Saturday, September 19, 2026
Menu

ದಾವಣಗೆರೆಯಲ್ಲಿ ಕುಡಿದ ಮತ್ತಲ್ಲಿ ಪ್ರಿಯಕರನ ಕೊಲೆಗೈದ ಮಹಿಳೆ

ಮಂಜಪ್ಪ (40) ಕೊಲೆಯಾದ ವ್ಯಕ್ತಿ, ಶಬೀನಾ (38) ಕೊಲೆ ಮಾಡಿರುವ ಆರೋಪಿ ಮಹಿಳೆ. ಮದ್ಯದ ಅಮಲಿನಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ.  ಕುಡಿದಿದ್ದ ಮತ್ತಿನಲ್ಲಿ ಮಹಿಳೆಯೊಬ್ಬರು ಪ್ರಿಯಕರನನ್ನು ಸೀರೆಯಲ್ಲಿ ಕತ್ತು ಬಿಗಿದು ಹತ್ಯೆ ಮಾಡಿರುವ ಘಟನೆ ದಾವಣಗೆರೆ ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ. ಮಂಜಪ್ಪ ಪತ್ನಿ ಮತ್ತು ಮಕ್ಕಳಿಂದ ದೂರವೀದ್ದು, ಕಳೆದ ಆರು ವರ್ಷಗಳಿಂದ ವಿಚ್ಛೇದಿತೆ ಶಬೀನಾ ಜೊತೆ ವಾಸವಿದ್ದ. ಹದಡಿ ಠಾಣೆ ಪೊಲೀಸರು ಆರೋಪಿ

ಸಹಕಾರ ಪದ್ಧತಿಯಿಂದ ರೈತರ ಪ್ರಗತಿ: ಸಿಎಂ ಅಭಿಮತ

ಜೊತೆಗೂಡುವುದು ಆರಂಭ, ಜೊತೆಗೂಡಿ ಆಲೋಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಇದೇ ಸಹಕಾರ ತತ್ವ.‌ ಸಹಕಾರ ಪದ್ದತಿಯಿಂದ ರೈತರ ಪ್ರಗತಿ ಸಾಧ್ಯವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದರು. ತೀರ್ಥಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಅಮೃತ

ಅಂಗಡಿ ಗೋಡೆಗೆ ಬೈಕ್‌ ಗುದ್ದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಬ್ಬರ ಸಾವು

ಯಲಹಂಕದ ರಾಜಾನುಕುಂಟೆ ರಸ್ತೆಯಲ್ಲಿ ಅಂಗಡಿಯ ಗೋಡೆಗೆ ಬೈಕ್‌ ಗುದ್ದಿ ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ವಚನ್ ಮತ್ತು ಪ್ರದೀಪ್ ಮೃತಪಟ್ಟಿರುವ ವಿದ್ಯಾರ್ಥಿಗಳು. ಬೆಳಗಿನ ಜಾವ ಇಬ್ಬರೂ ಸುತ್ತಾಡಲು ಬಂದಿದ್ದಾಗ ಈ ದುರಂತ ನಡೆದಿದೆ, ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ

ನ್ಯಾಯಬದ್ಧ ವ್ಯಾಪಾರ ಆಗಬೇಕು, ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು: ಮುಖ್ಯಮಂತ್ರಿ

ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಹೊಸ ಅಧ್ಯಾಯ ಬರೆದಿರುವ ಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ಬೆಳ್ಳಂ ಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಮನದ ಮಾತುಗಳಿಗೆ ಕಿವಿಗೊಟ್ಟರು. ಬೆಳಗ್ಗೆ 6 ಗಂಟೆಗೆ

ಸರ್ಕಾರದಲ್ಲಿ ಹಣವಿಲ್ಲ, ಘೋಷಣೆ ಮಾಡುತ್ತಾರೆ, ಯಾವುದೂ ಜಾರಿಯಾಗಲ್ಲ: ಆರ್‌ ಅಶೋಕ

ಕಾಂಗ್ರೆಸ್‌ ಸರ್ಕಾರ ಏನೋ ಸಾಧನೆ ಮಾಡುತ್ತೇವೆ ಎಂದುಕೊಂಡು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಮಾಡಿದೆ. ಆದರೆ ಯಾವುದೇ ಯೋಜನೆಗಳು ಕರಾವಳಿಗೆ ಸಿಗುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು. ಮಾಗಡಿಯಲ್ಲಿ ಬಿಜೆಪಿಯ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ

ಅಧಿಕಾರಿಗಳ ಜೊತೆ ಚರ್ಚಿಸಿ ಕಸ್ತೂರಿ ರಂಗನ್ ವರದಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ: ಸಿಎಂ

ಕಸ್ತೂರಿ ರಂಗನ್ ವರದಿಗೆ ಸಂಬಂಧಿದಂತೆ ಈ ಭಾಗದ ಸಂಘಟನೆಗಳು ಹಾಗೂ ಜನ ಪ್ರತಿನಿಧಿಗಳು ಭೌತಿಕ ಸಮೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು. ಉಡುಪಿ ಜಿಲ್ಲೆಯ

76ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ

ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಣ ಅಡ್ವಾಣಿ ಕುಳಿತಿದ್ದ ದೇಶದ ಪಾರ್ಲಿಮೆಂಟ್‌ನಲ್ಲಿ  ಗಂಭೀರವಾಗಿ ಆಲೋಚಿಸುವ ವ್ಯಕ್ತಿಗಳಲ್ಲಿ ನರೇಂದ್ರ ಮೋದಿ ಅವರೇ ಮೊದಲಿಗರು. ಪ್ರಜಾತಂತ್ರ ದೇಶದಲ್ಲಿ ಓರ್ವ ಚಾಯ್‌ವಾಲ ಕೂಡಾ ಪ್ರಧಾನಿ ಆಗಬಲ್ಲ ಎಂಬುದಕ್ಕೆ ಭಾರತದ ಸಂವಿಧಾನ ಒಂದು ಅಪ್ಪಟ ನಿದರ್ಶನ. ಮೂರು

ರೇಣುಕಾ ಸ್ವಾಮಿ ಕೊಲೆ: ಸಾಕ್ಷ್ಯಗಳ ವಿಚಾರಣೆ ವೇಳೆ ದರ್ಶನ್‌ ಖುದ್ದು ಹಾಜರಿಗೆ ಹೈಕೋರ್ಟ್‌ ಅನುಮತಿ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವುದಕ್ಕೆ ಆರೋಪಿ ದರ್ಶನ್‌ಗೆ ಹೈಕೋರ್ಟ್‌ ಅವಕಾಶ ನೀಡಿದೆ. ಸಾಕ್ಷ್ಯ ವಿಚಾರಣೆ ವೇಳೆ ತನಗೆ ಖುದ್ದಾಗಿ ಹಾಜರಾಗಲು ಅವಕಾಶ ನೀಡುವಂತೆ ದರ್ಶನ್‌ ಸಲ್ಲಿಸಿದ್ದ ಮೇಲದ್ಮನವಿ ಅರ್ಜಿಯನ್ನು ಹೈಕೋರ್ಟ್‌

ತುಳು 2ನೇ ಅಧಿಕೃತ ರಾಜ್ಯ ಭಾಷೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಘೋಷಣೆ

ಮಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ಎರಡನೇ ಅಧಿಕೃತ ರಾಜ್ಯ ಭಾಷೆ ಎಂದು ಘೋಷಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು  ಸಿಎಂ ಘೋಷಣೆ ಮಾಡಿದ್ದಾರೆ. ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಮಹತ್ವದ ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ

ಕಾಲ್‌ ಪಿಕ್‌ ಮಾಡಲ್ಲವೆಂದು ಪತ್ನಿಯ ಕೊಲೆಗೈದ ಪತಿ

ಕಾಲ್‌ ಮಾಡಿದಾಗ ಪಿಕ್‌ ಮಾಡಿಲ್ಲವೆಂದು ಸಿಟ್ಟಿಗೆದ್ದ ಗಂಡನೊಬ್ಬ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಸಾಕ್ಷ್ಯ ನಾಶಕ್ಕಾಗಿ ಕುದಿಯುವ ಎನ್ನೆ ಸುರಿದಿರುವ ಘಟನೆ ಬೆಂಗಳೂರಿನ ಮೈಕೋ ಲೇಔಟ್‌ ಸಮೀಪ ಬಿಳೇಕಹಳ್ಳಿಯಲ್ಲಿ ನಡೆದಿದೆ. ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಆರೋಪಿ, ಪತ್ನಿ ಗುಂಜಾ