Menu

ನಂಜನಗೂಡಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶ: ವ್ಯಕ್ತಿ, ಎರಡು ಹಸು ಬಲಿ

ಮೈಸೂರು‌ ಜಿಲ್ಲೆಯ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ವ್ಯಕ್ತಿ ಹಾಗೂ ಎರಡು ಹಸುಗಳು ಪ್ರಾಣ ಕಳೆದುಕೊಂಡಿವೆ.

ಸಿದ್ದರಾಜು (52) ಮತ್ತು ಅವರು ಜಮೀನಿನಲ್ಲಿ ಮೇಯಿಸುತ್ತಿದ್ದ ಎರಡು ಹಸುಗಳು ಮೃತಪಟ್ಟಿವೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಹಸುಗಳಿಗೆ ಸ್ಪರ್ಶವಾದಾಗ ಹಸುಗಳನ್ನು ರಕ್ಷಿಸಲು ಹೋದ ಸಿದ್ದರಾಜುವಿಗೂ ವಿದ್ಯುತ್ ಸ್ಪರ್ಶವಾಗಿ ಅಸು ನೀಗಿದ್ದಾರೆ. ಸಂಜೆಯಾದರೂ ಸಿದ್ದರಾಜು ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಜಮೀನಿಗೆ ಬಂದು ನೋಡಿದಾಗ ಸಿದ್ದರಾಜು ಹಾಗೂ ಎರಡು ಹಸುಗಳು ಮೃತಪಟ್ಟಿರುವುದು ಕಂಡು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗು ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *