Wednesday, August 06, 2025
Menu

Rain death- ಬೆಳಗಾವಿಯಲ್ಲಿ ಹಳ್ಳ ದಾಟುವಾಗ ಬೈಕ್‌ ಸಮೇತ ಕೊಚ್ಚಿ ಹೋದ ವ್ಯಕ್ತಿ

ಬೆಳಗಾವಿಯ ತಾರಿಹಾಳ ಬಳಿ ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಬೈಕ್ ಸಮೇತ ವ್ಯಕ್ತಿ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಪಂಚಾಯತ್‌ ಸಿಬ್ಬಂದಿ ಸುರೇಶ್‌ ನಿಜಗುಣಿ ಗುಂಡನ್ನವರ್ (50) ಕೊಚ್ಚಿ ಹೋಗಿರುವ ವ್ಯಕ್ತಿ.

ಪಂಚಾಯತ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಈ ದುರಂತ ನಡೆದಿದೆ. ಸುರೇಶ್‌ಗಾಗಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿಯಲ್ಲಿ ಮುಂಗಾರು ಮಳೆಯ ಆರ್ಭಟ ಹೆಚ್ಚಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹುಬ್ಬಳ್ಳಿ, ಬೀದರ್‌, ವಿಜಯಪುರಗಳಲ್ಲೂ ಭಾರಿ ಮಳೆಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ನಾಲತವಾಡಿ, ಬಸವನ ಬಾಗೇವಾಡಿ, ಮುದ್ದೆ ಬಿಹಾಳ, ಜಮಖಂಡಿ, ಮುದ್ದೇಬಿಹಾಳಗಳ್ಲಲೂ ವ್ಯಾಪಕ ಮಳೆ ಸುರಿದಿದೆ.

Related Posts

Leave a Reply

Your email address will not be published. Required fields are marked *