Menu

ತುಮಕೂರಿನಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಜೇನುನೊಣ ದಾಳಿಗೆ ಬಲಿ

ತುಮಕೂರಿನಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಜೇನುನೊಣಗಳು ದಾಳಿ ಮಾಡಿದ್ದರಿಂದ ಕಾರು ಶೋರೂಂ ಮೇಲ್ವಿಚಾರಕ ವಿಜಯ್ ಪ್ರಕಾಶ್(65) ಎಂಬವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ಕೈದು ಜನ ಅಸ್ವಸ್ಥರಾಗಿದ್ದಾರೆ. ಘಟನೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ಕೋತಿ ಕೀಟಲೆ ಮಾಡಿದ ಹಿನ್ನೆಲೆ ಏಕಾಏಕಿ ಜೇನು ನೊಣಗಳು ದಾರಿ ಹೋಕರ ಮೇಲೆ ದಾಳಿ ನಡೆಸಿದೆ.  ವಿಜಯ್ ಪ್ರಕಾಶ್ ಕೆಲಸ ಮುಗಿಸಿ ಸಂಜೆ ಮನೆಗೆ ಬರುವಾಗ ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್

ಇರಾನ್‌- ಇಸ್ರೇಲ್‌ ಸಂಘರ್ಷ: ಭಾರತದಲ್ಲಿ ಅಗತ್ಯ ಸರಕುಗಳ ಕಾಯ್ದೆ ಸೆಕ್ಷನ್ 3 ಜಾರಿ

ಇರಾನ್‌- ಇಸ್ರೇಲ್‌ ಯುದ್ಧದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆಯ ಬಳಿಕ ಸಂಘರ್ಷ ತೀವ್ರಗೊಂಡಿದ್ದು, ೨೧ನೇ ದಿನಕ್ಕೆ ಕಾಲಿಟ್ಟಿದೆ. ಪರಿಣಾಮವಾಗಿ ಮಧ್ಯಪ್ರಾಚ್ಯ ಹೊತ್ತಿ ಉರಿಯುವ ಸ್ಥಿತಿ ನಿರ್ಮಾಣಗೊಂಡಿದ್ದು, ಭಾರತದಲ್ಲೂ. ಕಚ್ಚಾತೈಲ, ಗ್ಯಾಸ್ ಸಮಸ್ಯೆ ಬಳಿಕ ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ರೂಪಾಯಿ ಮೌಲ್ಯವೂ ಕುಸಿಯುತ್ತಿದ್ದು, ಬ್ಲ್ಯಾಕ್

ಹೆಣ್ಣುಮಗುವೆಂದು ವಿಷವುಣಿಸಿ ಕೊಂದ ತಂದೆಯ ಬಂಧನ

15 ದಿನದ ಹೆಣ್ಣು ಶಿಶು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ವಿಷವುಣಿಸಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಭೀಮರಾಯ ಚಿಪ್ಪಾಡೆ ಬಂಧಿತ ತಂದೆ. ಮಾ.17ರಂದು ಬೆಳಗಾವಿ ತಾಲೂಕಿನ

ಬಿಸಿಲಿಗೆ ಗುಡ್-ಬೈ ಹೇಳಿ; ಬೆಂಗಳೂರಿನ ಈ ತಂಪಾದ ತಾಣಗಳಲ್ಲಿ ಎಂಜಾಯ್ ಮಾಡಿ

ಬೇಸಿಗೆಯ ರಜೆ ಶುರುವಾಗಿದೆ,  ದಿನನಿತ್ಯದ ಜಂಜಾಟದಿಂದ ವಿರಾಮ ಪಡೆದು, ನಿಮಗಿಷ್ಟವಾದ ರೀತಿಯಲ್ಲಿ ಈ ರಜೆಯನ್ನು ಕಳೆಯಲು ಇದು ಸರಿಯಾದ ಸಮಯ. ಭಾರತದ ನೆಚ್ಚಿನ ಮನರಂಜನಾ ತಾಣ BookMyShow ಈ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮಗಳ

ಶೇ‌ 50 ಮಹಿಳಾ ಮೀಸಲು ಮಸೂದೆ ಸಂಸತ್ತಿನಲ್ಲಿ ಅನುಮೋದನೆಯಾಗಲಿ: ಜಿ.ಪರಮೇಶ್ವರ

ಸಂಸತ್ತಿನಲ್ಲೂ ಮಹಿಳಾ ಮೀಸಲಾತಿ ಮಸೂದೆ ಅನುಮೋದನೆ ಆಗಬೇಕು. ಇದರಿಂದ ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ. 50 ಸ್ಥಾನಗಳ ಅವಕಾಶ ಸಿಗಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ

ತುಮಕೂರು ಲಾಕಪ್‌ ಡೆತ್‌ ಸಿಐಡಿಗೆ ಎಂದ ಸಚಿವ ಪರಮೇಶ್ವರ್‌

ತುಮಕೂರಿನಲ್ಲಿ ನಡೆದಿರುವ ಲಾಕಪ್ ಡೆತ್ ಕೇಸ್‌ನ ಸಿಐಡಿ ತನಿಖೆಗೆ ಆದೇಶಿಸಿರುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಗುರುವಾರ ವಿಚಾರಣೆ ಮಾಡುವಾಗಲೇ ವ್ಯಕ್ತಿಯ ಸಾವು ಆಗಿದ್ದು, ಕಾರಣವೇನು ಎಂಬುದು ಗೊತ್ತಾಗಿಲ್ಲ. ಅದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಿರುವುದಾಗಿ ತಿಳಿಸಿದ್ದಾರೆ.

ಮತ್ತೆ ದಾಳಿಯಾದ್ರೆ ಯಾವ ಒತ್ತಡಕ್ಕೂ ಮಣಿಯದೆ ಅನಿಯಂತ್ರಿತ ಪ್ರತಿದಾಳಿ ಎಚ್ಚರಿಕೆಯಿತ್ತ ಇರಾನ್‌

ತನ್ನ ಇಂಧನ ಮೂಲಸೌಕರ್ಯದ ಮೇಲೆ ನಡೆದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮತ್ತೊಮ್ಮೆ ಇಂತಹ ದಾಳಿ ನಡೆದರೆ ಯಾವುದೇ ಒತ್ತಡಕ್ಕೂ ಮಣಿಯದೆ ಅನಿಯಂತ್ರಿತ ಪ್ರತಿದಾಳಿ ನಡೆಸುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದೆ. ಇರಾನ್‌- ಇಸ್ರೇಲ್‌ ಸಂಘರ್ಷದ ನಡುವೆ ಅಮೆರಿಕ ಇರಾನ್‌ ವಿರುದ್ಧ

ಬೆಂಗಳೂರಿನಲ್ಲಿ ಲವ್‌ ನಿರಾಕರಿಸಿದ ಮೂರು ಮಕ್ಕಳ ತಾಯಿಯ ಕೊಲೆ

ಮದುವೆಯಾಗಿ ಮೂರು ಮಕ್ಕಳಿರುವ ಮಹಿಳೆಗೆ ಲವ್‌ ಮಾಡು ಎಂದು ಪೀಡಿಸುತ್ತಿದ್ದಾತ ಆಕೆ ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಫಿರ್ದೋಸ್ ಬಾನು ಕೊಲೆಯಾದ ಮಹಿಳೆ. ಆಟೋಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ ಹಫೀಸ್​​, ಮನೆಗೆಲಸ ಮಾಡುತ್ತಿದ್ದ ಫೀರ್ದೋಸ್ ಬಾನು

ಸಿಂಧನೂರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸ್ಸಾಪುರ ಇಜೆ ಗ್ರಾಮದ ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ದೇವೇಂದ್ರಪ್ಪ ಸ್ವಾಮಿ (58) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದೇವೇಂದ್ರಪ್ಪ ಸ್ವಾಮಿ ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಮಠ ಕಟ್ಟಿದ್ದರು. ಮುಳ್ಳೂರು (ಇಜೆ) ಗ್ರಾಮದ

ಪೂಜೆಗೆಂದು ಮುತ್ತೈದೆಯರ ಕರೆಸಿ ಚಿನ್ನ ದೋಚಿ ಪರಾರಿಯಾಗುತ್ತಿದ್ದ ಪ್ರವೀಣ್‌ ಭಟ್‌ ಅರೆಸ್ಟ್‌

ದೇವಸ್ಥಾನಗಳ ಅರ್ಚಕರೊಂದಿಗೆ ಸ್ನೇಹ ಬೆಳೆಸಿ ನಂಬಿಸಿ ಅವರ ಮನೆಯ ಮಹಿಳೆಯರಿಂದ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದ ಪ್ರವೀಣ್ ಭಟ್ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯ ಸೋಗಿನಲ್ಲಿ ಅರ್ಚಕರ ಪರಿಚಯ ಮಾಡಿಕೊಂಡು ಹೊಸ ಅಂಗಡಿ ಪೂಜೆಗೆ ಮುತ್ತೈದೆಯರು ಬೇಕು ಎಂದು ನಂಬಿಸಿ ಚಿನ್ನಾಭರಣ