ಶಿವಮೊಗ್ಗದ ಸೊರಬ ತಾಲೂಕು ಕಪ್ಪಗಳಲೆ ಗ್ರಾಮದಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಗೊಂಡು ದಂಪತಿ ಮೃತಪಟ್ಟಿದ್ದಾರೆ.
ಕೃಷ್ಣಪ್ಪ( 53) ಹಾಗೂ ವಿನೋದಾ( 43) ಮೃತಪಟ್ಟ ದಂಪತಿ. ಬಟ್ಟೆ ಒಣಗಲು ಹಾಕಿದ್ದ ತಂತಿ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಈ ದುರಂತ ಸಂಭವಿಸಿದೆ.
ಮನೆಯ ಬಳಿ ತಂತಿಯ ಮೇಲೆ ವಿನೋದಮ್ಮ ಬಟ್ಟೆ ಒಣಗಲು ಹಾಕಿದ್ದರು. ಮಳೆ ಬಂದ ಹಿನ್ನೆಲೆ ರಾತ್ರಿ ಬಟ್ಟೆ ತೆಗೆಯಲು ಹೋಗಿದ್ದರು, ಈ ವೇಳೆ ಶಾಕ್ ಹೊಡೆದ್ದರಿಂದ ವಿನೋದಮ್ಮ ಕೂಗಿಕೊಂಡಾಗ ಪತಿ ಕೃಷ್ಣಪ್ಪ ತಕ್ಷಣವೇ ನೆರವಿಗೆ ಧಾವಿಸಿದ್ದು ಅವರಿಗೂ ಶಾಕ್ ಹೊಡೆದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.