ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ 78 ವರ್ಷದ ಚಂದ್ರಶೇಖರ್ ಎಂಬವರಿಗೆ ನಿಮ್ಮ ಕಾರು ಟಚ್ ಆಗಿ ನನ್ನ ತಮ್ಮ ಗಾಯಗೊಂಡಿದ್ದಾನೆಂದು ಹಣ ನೀಡುವಂತೆ ಜಮೀಲ್ ಎಂಬಾತ ಕಿರುಕುಳ ನೀಡಿ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದಾನೆ.
ಜೂ.2ರಂದು ಈ ಘಟನೆ ನಡೆದಿದ್ದು, ಜಮೀಲ್ ಎಂಬಾತ ಚಂದ್ರಶೇಖರ್ ಅವರ ಕಾರು ಅಡ್ಡ ಹಾಕಿದ್ದಾನೆ, ನನ್ನ ಬೈಕ್ ಗೆ ಕಾರು ಟಚ್ ಆಗಿ ತಮ್ಮನಿಗೆ ಗಾಯವಾಗಿದೆ ಎಂದು ಸುಳ್ಳು ಹೇಳಿ 1 ಲಕ್ಷ ರೂ.ನೀಡುವಂತೆ ದಾರಿ ಉದ್ದಕ್ಕೂ ಗಲಾಟೆ ಮಾಡಿದ್ದ. ನಂತರ ಚಂದ್ರಶೇಖರ್ ಅವರಿಂದ 5 ಸಾವಿರ ರೂ. ಹಣ ಸುಲಿಗೆ ಮಾಡಿ ಹೊರಟು ಹೋಗಿದ್ದ.
ಈ ಬಗ್ಗೆ ಚಂದ್ರಶೇಖರ್ ತಡವಾಗಿ ಅಶೋಕ್ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗೆ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಜಮೀಲ್ ಈ ಹಿಂದೆಯೂ ಇದೇ ರೀತಿ ಕೃತ್ಯ ಎಸಗಿದ್ದ , ಆತನ ವಿರುದ್ಧ ಜಮೀಲ್ ವಿರುದ್ಧ 16 ಪ್ರಕರಣಗಳಿವೆ ಎನ್ನಲಾಗಿದೆ. ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಕೇಸ್ ನಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ.