ಆರ್ಸಿಬಿ ವಿಜಯೋತ್ಸವ ದುರಂತದಲ್ಲಿ ಹನ್ನೊಂದು ಮಂದಿಯ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಇನ್ನು ಮುಂದೆ ಜನಸಂದಣಿಯ ಕಾರ್ಯಕ್ರಮ ಗಳನ್ನು ಆಯೋಜಿಸುವಾಗ ಕೆಲವೊಂದು ನಿಯಮ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ. ಮೊದಲಿಗೆ ಆರೋಗ್ಯ ಇಲಾಖೆಯಿಂದ ಹೊಸ ಗೈಡ್ಲೈನ್ ಜಾರಿ ಗೊಳಿಸಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಜನ ದಟ್ಟಣೆಯ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆಯಿಂದ ಕಡ್ಡಾಯ ಅನುಮತಿಗೆ ಶಿಫಾರಸು ಮಾಡಲು ಸಚಿವರು ಮುಂದಾಗಿದ್ದಾರೆ.
ಕಾರ್ಯಕ್ರಮದಲ್ಲಿ ಜನ ಸೇರುವ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ವೈದ್ಯರು, ಸಿಬ್ಬಂದಿ ಹಾಗೂ ಐಸಿಯು ಆ್ಯಂಬುಲೆನ್ಸ್ಗಳ ವ್ಯವಸ್ಥೆ ಇರುವಂತೆ ಮಾರ್ಗಸೂಚಿ ನೀಡಲು ಆರೋಗ್ಯ ಇಲಾಖೆಯಿಂದ ಶಿಫಾರಸಿಗೆ ಸಚಿವರು ನಿರ್ಧರಿಸಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ 9 ಲಕ್ಷ ಅಭಿಮಾನಿಗಳು ಸೇರಿದ್ರೂ ಸೂಕ್ತ ವೈದ್ಯರು, ಆ್ಯಂಬುಲೆನ್ಸ್ ಸೇವೆ ಇರಲಿಲ್ಲ. ಎಷ್ಟೋ ಜನರಿಗೆ ನಡು ರಸ್ತೆಯಲ್ಲಿಯೇ ಪಿಸಿಆರ್ ಮಾಡಲಾಗಿದೆ. ಎಷ್ಟೋ ಅಭಿಮಾನಿಗಳು ಉಸಿರಾಟದ ತೊಂದರೆಯಿಂದ ಒದ್ದಾಡಿದ್ದಾರೆ. ವೈದ್ಯರು ಹಾಗೂ ಆ್ಯಂಬುಲೆನ್ಸ್ ಗಳು ಸ್ಥಳದಲ್ಲಿ ಇದ್ದಿದ್ದರೆ ಸಾವಿನ ಪ್ರಮಾಣ ತಗ್ಗಿಸಬಹುದಾಗಿತ್ತು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಚ್ಚೆತ್ತುಗೊಂಡಿದ್ದು, ಕಾರ್ಯಕ್ರಮಗಳಿಗೆ ಗೈಡ್ ಲೈನ್ಸ್ ನೀಡಲು ಚಿಂತನೆ ನಡೆಸಿದೆ.
ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕನಿಷ್ಠ ವೈದ್ಯಕೀಯ ಸೇವೆ ಕುರಿತು ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆ್ಯಂಬುಲೆನ್ಸ್, ವೈದ್ಯರು ಅಥವಾ ಚಿಕಿತ್ಸೆ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಇನ್ಮುಂದೆ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಆರೋಗ್ಯ ಇಲಾಖೆಯ ಅನುಮತಿ ಕಡ್ಡಾಯ ಗೊಳಿಸಲಾಗುವುದು.