Menu

ಏರ್ ಇಂಡಿಯಾ ದುರಂತ: ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬಕ್ಕೆ ಆರು ಕೋಟಿ ರೂ. ನೆರವು ನೀಡಿದ ಡಾ. ಶಂಶೀರ್‌

ಅಹಮದಾಬಾದ್​​ನಲ್ಲಿ ನಡೆದ ಏರ್ ಇಂಡಿಯಾ ದುರಂತದಲ್ಲಿ ಮೃತಪಟ್ಟ ವೈದ್ಯಕೀಯ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಗಾಯಗೊಂಡವರ ಕುಟುಂಬಕ್ಕೆ ಯುಎಇ ವೈದ್ಯ, ಯುಎಇ ಹೆಲ್ತ್‌ಕೇರ್ ಸಂಸ್ಥಾಪಕ ಶಂಶೀರ್ 6 ಕೋಟಿ ರೂ. ನೆರವು ನೀಡಿದ್ದಾರೆ.

ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ 34 ವೈದ್ಯರು ಪ್ರಾಣ ಕಳೆದುಕೊಂಡಿದ್ದರು.

ಏರ್ ಇಂಡಿಯಾ ಅಪಘಾತದಲ್ಲಿ ಹಾನಿಗೊಳಗಾದ ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಮತ್ತೆ ಆರಂಭಗೊಂಡ ಬಳಿಕ ಯುಎಇಯ ಡಾ. ಶಂಶೀರ್ ವಯಲಿಲ್ ನೀಡಿದ ನೆರವಿನ ಚೆಕ್‌ಗಳನ್ನು ಡೀನ್ ಮತ್ತು ಜೂನಿಯರ್ ವೈದ್ಯರ ಸಂಘದ ಸಮ್ಮುಖದಲ್ಲಿ ವಿತರಿಸಲಾಯಿತು. ಬಿಜೆ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮೀನಾಕ್ಷಿ ಪಾರಿಖ್ ಅವರ ಕಚೇರಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು.

ಆಸ್ಪತ್ರೆಯ ಅಧೀಕ್ಷಕ ಡಾ. ರಾಕೇಶ್ ಎಸ್. ಜೋಶಿ ಮತ್ತು ಜೂನಿಯರ್ ವೈದ್ಯರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಈ ನೆರವಿನ ಮೊತ್ತದ ಮೊದಲ ಭಾಗವನ್ನು ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 1 ಕೋಟಿ ರೂ. ಚೆಕ್ ನೀಡಲಾಯಿತು. ಮಧ್ಯಪ್ರದೇಶದ ಗ್ವಾಲಿಯರ್‌ನ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆರ್ಯನ್ ರಜಪೂತ್, ರಾಜಸ್ಥಾನದ ಶ್ರೀಗಂಗಾನಗರದ ಮಾನವ್ ಬಾಡು, ರಾಜಸ್ಥಾನದ ಬಾರ್ಮರ್‌ನ ಜೈಪ್ರಕಾಶ್ ಚೌಧರಿ ಮತ್ತು ಗುಜರಾತ್‌ನ ಭಾವನಗರದ ರಾಕೇಶ್ ಗೋಬರ್‌ಭಾಯ್ ದಿಯೋರಾ ಅವರ ಕುಟುಂಬಗಳು ಸೇರಿವೆ.

ಇತರ 6 ಮೃತರ ಕುಟುಂಬಗಳಿಗೂ ನೆರವು ನೀಡಲಾಯಿತು. ನರಶಸ್ತ್ರಚಿಕಿತ್ಸಾ ವಿಭಾಗದ (ತಮ್ಮ ಪತ್ನಿ ಮತ್ತು ಸೋದರ ಮಾವನನ್ನು ಕಳೆದುಕೊಂಡವರು) ಡಾ. ಪ್ರದೀಪ್ ಸೋಲಂಕಿ, ಸರ್ಜಿಕಲ್ ಆಂಕೊಲಾಜಿ ವಿಭಾಗದ (ಮೂವರು ಕುಟುಂಬ ಸದಸ್ಯರನ್ನು ಕಳೆದುಕೊಂಡವರು) ಡಾ. ನೀಲಕಂಠ ಸುತಾರ್, ಬಿಪಿಟಿ ವಿದ್ಯಾರ್ಥಿ ಡಾ. ಯೋಗೇಶ್ ಹದತ್ (ಸಹೋದರನನ್ನು ಕಳೆದುಕೊಂಡವರು) ಸೇರಿದ್ದಾರೆ. ತಲಾ 25 ಲಕ್ಷ ರೂ.ಗಳ ಸಹಾಯ ನೀಡಲಾಯಿತು.

ಅಪಘಾತವಾಗಿ ಗಂಭೀರವಾಗಿ ಗಾಯಗೊಂಡ 14 ಜನರಿಗೆ ಪ್ರತಿಯೊಬ್ಬ ವ್ಯಕ್ತಿಗೂ 3.5 ಲಕ್ಷ ರೂ. ನೆರವು ನೀಡಲಾಗಿದೆ. ಇವರಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು, ಪ್ರಾಧ್ಯಾಪಕರಾದ ಡಾ. ಕೆಲ್ವಿನ್ ಗಮೇಟಿ ಮತ್ತು ಡಾ. ಪ್ರಥಮ್ ಕೋಲ್ಚಾ ಮತ್ತು ಮನೀಷಾ ಬೆನ್‌ ಸೇರಿದ್ದಾರೆ.

Related Posts

Leave a Reply

Your email address will not be published. Required fields are marked *