Menu

ನಿರ್ದೇಶಕ ನಂದಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ

ಒಂಬತ್ತು ವರ್ಷದ ಹಿಂದೆ ನಟ ಸುದೀಪ್‌ ಹೆಸರು ಹೇಳಿ ನಿರ್ದೇಶಕ ನಂದಕಿಶೋರ್ 22 ಲಕ್ಷ ರೂ. ವಂಚನೆ ಮಾಡಿರುವುದಾಗಿ ಯುವನಟ ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.

ನಂದಕಿಶೋರ್‌ ನನ್ನಿಂದ 22 ಲಕ್ಷ ರೂ. ಪಡೆದಿದ್ದರು. ವಾಪಸ್‌ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್‌ ನೀಡುವುದಾಗಿ ಹೇಳಿದ್ದರು. ಆದರೆ ನನಗೆ ಯಾವುದೇ ಆಫರ್‌ ನೀಡಿರಲಿಲ್ಲ.

ಈ ವಿಚಾರವನ್ನು ನಟ ಸುದೀಪ್‌ ಗಮನಕ್ಕೆ ತರಲು ಮುಂದಾದರೆ ಹೇಳದಂತೆ ನಂದಕಿಶೋರ್‌ ತಡೆಯುತ್ತಿದ್ದರು. ನಾನು ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನನ್ನು ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಎನ್ನುತ್ತಿದ್ದಾರೆ ಎಂದು ಶಬರೀಶ್ ಶೆಟ್ಟಿ ಹೇಳಿದ್ದಾರೆ.

ನನ್ನ ಹಣ ನನಗೆ ಕೊಡದಿದ್ದರೆ ನಂದ ಕಿಶೋರ್ ವಿರುದ್ದ ಕಾನೂನು ಮೊರೆ ಹೋಗುವ ಜೊತೆಗೆ ಫಿಲ್ಮ್ ಚೇಂಬರ್‌ಗೆ ದೂರು ಕೊಡುತ್ತೇನೆ ಎಂದು ಶಬರೀಶ್‌ ಹೇಳಿದ್ದಾರೆ. ನಾನು ಈ ಕುರಿತು ಏನೂ ಮಾತಾಡಲಾರೆ. ಕೆಲಸದ ಸಂಬಂಧ ಮುಂಬೈನಲ್ಲಿದ್ದೇನೆ. ಶಬರೀಶ್ ಶೆಟ್ಟಿ ಬಾಯಿಗೆ ಬಂದಂತೆ ಆರೋಪ ಮಾಡುತ್ತಿ ದ್ದಾರೆ. ಆರೋಪಕ್ಕೆ ಕಾನೂನು ರೀತಿಯಲ್ಲೇ ಉತ್ತರ ಕೊಡುವೆ. ವಕೀಲರ ಜೊತೆ ಮಾತಾಡಿ ಈ ಕುರಿತು ಪ್ರತಿಕ್ರಿಯೆ ಕೊಡುವೆ. ಆತನ ವಿರುದ್ಧ ದೂರು ನೀಡು ತ್ತೇನೆ ಎಂದು ನಂದಕಿಶೋರ್‌ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *