ಮಹಿಳೆ
ನಿರೂಪಕಿ ಅನುಶ್ರೀ ಮದುವೆ ಆ.28ಕ್ಕೆ
ಕನ್ನಡದ ಹೆಸರಾಂತ ನಿರೂಪಕಿ, ನಟಿ ಅನುಶ್ರೀ ಅವರು ಕೊಡಗು ಮೂಲದ ರೋಷನ್ ಜೊತೆ ಆ.28 ರಂದು ಮದುವೆಯಾಗುತ್ತಿದ್ದು, ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ರಾಮಮೂರ್ತಿ ಅವರ ಪುತ್ರ ರೋಷನ್ ಅವರನ್ನು ಅಂದು ಬೆಳಗ್ಗೆ 10:56ಕ್ಕೆ ಅನುಶ್ರಿ ವಿವಾಹವಾಗಲಿದ್ದಾರೆ. ” ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ” ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ. ಅನುಶ್ರೀಯ ಮದುವೆಗೆ
ವಿದ್ಯಾರ್ಥಿನಿಯರು, ಮಹಿಳೆಯರ ಸುರಕ್ಷತೆಗಾಗಿ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್
ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸ್ ಒಳಗೊಂಡ ಅಕ್ಕ ಪಡೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ,
ಒಂದೇ ಬಾರಿಗೆ ನೀಟ್ ಪರೀಕ್ಷೆ ಪಾಸಾದ ಅಮ್ಮ-ಮಗಳು
ಚೆನ್ನೈ: ನೀಟ್ ಪರೀಕ್ಷೆಯನ್ನು ಬಲವಾಗಿ ವಿರೋಧಿಸುವ ತಮಿಳುನಾಡಿನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. ತಾಯಿ-ಮಗಳು ಇಬ್ಬರೂ ವೈದ್ಯಕೀಯ ಕೋರ್ಸ್ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆ ಪಾಸಾಗಿದ್ದಾರೆ. ವಿಶೇಷವೆಂದರೆ, ಕುಟುಂಬ ನೆಲೆಸಿರುವ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲೇ ಎಂಬಿಬಿಎಸ್ ಸೀಟು ದೊರೆತಿದೆ. ತಾಯಿ ಅದೇ ಕಾಲೇಜಿನಲ್ಲಿ
ವಿಚ್ಛೇದನ ವೇಳೆ 12 ಕೋಟಿ ರೂ., ಮನೆ, ಬಿಎಂಡಬ್ಲ್ಯೂ ಕಾರು ಬೇಕೆಂದ ಮಹಿಳೆ: ನೀವೇ ಸಂಪಾದಿಸಿ ಎಂದ ಸುಪ್ರೀಂ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು ಗಂಡನಿಂದ 12 ಕೋಟಿ ರೂ., ಮುಂಬೈನಲ್ಲಿ ಮನೆ, ಬಿಎಂಡಬ್ಲ್ಯೂ ಕಾರು ಬೇಕೆಂದು ಬೇಡಿಕೆಯಿಟ್ಟಿದ್ದು, ಸುಪ್ರೀಂ ಕೋರ್ಟ್ ಆಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಮಹಿಳೆ ಮದುವೆಯಾಗಿ 18 ತಿಂಗಳಾಗಿತ್ತು. ಅಷ್ಟರಲ್ಲೇ ದಾಂಪತ್ಯ ಬೇಸರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೀವನಾಂಶವಾಗಿ
ನಿರೂಪಕಿ ಅನುಶ್ರೀ ಮದುವೆ ಆಗಸ್ಟ್ 28ಕ್ಕೆ ಫಿಕ್ಸ್ ?
ಕನ್ನಡದ ನಿರೂಪಕಿ ಅನುಶ್ರೀ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ. ಕುಟುಂಬಸ್ಥರು ನೋಡಿದ ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀಯ ಮದುವೆ ನಡೆಯಲಿದೆ ಎನ್ನಲಾಗಿದೆ. ಹುಡುಗನಿಗೆ ಸಂಬಂಧಿಸಿದಂತೆ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ
ಕಾಗೆ ಎತ್ತಿಕೊಂಡು ಹೋಗಿದ್ದ ಚಿನ್ನದ ಬಳೆ ಮೂರು ವರ್ಷ ಬಳಿಕ ಕೈಗೆ
ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್ನಲ್ಲಿ ಮೂರು ವರ್ಷದ ಹಿಂದೆ ಕಾಗೆಯೊಂದು ಮಹಿಳೆಯ ಚಿನ್ನದ ಬಳೆ ಎತ್ತಿಕೊಂಡು ಹೋಗಿದ್ದು, ಅದು ಈಗ ಕೈ ಸೇರಿದೆ. ಮೂರು ವರ್ಷದ ಹಿಂದೆ ರುಕ್ಮಿಣಿ ಎಂಬಾಕೆ ಕೆಲಸ ಮಾಡುವಾಗ 12 ಗ್ರಾಂ ಚಿನ್ನದ ಬಳೆಯನ್ನು ಕೈಯಿಂದ ತೆಗೆದಿಟ್ಟಿದ್ದರು. ತಕ್ಷಣ
ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ವಂಶಿಗೆ ಸಿಎಂ ಶುಭ ಹಾರೈಕೆ
ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ ವಂಶಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಅವರಿಗೆ ಮುಖ್ಯಮಂತ್ರಿ ಶುಭ ಕೋರಿದರು. ಮಿಸ್ ಯೂನಿವರ್ಸ್ ಕರ್ನಾಟಕ 2025 ಸ್ಪರ್ಧೆ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಐದನೇ ಮಹಿಳಾ ಅಧ್ಯಕ್ಷೆ ಬಾನು ಮುಷ್ತಾಕ್
ಈ ವರ್ಷದ ಡಿಸೆಂಬರ್ನಲ್ಲಿ ಬಳ್ಳಾರಿಯಲ್ಲಿ ನಡೆಯಲಿರುವ 88 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಆಯ್ಕೆಯಾಗುವ ಮೂಲಕ ಈ ಗೌರವವನ್ನು ಪಡೆದ ಐದನೇ ಮಹಿಳೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಬಾನು
BMTC ಸಿಬ್ಬಂದಿಗೆ ಹಲ್ಲೆ, ಅವಮಾನದ ವಿರುದ್ಧ ಸೂಕ್ತ ಕ್ರಮಕ್ಕೆ ಸಾರಿಗೆ ಸಚಿವರಿಂದ ಗೃಹ ಸಚಿವರಿಗೆ ಮನವಿ
BMTC ಸಿಬ್ಬಂದಿಗೆ ಹಲ್ಲೆ, ಅವಮಾನದ ವಿರುದ್ಧ ಸೂಕ್ತ ಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ರಿಂಡಿ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. BMTC ಸಿಬ್ಬಂದಿಗೆ ಹಲ್ಲೆ, ಅವಮಾನ ಹಲವಾರು ಪ್ರಕರಣಗಳು ಈ ಹಿಂದೆ ನಡೆದಿದ್ದು, ನಾನು ಪೊಲೀಸ್ ಆಯುಕ್ತರು
ಮಹಿಳಾ ಪೊಲೀಸ್ಗೆ ಒದ್ದು ಅವಮಾನ: ಉಪ್ಪಾರಪೇಟೆ ಹೆಡ್ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳಾ ಪೇದೆಗೆ ಹೆಡ್ ಕಾನ್ಸ್ಟೇಬಲ್ ಬಿ.ಜಿ.ಗೋವಿಂದರಾಜು ಬೂಟ್ ಕಾಲಿನಲ್ಲಿ ಒದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ರಾತ್ರಿ ಸಿಬ್ಬಂದಿ ನಡುವೆ ಗಲಾಟೆ