Menu

ರೇಷ್ಮೆ ಬದಲು ಪಾಲಿಸ್ಟರ್ ದುಪ್ಪಟ್ಟ ಪೂರೈಕೆ: ತಿರುಪತಿ ದೇವಸ್ಥಾನಕ್ಕೆ 55 ಕೋಟಿ ರೂ. ವಂಚನೆ!

ತಿರುಪತಿ: ನಕಲಿ ತುಪ್ಪ ಮಾರಾಟ, ಕಾಣಿಕೆ ಡಬ್ಬಿ ಕಳವು ನಂತರ ಇದೀಗ ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ನಕಲಿ ರೇಷ್ಮೇ ವಸ್ತ್ರಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಶ್ರೇಷ್ಠ ಮಲ್ಬೇರಿ ರೇಷ್ಮೆ ಎಂದು ಪೂರೈಕೆದಾರರು ಪಾಲಿಸ್ಟರ್ ದುಪ್ಪಟ್ಟ ಹಾಗೂ ಶಾಲುಗಳನ್ನು ಪೂರೈಸಿ 55 ಕೋಟಿ ರೂ. ವಂಚಿಸಿರುವುದು ಬೆಳಕಿಗೆ ಬಂದಿದ್ದು, ಆಂಧ್ರಪ್ರದೇಶ ಸರ್ಕಾರ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದೆ.