Sunday, September 20, 2026
Menu

ಕರ್ನಾಟಕ ಬಿಜೆಪಿ ಭಿನ್ನಮತ ಮುಗಿಯದ ಕಥೆ

ಭಾರತೀಯ ಜನತಾ ಪಕ್ಷದಲ್ಲಿ ಹುದ್ದೆಗಳಿಗೆ ನೇಮಕ ಮಾಡುವಾಗ ಚುನಾವಣೆಗಿಂತ ನೇರ ನೇಮಕಾತಿ ಹೆಚ್ಚು ಚಾಲ್ತಿಯಲ್ಲಿದ್ದು, ನೇರ ನೇಮಕಾತಿ ನಿಟ್ಟಿನಲ್ಲಿ ಚಟವಟಿಕೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಈ ಪರಂಪರೆ ಮುಂದುವರಿದು ವಿಜಯೇಂದ್ರ ಅವರನ್ನು ಇನ್ನೊಂದು ಅವಧಿಗೆ ನೇಮಕ ಮಾಡಬಹುದು ಎನ್ನುವ ಊಹಾಪೋಹಗಳು ಕೇಳುತ್ತಿರುವಾಗ ಯತ್ನಾಳ್ ಗುಂಪು ದೆಹಲಿಗೆ ಹೊರಟಿದೆ ಮತ್ತು ಇನ್ನೆರಡು ದಿನಗಳಲ್ಲಿ ತನ್ನ ಅಭ್ಯರ್ಥಿ ಹೆಸರನ್ನು ಹೊರಹಾಕಲಿದೆ ಎನ್ನುವ ಮಾಹಿತಿ ಮಾಧ್ಯಮದಲ್ಲಿ ಹರಿದಾಡುತ್ತಿದೆ.  ಭಾಜಪದಲ್ಲಿನ ಭಿನ್ನಮತ ವರ್ಷಗಳಿಂದ ಸದ್ದು ಮಾಡುತ್ತಿದೆ. ಇತ್ತೀಚಿನವರೆಗೆ