ಬೆಂಗಳೂರು: ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಡಳಿತಕ್ಕೆ ಯಾವುದೇ ರೀತಿಯ ಜನ ವಿರೋಧವಿಲ್ಲ,ಕಳೆದ ಅನೇಕ ವರ್ಷಗಳಿಂದ ನಿತೀಶ್ ಕುಮಾರ್ ಉತ್ತಮ ಜನಪರ ಆಡಳಿತ ನಡೆಸಿದ್ದಾರೆ.ರಾಜ್ಯದಲ್ಲೂ ಜೆಡಿಯು ಪಕ್ಷವನ್ನು ಬಲ ಪಡಿಸೋಣ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದರು.
ಬೆಂಗಳೂರಿಗೆ ಜೆಡಿಯು ಪಕ್ಷದ ಬಿಹಾರದ ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಮನೀಶ್ ವರ್ಮಾ ಅವರ ರಾಜ್ಯ ಬೇಟೆಯನ್ನು ಸ್ವಾಗತಿಸಿ,ಪಕ್ಷದ ಕಚೇರಿಯಲ್ಲಿ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮನೀಶ್ ಕುಮಾರ್ ವರ್ಮ ಅವರು ನಿತೀಶ್ ಕುಮಾರ್ ಅವರಿಗೆ ಅತ್ಯಂತ ಹತ್ತಿರವಿದ್ದು,ರಾಜ್ಯ ಉಸ್ತುವಾರಿ ಪಕ್ಷವನ್ನು ಕಟ್ಟಿ ಬೆಳಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಅವರು ಇಡೀ ಬಿಹಾರದ ಸ್ಥಿತಿಗತಿ ಕುರಿತು ಮಾಹಿತಿ ಹೊಂದಿದ್ದಾರೆ.ರಾಜ್ಯದಲ್ಲಿ ಪ್ರಸ್ತುತ ಸರ್ಕಾರದಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ,ಭ್ರಷ್ಟಾಚಾರ ಮುಕ್ತ ಬಿಹಾರ ಮಾದರಿಯಲ್ಲಿ ಆಡಳಿತವನ್ನು ಜಾರಿ ತರಲು ಪಕ್ಷವನ್ನು ಸಂಘಟಿಸಬೇಕಿದೆ ಎಂದು ತಿಳಿಸಿದರು.
ರಾಜ್ಯ ಉಸ್ತುವಾರಿ ಮನೀಶ್ ಕುಮಾರ್ ವರ್ಮಾ ಮಾತನಾಡಿ, ಸದ್ಯದಲ್ಲೆ ಬಿಹಾರ ಚುನಾವಣೆ ಬರಲಿದೆ,ಹಿಂದಿನ ವರ್ಷದ ಜುಲೈ 7ರಂದು ನಾನು ಪಕ್ಷ ಸೇರ್ಪಡೆಗೊಂಡಿದ್ದೆ. ಒರಿಸ್ಸಾ ಕೇಡರ್ ಅಧಿಕಾರಿಯಾಗಿದ್ದೆ ಬಳಿಕ ಬಿಹಾರದಲ್ಲಿ ಇಪ್ಪತ್ತು ವರ್ಷಗಳ ಕಾಲ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ.ನಿತೀಶ್ ಕುಮಾರ್ ಅವರಲ್ಲಿ ನಿಜವಾದ ಸಮಾಜವಾದವನ್ನು ಕಾಣಬಹುದಾಗಿದೆ.
ರಾಮಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ, ಕರ್ಪೂರಿ ಠಾಕೋರ್, ಅಂಬೇಡ್ಕರ್ ಅವರ ಸಿದ್ದಾಂತವನ್ನು ನಿತೀಶ್ ಕುಮಾರ್ ಅವರಲ್ಲಿ ಕಾಣಬಹುದಾಗಿದೆ.ನಿತೀಶ್ ಕುಮಾರ್ ಅವರು ಬಿಹಾರಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೋಯ್ಯುತ್ತಿದ್ದಾರೆ,ರಸ್ತೆಗಳು ಇತರ ರಾಜ್ಯಗಳಿಗಿಂತ ಮಾದರಿಯಾಗಿವೆ, ಖಾಸಗಿ ಕಂಪನಿಗಳ ಸ್ಥಾಪನೆಯಿಂದ ನಿರುದ್ಯೋಗ ನಿವಾರಿಸಲಾಗುತ್ತದೆ.ನಿರಂತರವಾಗಿ ಕೃಷಿಗೆ ವಿದ್ಯುತ್ ನೀಡಲಾಗುತ್ತದೆ .ಬಿಹಾರದಲ್ಲಿ ಶೇ 33ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವು ಸಾಧಿಸಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ,ಅವರ ವಿರುದ್ಧ ಯಾವುದೇ ರೀತಿಯ ಆಡಳಿತ ವಿರೋಧಿ ನೀತಿ ಇಲ್ಲ,ಶಿಕ್ಷಣ,ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ದೊರೆಯುವಂತಾಗಿದೆ ಎಂದು ಹೇಳಿದರು.
ಬಿಹಾರದಲ್ಲಿ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ,ಚುನಾವಣೆಯನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಪ್ರಣಾಳಿಕೆ ವಿಚಾರವನ್ನು ಸಿದ್ಧಪಡಿಸಲಾಗುತ್ತಿದೆ.ಎನ್ ಡಿಎ ಜತೆಗೆ ಹೊಂದಾಣಿಕೆಯಲ್ಲಿ ಚುನಾವಣೆ ಎದುರಿಸಲಾಗುತ್ತದೆ,ಸೀಟು ಹಂಚಿಕೆ ಕುರಿತಂತೆ ವರಿಷ್ಢರು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.
ಜೆಡಿಯು ಪಕ್ಷ ಗ್ರಾಮೀಣ ಬೂತ್ ಮಟ್ಟದವರೆಗೆ ತಲುಪಬೇಕಿದೆ,ರಾಜ್ಯದಿಂದ ಜಿಲ್ಲಾ,ತಾಲೂಕು,ಗ್ರಾಮಮಟ್ಟದ ಬೂತ್ ವರೆಗೆ ಸಂಘಟನೆಯ ಅಗತ್ಯವಿದೆ.ಪಕ್ಷದ ಸಂಘಟನೆಯ ವಿಚಾರದಲ್ಲಿ ಎಲ್ಲ ಘಟಕಗಳ ರಚನೆಯಾಗಬೇಕು,ಬೂತ್ ಮಟ್ಟದಿಂದ ಪಕ್ಷದ ಸಂಘಟನೆಯಾಗದೇ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟಿಸಲು ಸಾಧ್ಯವಿಲ್ಲ,ಪ್ರತಿ ತಿಂಗಳು ಎಲ್ಲ ಘಟಕಗಳ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು, ಈ ಬಾರೀ ಆಗ್ನೇಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಾಲೂರು ನಾಗರಾಜ್ ಅವರನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಗುರಿಯಾಗಿದೆ.ಮಾಜಿ ಪ್ರಧಾನಿ ದೇವೇಗೌಡರನ್ನು ಬೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಜೆಡಿಯು ಯುವ ಘಟಕದ ರಾಜ್ಯಾಧ್ಯಕ್ಷ ರಾಜ್ಯ ಡಾ.ನಾಗರಾಜ್ ಮಾಲೂರು ಮಾತನಾಡಿ,ರಾಜ್ಯ ಉಸ್ತುವಾರಿಗಳಾಗಿದ್ದು ಮುಖ್ಯಮಂತ್ರಿ ನಿತೀಶ್ ಆಪ್ತರಾದ ಮನೀಶ್ ಕುಮಾರ್ ವರ್ಮ ಅವರು ಪಕ್ಷದ ರಾಜ್ಯ ಉಸ್ತುವಾರಿಗಳಾಗಿದ್ದಾರೆ,ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಇವರ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ.ಬರುವ ಆಗ್ನೇಯ ಕ್ಷೇತ್ರದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಪಕ್ಷ ಸ್ಪರ್ದಿಸಲಿದೆ ಎಂದು ತಿಳಿಸಿದರು.
ಬಿಹಾರದ ಲಕನ್ ವಸಿಷ್ಢ ಮಂಡಲ್, ಅಜಯ್, ಗಂಗರಾಜು, ರಾಜ್ಯ ರೈತ ವಿಭಾಗದ ರಾಜ್ಯಾಧ್ಯಕ್ಷ ಡಿ.ಕೆ.ಶ್ರೀನಿವಾಸ್, ಮಹಿಳಾ ಘಟಕ ಅಧ್ಯಕ್ಷೆ ಕಲಾವತಿ, ರಾಜ್ಯ ಕಾರ್ಯದರ್ಶಿ ರಂಗನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ , ರಾಜ್ಯ ಕಾರ್ಯದರ್ಶಿ ಕ್ರಾಂತಿ ಕಿಡಿಗೌಡ, ಯುವ ಜೆಡಿಯು ಉಪಾಧ್ಯಕ್ಷ ಪ್ರಭು ಡಿ.ಜೆ.ಶ್ರೀ ಶೈಲಗೌಡ ಹುಬ್ಬಳ್ಳಿ, ಶಾಂತಕುಮಾರಿ,ಶಕುಂತಲಾ ಶೆಟ್ಟಿ,ಶಂಕರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.