Menu

ರೇಪ್‌ ಮಾಡಿಸಿದ ಆರೋಪ: ಶಾಸಕ‌ ಮುನಿರತ್ನಗೆ ಹೈಕೋರ್ಟ್‌ ರಿಲೀಫ್

ಅತ್ಯಾಚಾರ ಮಾಡಿಸಿದ ಆರೋಪ ಪ್ರಕರಣದಲ್ಲಿ ಬಂಧನದ ಭೀತಿಯಿಂದ ಹೈಕೋರ್ಟ್ ಮೊರೆ ಹೋಗಿದ್ದ ಶಾಸಕ ಮುನಿರತ್ನಗೆ ರಿಲೀಫ್‌ ಸಿಕ್ಕಿದೆ.
ಈ ಪ್ರಕರಣ ಸಂಬಂಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್‌ ಸೂಚನೆ ನೀಡಿದೆ.

ಮಹಿಳೆಯೊಬ್ಬರ ಮೇಲೆ ಸಹಚರರಿಂದ ಅತ್ಯಾಚಾರ ಮಾಡಿಸಿದ ಪ್ರಕರಣದಲ್ಲಿ ಆರೋಪಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ
ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಉಳಿದ ಆರೋಪಿಗಳಿಗೂ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿರುವ ಹೈಕೋರ್ಟ್‌, 17ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಮುನಿರತ್ನ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಕೆಲಸ ಮಾಡಿದ್ದರಿಂದ ಟಿ ದಾಸರಹಳ್ಳಿಯಲ್ಲಿ ತನ್ನ ಮೇಲೆ ವ್ಯಭಿಚಾರ ದಂಧೆಯ ನಕಲಿ ಪ್ರಕರಣ ದಾಖಲಿಸಿ, ಬಂಧಿಸುವಂತೆ ಮಾಡಿದ್ದರು. 2020ರಲ್ಲಿ ಮುನಿರತ್ನ ಬಿಜೆಪಿಗೆ ಸೇರಿದ್ದು, ಬೆಂಬಲಿಗರಾದ ಕಮಲ್, ಚನ್ನಕೇಶವ, ವಸಂತ್ ಮತ್ತು ಇತರರು ನನ್ನ ವಿರುದ್ಧ ಕೊಲೆ ಯತ್ನ ಆರೋಪ ಪ್ರಕರಣ ದಾಖಲಿಸಿದ್ದರು. 11.06.2023ರ ರಾತ್ರಿ ಕಮಲ್ ಮತ್ತು ವಸಂತ್ ಮನೆಗೆ ಬಂದು ಮುನಿರತ್ನರನ್ನು ಭೇಟಿ ಮಾಡುವಂತೆ ಹೇಳಿದಂತೆ ಮುನಿರತ್ನ ಮನೆಗೆ ಭೇಟಿ ನೀಡಿದ್ದೆ. ಅವರುಮನೆಯ ಎರಡನೇ ಮಹಡಿಗೆ ಕರೆದೊಯ್ದು ವಸಂತ್ ಮತ್ತು ಚನ್ನಕೇಶವ ವಿವಸ್ತ್ರಗೊಳಿಸಿ ಬೇರೊಬ್ಬ ವ್ಯಕ್ತಿಯನ್ನು ಕರೆಸಿ ಚುಚ್ಚು ಮದ್ದನ್ನು ಕೊಡಿಸಿದ್ದರು ಎಂದು ಮಹಿಳೆ ಆರೋಪಿಸಿದ್ದರು.

Related Posts

Leave a Reply

Your email address will not be published. Required fields are marked *