Menu

ಕೇದಾರನಾಥ ಹೆಲಿಕಾಪ್ಟರ್‌ ಪತನ: ಕೊರಗಿನಲ್ಲಿದ್ದ ಮೃತ ಪೈಲಟ್‌ ತಾಯಿಯ ಸಾವು

ಕೇದಾರನಾಥದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿರುವ ಪೈಲಟ್ ರಾಜ್​ವೀರ್ ಸಿಂಗ್ ಚೌಹಾಣ್ ಅವರ ತಾಯಿ ಅಸು ನೀಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ದುಃಖದಿಂದ ಕುಸಿದು ಹೋಗಿದ್ದ ತಾಯಿ 13 ದಿನಗಳ ನಂತರ ಸಾವಿಗೀಡಾಗಿದ್ದಾರೆ.

ಮಗನ ಸಾವಿನ ಆಘಾತದಿಂದ ರಾಜ್‌ವೀರ್ ತಾಯಿ ಲಕ್ಷ್ಮಿ ಚೌಹಾಣ್ ಚೇತರಿಸಿಕೊಳ್ಳದೆ ಆರೋಗ್ಯ ಹದಗೆಡುತ್ತಿತ್ತು, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಜೂನ್ 15 ರಂದು ಕೇದಾರನಾಥದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಜೈಪುರದ ಪೈಲಟ್ ರಾಜ್‌ವೀರ್ ಸಿಂಗ್ ಸೇರಿದಂತೆ 7 ಜನರುಮೃತಪಟ್ಟಿದ್ದರು. ರಾಜ್‌ವೀರ್ ಸಿಂಗ್ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ನಿವೃತ್ತರಾಗಿ ಖಾಸಗಿ ವಿಮಾನಯಾನ ಕಂಪನಿಯಲ್ಲಿ ಪೈಲಟ್ ಆಗಿದ್ದರು.

ಜೂನ್ 15 ರಂದು ಹೆಲಿಕಾಪ್ಟರ್ ಚಲಾಯಿಸುತ್ತಿದ್ದಾಗ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. 4 ತಿಂಗಳ ಹಿಂದೆ ಅವರಿಗೆ ಅವಳಿ ಗಂಡು ಮಕ್ಕಳು ಜನಿಸಿದ್ದರು.

Related Posts

Leave a Reply

Your email address will not be published. Required fields are marked *