Menu

ನಾಳೆಯಿಂದ ಬೆಂಗಳೂರಿನಲ್ಲಿ ಕಸ ಸಂಗ್ರಹ ವಾಹನ ಚಾಲಕರ ಪ್ರತಿಭಟನೆ

ಬೆಂಗಳೂರಿನಲ್ಲಿ ನಾಳೆಯಿಂದ ಮನೆ ಹತ್ತಿರ ಕಸ ಸಂಗ್ರಹಣೆಗೆ ಲಾರಿ ಹಾಗೂ ಆಟೋ ಚಾಲಕರು ಬರುವುದಿಲ್ಲ. ಉದ್ಯೋಗ ಕಾಯಂ ಹಾಗೂ ನೇರ ವೇತನಕ್ಕೆ ಆಗ್ರಹಿಹಿಸಿ ಈ ಚಾಲಕರು ನಾಳೆಯಿಂದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಹಿಂದೆ ಪ್ರತಿಭಟನೆ ಮಾಡಿದಾಗ ಕಾಯಂಗೊಳಿಸುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಭರವಸೆ ನೀಡಿ ಆರೇಳು ತಿಂಗಳು ಕಳೆದರೂ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಚಾಲಕರು ನಾಳೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಕಸ ಸಂಗ್ರಹಣೆ ಲಾರಿ ಹಾಗೂ ಆಟೋ ಚಾಲಕರ ಪ್ರತಿಭಟನೆ ಮುಂದುವರಿದರೆ ಉದ್ಯಾನನಗರಿ ಬೆಂಗಳೂರು ಮತ್ತೆ ಗಾರ್ಬೇಜ್‌ ಸಿಟಿಯಾಗಿ  ರೂಪಾಂತರಗೊಳ್ಳಲಿದೆ.

 

 

Related Posts

Leave a Reply

Your email address will not be published. Required fields are marked *