗಿದೆ ಮತ್ತು ಬದ್ಧವಾಗಿದೆ. ಯಾತ್ರೆಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಹು ಹಂತದ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದಾರೆ,” ಎಂದು ಜಮ್ಮು ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿಪಿ) ಭೀಮಸೇನ್ ತಿಳಿಸಿದರು.

ಯಾತ್ರೆಯ ಭದ್ರತೆ ಸೇರಿದಂತೆ ವ್ಯವಸ್ಥೆಗಳನ್ನು ಪರಿಶೀಲಿಸಲು ಜಮ್ಮುವಿನ ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ಅವರೊಂದಿಗೆ ಭೀಮಸೇನ್ ಅವರು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಹಿಂದಿನ ವರ್ಷಗಳಲ್ಲಿ ನಾವು ಭದ್ರತೆಯನ್ನು ಒದಗಿಸಿದಂತೆಯೇ, ಈ ವರ್ಷ ಅರೆಸೈನಿಕ ಪಡೆಗಳ ಸಂಖ್ಯೆ, ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ, ಅಥವಾ ಸಿಸಿಟಿವಿ ಕಣ್ಗಾವಲು ವಿಷಯದಲ್ಲಿ ಇನ್ನೂ ಉತ್ತಮ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಮೊದಲಿಗೆ ಹೋಲಿಸಿದರೆ, ಹೆಚ್ಚು ಜಾಗರೂಕ ಮತ್ತು ಬಹು-ಪದರಗಳ ಭದ್ರತೆಯನ್ನು ಖಾತರಿಪಡಿಸಲಾಗುತ್ತಿದೆ ಎಂದು ಭೀಮಸೇನರು ಹೇಳಿದರು.

Related Posts

Leave a Reply

Your email address will not be published. Required fields are marked *