Menu

ಹಲವು ವರ್ಷಗಳಿಂದ ಗುತ್ತಿಗೆದಾರರಿಗೆ ಹಣ ಪಾವತಿಸದ ಕೆಎಸ್​ಸಿಎ

ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ(ಕೆಎಸ್​ಸಿಎ)ಯು ಹಲವು ಕಾಮಗಾರಿಗಳ ನಿರ್ವಹಣೆ ಮಾಡಿದ ಗುತ್ತಿಗೆದಾರರಿಗೆ ಹಣ ನೀಡದೆ ತೊಂದರೆ ನೀಡುತ್ತಿದೆ. ಮೈದಾನಗಳ ಮೇಲ್ದರ್ಜೆ ನವೀಕರಣ, ಶೌಚಗೃಹ, ಕ್ರಿಕೆಟ್​ ಅಕಾಡೆಮಿ ನಿರ್ಮಾಣ ಕಾಮಗಾರಿಗಳನ್ನು ಖಾಸಗಿ ಕಂಪೆನಿಗೆ ಗುತ್ತಿಗೆ ನೀಡಿರುವ ಕೆಎಸ್​ಸಿಎ ಗುತ್ತಿಗೆದಾರರಿಗೆ 15 ಕೋಟಿ ಮೊತ್ತ ಪಾವತಿಸಲು ಬಾಕಿ ಇದೆ.

ಸಂಸ್ಥೆ ಹಲವು ವರ್ಷಗಳಿಂದ ಹಣ ಪಾವತಿಸದ ಕಾರಣ 25 ಗುತ್ತಿಗೆದಾರರು ಸಾಕಷ್ಟು ಬಾರಿ ಪಾವರಿಸುವಂತೆ ಮನವಿ ಮಅಡಿದ್ದಾರೆ. ಆದರೆ ಕೆಎಸ್​ಸಿಎ ಆಡಳಿತ ಮಂಡಳಿಯ ಪದಾಧಿಕಾರಿಗಳು ದರ್ಪ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿನ್ನಸ್ವಾಮಿ ಮೈದಾನ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಮೈದಾನಗಳನ್ನು ಕೆಎಸ್​ಸಿಎ ನಿರ್ವಹಣೆ ಮಾಡಿಸುತ್ತಿದೆ. ಪ್ರತಿ ವರ್ಷ ನವೀಕರಣ, ಕ್ರಿಕೆಟ್​ ಅಕಾಡೆಮಿ ನಿರ್ಮಾಣ, ಮೈದಾನಗಳ ಮೇಲ್ದರ್ಜೆ ಸೇರಿ ವಿವಿಧ ಕಾಮಗಾರಿಗಳನ್ನುಟೆಂಡರ್​ ಮೂಲಕ ಗುತ್ತಿಗೆದಾರರಿಗೆ ನೀಡುತ್ತಿದೆ. ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ, ಹಲವು ವರ್ಷಗಳಿಂದ ಹಣ ಪಾವತಿಸಿಲ್ಲ. ಬಿಲ್​ಗಳನ್ನು ಕ್ಲಿಯರ್​ ಮಾಡುವುದಕ್ಕೆ ಶೇ.20 ಕಮಿಷನ್​ ನೀಡುವಂತೆ ಕೆಲವು ಪದಾಧಿಕಾರಿಗಳು ಬೇಡಿಕೆ ಇರಿಸಿದ್ದಾರೆಂಬ ಆರೋಪವೂ ಇದೆ.

Related Posts

Leave a Reply

Your email address will not be published. Required fields are marked *