Menu

ದಾರಿಗೆ ಅಡ್ಡಲಾಗಿದ್ದ ಮುಳ್ಳುಕಂಟಿ ತೆರವುಗೊಳಿಸಿ ಮಾದರಿಯಾದ ‘ಗೃಹಲಕ್ಷ್ಮೀ’ ಸವಿತಾ!

farmer

ಕೊಪ್ಪಳ: ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಹಣದಿಂದ ಬಂಗಾರ ಖರೀದಿಸಿದವರು, ಗೃಹಬಳಕೆ ಪರಿಕರ ಖರೀದಿಸಿದವರ ಸಂಖ್ಯೆಯೇ ಹೆಚ್ಚು. ಆದರೂ ವಿವಿಧೆಡೆ ಯೋಜನೆಯ ಫಲಾನುಭವಿ ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಮಾದರಿ ಆಗಿರುವುದನ್ನು ಅಲ್ಲಲ್ಲಿ ಕೇಳಿದ್ದೇವೆ. ಕೊಪ್ಪಳದಲ್ಲಿ ಇದೀಗ ಅಂಥ ಮಾದರಿಯದ್ದೇ ಕೆಲಸಕ್ಕೆ ಕೈ ಹಾಕಿದ್ದಾರೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಸವಿತಾ ನಾಗರಡ್ಡಿ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಿಧಾನಸಭಾ ಕ್ಷೇತ್ರಕ್ಕೆ ಬರುವ ಕುಕನೂರು ತಾಲೂಕಿನ ಯರೇಹಂಚಿನಾಳದಿಂದ ಕೋಟುಮಚಗಿ ಗ್ರಾಮಕ್ಕೆ ಹೋಗುವ. 4.ಕಿ.ಮೀಟರ್ ರಸ್ತೆಯುದ್ದಕ್ಕೂ ರಸ್ತೆ ಬದಿ ಬೆಳೆದು ನಿಂತಿರುವ ಮುಳ್ಳು ಕಂಟಿ ತೆರವಿಗೆ ಯಾರ ಸಹಾಯವೂ ಇಲ್ಲದೇ ಸವಿತಾ ಗಂಡ ಉಮೇಶ ನಾಗರಡ್ಡಿ ಮುಂದಾಗಿದ್ದಾರೆ. ಸವಿತಾ ಅವರ ಈ ಕಾರ್ಯಕ್ಕೆ ಆಸರೆಯಾಗಿದ್ದು ಸರಕಾರದ ಗೃಹಲಕ್ಷ್ಮೀ ಗ್ಯಾರಂಟಿ.!

ಪ್ರತಿ ತಿಂಗಳ ಎರಡು ಸಾವಿರ ರೂಪಾಯಿ. ರೂಪಾಯಿಗಳಂತೆ 11 ತಿಂಗಳದ ಗೃಹಲಕ್ಷ್ಮೀ ಯೋಜನೆಯಡಿ ಸವಿತಾ ಅವರ ಖಾತೆಗೆ ಜಮಾ ಆಗಿರುವ. 22 ಸಾವಿರ. ರೂಪಾಯಿಗಳನ್ನು ರಸ್ತೆ ಪಕ್ಕದಲ್ಲಿ ಬೆಳೆದು ನಿಂತ ಮುಳ್ಳು ಕಂಟಿ ತೆರವಿಗೆ ಜೆಸಿಬಿ ಬಾಡಿಗೆ ಪಡೆದು ಸ್ವಚ್ಛಗೊಳಿಸುವ ಮೂಲಕ ಮಾದರಿ ಹೆಜ್ಜೆ ಹಾಕಿದ್ದಾರೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಅಭಿವೃದ್ಧಿಯಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಅವರು ಮಾಧ್ಯಮಗಳಲ್ಲಿ ಹೇಳುತ್ತಾರೆ. ಇಲ್ಲಿ ಕುಕನೂರು ತಾಲೂಕಿನ ಯರೇಹಂಚಿನಾಳದಿಂದ ಕೊಟುಮಚಗಿ ಹೋಗುವ ರಸ್ತೆಗೆ ಶಾಸಕರಿಗೆ ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಈ ರಸ್ತೆ ಅಭಿವೃದ್ಧಿಪಡಿಸಿಲ್ಲ ಎಂದು ಅವರು ಉದಯಕಾಲದೊಂದಿಗೆ ಮಾತನಾಡಿದರು.

ಈ ಗ್ರಾಮದ ರಸ್ತೆಗೆ ಡಾಂಬರೀಕರಣ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ ಬಿಜೆಪಿ ಸರಕಾರದಲ್ಲಿ ಹಾಕಲಾಗಿದ್ದ ಡಾಂಬರ್ ಕಿತ್ತು ಗುಂಡಿಗಳು ಬಿದ್ದಿವೆ. ರಸ್ತೆ ಪಕ್ಕದಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಇದರಿಂದ ವಾಹನ ಸಂಚಾರಕ್ಕೆ ಅಡತಡೆ ಉಂಟಾಗುತ್ತದೆ. ಈ ರಸ್ತೆ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ರಾಯರಡ್ಡಿಯವರಿಗೆ ಯಲಬುರ್ಗಾ ಲೋಕೋಪಯೋಗಿ ಇಲಾಖೆ ಅಧಿಕಾರಿಯ ಕಚೇರಿಯಲ್ಲಿ ರೈತ ಸಂಘದಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.

ವರದಿ: ಬಸವರಾಜ ಕರುಗಲ್

Related Posts

Leave a Reply

Your email address will not be published. Required fields are marked *