ಬಾಗಲಕೋಟೆ ಜಿಲ್ಲೆಯ ರಾಂಪೂರನಲ್ಲಿ ಗ್ರಾಮದ ಲಕ್ಕವ್ವದೇವಿಗೆ ಉಡಿ ತುಂಬುವ ನಿಮಿತ್ತ ನಡೆದ ಕತ್ತೆಗಳ ರೇಸ್ ಜನಮನ ಸೆಳೆಯಿತು.
ಕತ್ತೆಗಳ ರೇಸ್ ನೋಡುವುದಕ್ಕೆ ರಸ್ತೆ ಅಕ್ಕಪಕ್ಕ ಮುಗಿಬಿದ್ದ ಜನ ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಲಕ್ಕವ್ವ ದೇವಿ ದೇವಸ್ಥಾನದಿಂದ ಬನಹಟ್ಟಿ ಪೋಲಿಸ್ ಠಾಣೆವರೆಗೆ ಕತ್ತೆಗಳ ಓಟ ನಡೆಯಿತು.
ರೇಸ್ ನಲ್ಲಿ ಭಾಗವಹಿಸಿದ್ದ 5 ಕತ್ತೆಗಳು ಭಾಗವಹಿಸಿದ್ದವು. ಚಂದ್ರು ಭಜಂತ್ರಿ ಅವರ ಕತ್ತೆ ಪ್ರಥಮ, ಹನಮಂತ ಸವದಿ ಅವರ ಕತ್ತೆ ದ್ವೀತಿಯ, ಪರಶುರಾಮ ಭಜಂತ್ರಿ ಅವರ ಕತ್ತೆಗೆ ತೃತಿಯ ಸ್ಥಾನ ಲಭಿಸಿದೆ.
ವಿಜೇತ ಕತ್ತೆಯ ಹಿಂಬಾಲಕರು ಇನ್ನಷ್ಟು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಕತ್ತೆಗಳ ಓಟದಿಂದ ಗ್ರಾಮಸ್ಥರಲ್ಲೂ ಸಂಭ್ರಮ ಮನೆ ಮಾಡಿತ್ತು.