Thursday, February 06, 2025
Menu

ಶಿವಲಿಂಗದ ಮೇಲೆ ಯುಪಿ ಸಿಎಂ ಮನೆ: ನೆಲಸಮಕ್ಕೆ ಅಖಿಲೇಶ್ ಆಗ್ರಹ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕೃತ ನಿವಾಸದ ಕೆಳಗೆ ಶಿವಲಿಂಗವಿದೆ ಮತ್ತು ಅದನ್ನು ಉತ್ಖನನ ಮಾಡಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಹೇಳಿದ್ದಾರೆ. ಲಕ್ನೋದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, ಲಕ್ನೋದ ಮುಖ್ಯಮಂತ್ರಿ ನಿವಾಸದ ಕೆಳಗೆ ಶಿವಲಿಂಗವಿದೆ. ಅದನ್ನು ಸಹ ಉತ್ಖನನ ಮಾಡಬೇಕು ಎಂದು ಆಗ್ರಹ ಮಾಡಿದರು. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪುರಾತತ್ವ ಸ್ಥಳಗಳ ಸಮೀಕ್ಷೆಗಳಿಂದ ಉಂಟಾಗಿರುವ ರಾಜಕೀಯ ಉದ್ವಿಗ್ನತೆಯ ಮಧ್ಯೆ ಅಖಿಲೇಶ್