ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ನಡೆದಿರುವ ಪೊಲೀಸ್ ಠಾಣೆಗಳ ಮೇಲೀನ ದಾಳಿ ಪ್ರಕರಣಗಳನ್ನು ರದ್ದು ಮಾಡಿದ್ದ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಚುರುಕು ಮುಟ್ಟಿಸಿದೆ.
ಸರಕಾರದ ತೀರ್ಮಾನದಿಂದ ರಿಲೀಫ್ ಅಗಿದ್ದ ಆರೋಪಿಗಳಿಗೆ ಹೈಕೋರ್ಟ್ ಆದೇಶದಿಂದ ನಡುಕ ಹುಟ್ಟಿದೆ. ಪ್ರಕರಣಗಳನ್ನು ರದ್ದು ಮಾಡಿರುವ ರಾಜ್ಯಸರ್ಕಾರದ ತೀರ್ಮಾನವನ್ನೇ ಹೈಕೋರ್ಟ್ ರದ್ದುಗೊಳಿಸಿದೆ.
2008 ರಿಂದ 2023 ವರೆಗೂ ಪೊಲೀಸ್ ಠಾಣೆಗಳ ಮೇಲೆ ನಡೆದಿದ್ದ 43 ಪ್ರಕರಣ ರದ್ದು ಮಾಡಿ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿತ್ತು. ಸರಕಾರದ ಈ ನಡೆಯನ್ನು ಅರ್ಜಿದಾರ ಗಿರೀಶ್ ಭಾರದ್ವಾಜ್ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ಸರಕಾರದ ತೀರ್ಮಾನ ರದ್ದು ಮಾಡಿ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ
ಹೈಕೋರ್ಟ್ ಆದೇಶದ ಬಳಿಕ ಮುಜುಗರಕ್ಕೆ ಒಳಗಾದ ರಾಜ್ಯ ಸರ್ಕಾರವು ಪ್ರಕರಣಗಳ ಆರೋಪಿಗಳ ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.