ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೆನಾಳ ಗ್ರಾಮದ ಆಲಮಟ್ಟಿ ಎಡದಂತೆ ಕಾಲುವೆ ಮೇಲೆ ಈ ಘಟನೆ ನಡೆದಿದೆ.
13 ತಿಂಗಳ ಮಗು, 5 ವರ್ಷದ ತನು, 3 ವರ್ಷದ ರಕ್ಷಾ, 2 ವರ್ಷದ ಹುಸೇನ್ ಮೃತಪಟ್ಟಿದ್ದು, ಕಾಲುವೆಗೆ ಹಾರಿದ ತಾಯಿ ಭಾಗ್ಯಳನ್ನು ಮೀನುಗಾರರು ರಕ್ಷಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭಾಗ್ಯ ಈ ಮಕ್ಕಳ ಜೊತೆ ಆತ್ಮಹತ್ಯಗೆ ಯತ್ನಿಸಿದ್ದಾರೆ. ಮೀನುಗಾರರು ಇಬ್ಬರು ಹೆಣ್ಣು ಮಕ್ಕಳ ಶವ ಹೊರತೆಗೆದಿದ್ದು, ಇನ್ನಿಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ.