ಮುಡಾ ಹಗರಣಕ್ಕೆ ಸಂಬಂಧಿಸಿದ ತನಿಖಾಧಿಕಾರಿಯನ್ನು ಬದಲಾಯಿಸುವಂತೆ ನಾನು ಅರ್ಜಿ ಸಲ್ಲಿಸುವುದಾಗಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಮುಡಾ ಹಗರಣದಲ್ಲಿ ಜನ ಪ್ರತಿನಿಧಿ ನ್ಯಾಯಾಲಯದ ಆದೇಶದಂತೆ ಮೈಸೂರು ಲೋಕಾಯುಕ್ತರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕಿದೆ.
ಲೋಕಾಯುಕ್ತರ ಅಂತಿಮ ವರದಿಯ ಅಂಶಗಳು ಖುದ್ದು ಸಿಎಂ ಸಿದ್ದರಾಮಯ್ಯ ಅವರ ಮೇಲೆಯೇ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ಲೋಕಾಯುಕ್ತ ಇನ್ನೂ ಕೂಡ ಅಂತಿಮ ವರದಿ ಸಲ್ಲಿಸುವುದು ಅನುಮಾನ ಇದೆ. ಅವರು ಮತ್ತೆ ಸಮಯ ಕೇಳುತ್ತಾರೆ. ನನಗೆ ಲೋಕಾಯುಕ್ತ ಎಸ್ಪಿ ಬಗ್ಗೆ ಬಹಳಷ್ಟು ಅನುಮಾನವಿದ್ದು ತನಿಖಾಧಿಕಾರಿ ಬದಲಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇನೆ ಎಂದು ಹೇಳಿದ್ದಾರೆ.
ಮುಡಾಗೆ ನೀಡಿದ್ದ ಜಮೀನಿಗೆ ಪರಿಹಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅಕ್ರಮವಾಗಿ ೧೪ ಸೈಟ್ ಪಡೆದಿರುವುದಾಗಿ ಆರೋಪ ಕೇಳಿ ಬಂದ ಬಳಿಕ ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಸಂಚಲನ ಸೃಷ್ಟಿಯಾಗಿತ್ತು. ಪ್ರತಿಪಕ್ಷ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿತ್ತು. ಹಲವು ಬೆಳವಣಿಗೆಗಳ ಬಳಿಕ ಸೈಟ್ಗಳನ್ನು ಸಿಎಂ ಪತ್ನಿ ಪಾರ್ವತಿ ಮುಡಾಗೆ ವಾಪಸ್ ಮಾಡಿದ್ದರು.