ನಾವೀನ್ಯತೆ, ಬೆಳವಣಿಗೆ ಮತ್ತು ವಾಸಯೋಗ್ಯತೆಯನ್ನು ಸಮತೋಲನಗೊಳಿಸುವ ಸುಸ್ಥಿರ ಬೆಂಗಳೂರನ್ನು ನಿರ್ಮಿಸುವ ಅಗತ್ಯವಿದೆ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ.
ನವದೆಹಲಿಯಲ್ಲಿ ಡೆಲಾಯ್ಟ್ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಸಮಾವೇಶ ‘ಆರೋಹಣ: ಗ್ರೋತ್ ವಿತ್ ಇಂಪ್ಯಾಕ್ಟ್ ಗವರ್ನಮೆಂಟ್ ‘ಸಮ್ಮಿಟ್’ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬೆಂಗಳೂರಿನಿಂದ ಆಚೆಗೆ ತಂತ್ರಜ್ಞಾನದ ಬೆಳವಣಿಗೆಯ ಅಗತ್ಯವನ್ನು ಹೇಳಿದರು.
ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿ ಕುರಿತು ವಿವಿಧ ಕ್ಷೇತ್ರಗಳ ನಾಯಕರೊಂದಿಗೆ ಚರ್ಚಿಸಿದರು. ಜವಾಬ್ದಾರಿಯುತ ಮತ್ತು ಸುಸ್ಥಿರ ಎಐ ಮೇಲೆ ಕರ್ನಾಟಕದ ಸ್ಪಷ್ಟ ಗಮನ, ನಿಪುಣದಂತಹ ಯೋಜನೆಗಳ ಮೂಲಕ ಉದ್ಯಮ-ನೇತೃತ್ವದ ಕೌಶಲ್ಯದ ಪ್ರಾಮುಖ್ಯತೆ ಹಾಗೂ ನಮ್ಮ ಸ್ಥಳೀಯ ಆರ್ಥಿಕ ವೇಗವರ್ಧನೆ ಕಾರ್ಯಕ್ರಮ (LEAP) ಮೂಲಕ ಬೆಂಗಳೂರಿನಿಂದ ಆಚೆಗೆ ತಂತ್ರ ಜ್ಞಾನದ ಬೆಳವಣಿಗೆಯನ್ನು ಕೊಂಡೊಯ್ಯವ ಕುರಿತು ಸಂವಾದದಲ್ಲಿ ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕರ್ನಾಟಕವು ರಾಷ್ಟ್ರೀಯ ನಾಯಕನಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ನಮ್ಮ ಡೀಪ್ಟೆಕ್ ದಶಕದ ಮೂಲಕ, ನಾವು ದೀರ್ಘಾವಧಿಯ, ಭವಿಷ್ಯಕ್ಕೆ ಸಿದ್ಧವಾದ ಹೂಡಿಕೆಗಳನ್ನು ಮಾಡುತ್ತಿದ್ದೇವೆ. ಸ್ಟಾರ್ಟಪ್ ಇಂಡಿಯಾ, ಡಿಜಿಟಲ್ ಇಂಡಿಯಾ, AI ಮಿಷನ್ ಅಥವಾ ಕ್ವಾಂಟಮ್ ಮಿಷನ್ ಆಗಿರಲಿ, ಈ ರಾಷ್ಟ್ರೀಯ ಕಾರ್ಯಕ್ರಮಗಳು ಕರ್ನಾಟಕದಲ್ಲಿ ತಮ್ಮ ಪ್ರಬಲ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತವೆ ಮತ್ತು ಕರ್ನಾಟಕವು ಭಾರತದ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.


