Menu

ಹಿಂದಿ ಕಲಿತರೆ ಉತ್ತರ ಭಾರತದ ಸಂಪರ್ಕ ಉತ್ತಮ: ಚಂದ್ರಬಾಬು ನಾಯ್ಡು

ಕನ್ನಡಿಗರು, ತಮಿಳರು, ತೆಲುಗರು ಹಿಂದಿ ಕಲಿಯಬೇಕು, ಹಿಂದಿ ಕಲಿತರೆ ಉತ್ತರ ಭಾರತದ ಜೊತೆಗಿನ ಸಂಪರ್ಕ ಉತ್ತಮವಾಗುತ್ತದೆ. ಉತ್ತರ-ದಕ್ಷಿಣ ಭಾರತದ ನಡುವಣ ಅಂತರ ಕಡಿಮೆಯಾಗುತ್ತದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಹೈದ್ರಾಬಾದ್ ಜನರಿಗೆ ದಿಲ್ಲಿ ಜೊತೆ ಉತ್ತಮ ಸಂಪರ್ಕ ಇದೆ, ಏಕೆಂದರೆ ಹೈದರಾಬಾದ್ ಜನರಿಗೆ ಹಿಂದಿ ಗೊತ್ತಿದೆ. ಮಾತೃಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಜೊತೆಯಲ್ಲೇ ಹಿಂದಿಯನ್ನೂ ಕಲಿಯಬೇಕು, ಇದು ಒಳ್ಳೆಯದು. ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಪರಿಗಣಿಸಿ ಕಲಿಯಬೇಕು ಎಂದು ಖಾಸಗಿ ಸುದ್ದಿ ವಾಹಿನಿ ಸಂದರ್ಶನವೊಂದರಲ್ಲಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *