Menu

ಪಂಜಾಬ್ ವಿರುದ್ಧ ಟಾಸ್ ಗೆದ್ದ ಆರ್ ಸಿಬಿ ಫೀಲ್ಡಿಂಗ್ ಆಯ್ಕೆ; ಮರಳಿದ ಹಾಜ್ಲೆವುಡ್

rcb vs pbks

ಮೊಹಾಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಟೂರ್ನಿಯ ಕ್ವಾಲಿಫೈಯರ್ -1 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಪಂಜಾಬ್ ಕಿಂಗ್ಸ್ ತಂಡವನ್ನು ಆಹ್ವಾನಿಸಿದೆ.

ಮೊಹಾಲಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದ ರಜತ್ ಪಟಿದಾರ್ ನಾಯಕನಾಗಿ ಮರಳಿದ್ದಾರೆ. ಮತ್ತೊಂದೆಡೆ ಗಾಯಗೊಂಡಿದ್ದ ಜೋಸ್ ಹಾಜ್ಲೆವುಡ್ ಮರಳಿದ್ದು, ನುಮಾನ್ ತುಷಾರ್ ಬದಲಿಗೆ ತಂಡಕ್ಕೆ ಮರಳಿದ್ದಾರೆ.

ಆರ್ ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ತಲಾ 19 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ 2 ಸ್ಥಾನ ಪಡೆಯುವ ಮೂಲಕ ಫೈನಲ್ ಗೆ ನೇರ ಪ್ರವೇಶ ಪಡೆಯಲು ಸೆಣಸುತ್ತಿವೆ.

ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್ ಕಿಂಗ್ಸ್ 11 ವರ್ಷದ ನಂತರ ಪ್ಲೇಆಫ್ ಗೆ ಪ್ರವೇಶಿಸಿದ್ದರೆ, ರಜತ್ ಪಟಿದಾರ್ ನಾಯಕತ್ವದ ಆರ್ ಸಿಬಿ 9 ವರ್ಷಗಳ ನಂತರ ಈ ಸಾಧನೆ ಮಾಡಿದೆ.

ಆರ್ ಸಿಬಿ ತಂಡದಲ್ಲಿ 10 ಆಟಗಾರರು ಅರ್ಧಶತಕ ಬಾರಿಸಿರುವುದು ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲು. ಅಲ್ಲದೇ ತಂಡಕ್ಕೆ ವಿರಾಟ್ ಕೊಹ್ಲಿ ಬಲ ಇದ್ದು, 5ನೇ ಬಾರಿ 600ಕ್ಕಿಂತ ಹೆಚ್ಚು ರನ್ ಗಳಿಸಿ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *