Menu

Hit and Run: ಬೆಳಗಾವಿಯಲ್ಲಿ ಲಾರಿಯಡಿ ವ್ಯಕ್ತಿ ಸಾವು: ಎರಡೇ ಗಂಟೆಯಲ್ಲಿ ಚಾಲಕನ ಬಂಧಿಸಿದ ಪೊಲೀಸ್‌

ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟ್ಟುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿಸಿ ಪರಾರಿಯಾಗಿದ್ದ ಚಾಲಕನನ್ನು ಎರಡೇ ಗಂಟೆಯಲ್ಲೇ ಚೇಸಿಂಗ್ ಮಾಡಿ ಪೊಲೀಸರು ಬಂಧಿಸಿದ್ದಾರೆ.

ಟ್ರಕ್ ಹರಿದ ಪರಿಣಾಮ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಉಮೇಶ ದೇಸೂರಕರ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಂಆಡಿ ಚಾಲಕ ಲಾರಿ ನಿಲ್ಲಿಸದೆ ಪರಾರಿಯಾಗಿದ್ದ. ಸ್ಥಳಕ್ಕೆ ಹಿರೇಬಾಗೆವಾಡಿ ಪಿಐ ಸುಂದರೇಶ ಹೊಳೆನ್ನವರ ಮತ್ತು ಸಿಬ್ಬಂದಿಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡೇ ಗಂಟೆಯಲ್ಲಿ ಪೊಲೀಸರು ಲಾರಿ ಸಮೇತ ಆರೋಪಿ ಹಮ್ಮಿದಖಾನ್ ರುಕ್ಕುದ್ದೀನ ಎಂಬಾತನನ್ನು ಬಂಧಿಸಿದ್ದಾರೆ. ಹಿರೇಬಾಗೆವಾಡಿ ಪೊಲೀಸರ ಕಾರ್ಯಾಚರಣೆಗೆ ಕಮಿಷನರ್ ಭೂಷಣ ಬೋರಸೆ‌ ಅಭಿನಂದಿಸಿದ್ದಾರೆ.

 

 

 

Related Posts

Leave a Reply

Your email address will not be published. Required fields are marked *