ಭಾರತಕ್ಕೆ ಇನ್ನಷ್ಟು ಗೋಡೆಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇಕಿರುವುದು ಸೇತುವೆಗಳು. ಭಾರತಕ್ಕೆ ಇನ್ನಷ್ಟು ದ್ವೇಷವಲ್ಲ, ಇನ್ನಷ್ಟು ಆಶಾವಾದದ ಅಗತ್ಯವಿದೆ.
ವ್ಯಕ್ತಿತ್ವವನ್ನು ದ್ವೇಷದ ಮೇಲೆ ಕಟ್ಟಲಾಗುವುದಿಲ್ಲ, ಈ ದೇಶವನ್ನು ಒಗ್ಗಟ್ಟು, ಪ್ರೀತಿ ಮತ್ತು ಸತ್ಯದ ಆಧಾರದ ಮೇಲೆ ಕಟ್ಟಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಸ್ಮರಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಹ್ಮದಾಬಾದ್ ನಲ್ಲಿ ನಡೆದ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಷಣ ಮಾಡಿದ ಸಿಎಂ, ನಮ್ಮ ಗಣರಾಜ್ಯ ಹಲವು ಅಪಾಯಗಳನ್ನು ಎದುರಿಸುತ್ತಿ ರುವ ಈ ಸಂದರ್ಭದಲ್ಲಿ , ಈ ಸಭೆಯು ಆಧುನಿಕ ಭಾರತ ನಿರ್ಮಾಣದ ಮೂಲತತ್ವಗಳಾದ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಮೌಲ್ಯಗಳಿಗೆ ಜೀವ ತುಂಬಲಿದೆ. ಪಕ್ಷ ಚುನಾವಣೆಗೆ ಸಜ್ಜಾಗುವುದರ ಜೊತೆಗೆ ನಾವು ಭಾರತದ ಪರಿಕಲ್ಪನೆಯನ್ನು ಮರುಸ್ಥಾಪಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ದೇಶ ಇಂದು ಅಪಾಯಕಾರಿಯಾದ ಕವಲುದಾರಿಯಲ್ಲಿ ನಿಂತಿದೆ. ಜಾತ್ಯಾತೀತತೆ, ಒಕ್ಕೂಟ ವ್ಯವಸ್ಥೆ, ಪ್ರಜಾಪ್ರಭುತ್ವ ನಮ್ಮ ಸಂವಿಧಾನದ ಅಡಿಪಾಯಗಳು. ಈ ಅಡಿಪಾಯಗಳು ಇಂದು ಅಧಿಕಾರದ ಅಮಲು ಹಾಗೂ ನಿಯಂತ್ರಣದ ಗೀಳು ತುಂಬಿರುವ ಅಧಿಕಾರದ ಹಿಡಿತಕ್ಕೆ ಸಿಲುಕಿವೆ. ರೈತರು ಇನ್ನೂ ನ್ಯಾಯಕ್ಕಾಗಿ ಕಾಯು ತ್ತಿದ್ದಾರೆ. ರೈತರು ಬೀದಿಗಳಲ್ಲಿ ನಡೆಸಿದ ಹೋರಾಟ , ತಮ್ಮ ಮಕ್ಕಳನ್ನು ಕಳೆದುಕೊಂಡ ರೈತರ ಕೂಗಿಗೆ ಮೌನದ ಹಾಗೂ ಗುಂಡಿನ ಪ್ರತ್ಯುತ್ತರ ದೊರಕಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರು- ತಾಯಂದಿರು, ಅಕ್ಕತಂಗಿಯರು, ಹೆಣ್ಣುಮಕ್ಕಳು- ಸುರಕ್ಷತೆ , ಘನತೆ ಹಾಗೂ ಸಮಾನ ಅವಕಾಶಗಳ ಬೇಡಿಕೆಯಿರಿಸಿದ್ದಾರೆ. ಆದರೆ ಮೋದಿಯ ವರ ಭಾರತದಲ್ಲಿ, ಅವರ ಹೋರಾಟದ ಹಕ್ಕನ್ನೂ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಮಣಿಪುರದಿಂದ ಹತ್ರಾಸ್ ನವರೆಗೂ , ಅವರ ನೋವುಗಳನ್ನು ಕಡೆ ಗಣಿಸಿ, ಅವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದರು.
ಯುವಜನತೆ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಲೆ ಏರಿಕೆ ಹೆಚ್ಚುತ್ತಿವೆ. ‘ಅಚ್ಛೇ ದಿನ್’ ಎಂಬ ಭರವಸೆ ಯೆಂಬುದು, ಸಾಮಾನ್ಯ ಭಾರತೀಯನ ಪಾಲಿಗೆ ಕ್ರೂರ ಹಾಸ್ಯವಾಗಿದೆ. ಇದು ಕೇವಲ ಆಡಳಿತದ ಬಿಕ್ಕಟ್ಟಲ್ಲ. ಇದು ನೈತಿಕತೆಯ ಬಿಕ್ಕಟ್ಟು. ತ್ಯಾಗ ಹಾಗೂ ಸೇವೆಯ ಪರಂಪರೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮಾತ್ರ ದೇಶದ ಮೇಲಾಗಿರುವ ಈ ಗಾಯವನ್ನು ಗುಣಪಡಿಸುವ ಹಾಗೂ ಈ ಗಣರಾಜ್ಯವನ್ನು ಮರುನಿರ್ಮಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಸಂವಿಧಾನದ ಮೇಲೆ ಬಿಜೆಪಿಯ ಹಲ್ಲೆ: · ಇಂದು ಭಾರತ ಎದುರಿಸುತ್ತಿರುವುದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಅಪಾಯವಲ್ಲ- ಸಂವಿಧಾನಿಕ ಅಪಾಯ ವನ್ನೂ ಎದುರಿಸುತ್ತಿದೆ. ಭಾರತೀಯ ಜನತಾ ಪಕ್ಷವೂ ಕೇವಲ ಅಡಳಿತ ನಡೆಸದೇ , ನಮ್ಮ ಗಣತಂತ್ರದ ರಚನೆಯನ್ನೇ ವ್ಯವಸ್ಥಿತವಾಗಿ ಧ್ವಂಸಗೊಳಿಸುತ್ತಿದೆ ಎಂದರು.
ಚುನಾವಣಾ ಆಯೋಗವು , ಇಂದು ಆಡಳಿತ ಪಕ್ಷದವರ ಹಣ ಮತ್ತು ಮಾಧ್ಯಮಗಳ ದುರ್ಬಳಕೆಯಿಂದಾಗಿ ಅಸಹಾಯಕವಾಗಿ ನಿಂತಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಶಸ್ತ್ರಗಳಂತೆ ಬಳಸಲಾಗುತ್ತಿದೆ. ಇವುಗಳಿಂದ ವಿರೋಧ ಪಕ್ಷದವರನ್ನು ದ್ವೇಷದಿಂದ ಹಿಮ್ಮೆಟ್ಟಿಸಲಾಗುತ್ತಿದ್ದು, ಬಿಜೆಪಿಯ ಅಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡೆಗಣಿಸುವ ಜೊತೆಗೆ ಪುರಸ್ಕರಿಸಲಾಗುತ್ತಿದೆ ಎಂದು ಹೇಳಿದರು.
ಇಂದು, ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಪಕ್ಷ ಎನ್ನುತ್ತಾ, ಭಾರತವನ್ನು ಸಂಕುಚಿತತೆಯತ್ತ ನೂಕುವ ಅಪಾಯಕಾರಿ ಪ್ರಯತ್ನ ನಡೆಯು ತ್ತಿದೆ. ಬಿಜೆಪಿಯು ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಾಬಲ್ಯದ ಅಪಾಯಕಾರಿ ತ್ರಿಕೋನವನ್ನು ಹೇರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಲ್ಲ. ಇದು ಬಲ ವಂತದ ಏಕರೂಪತೆ. · ಈ ಚಿಂತನೆ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ ಎಂದು ವಿವರಿಸಿದರು.
ಒಂದು ದೇಶ- ಒಂದು ವ್ಯವಸ್ಥೆ’ ಎಂಬುದಕ್ಕೆ ನೀಡಿರುವ ಒತ್ತು , ಕೇವಲ ತಾತ್ವಿಕವಾಗಿರದೇ , ಪ್ರಾದೇಶಿಕ ಸ್ವಾತಂತ್ರ್ಯ ಹಾಗೂ ಸಮಾಜಿಕ ನ್ಯಾಯದ ಮೂಲಕ್ಕೆ ಪೆಟ್ಟು ನೀಡುವಂತಹ ನೀತಿಗಳನ್ನು ಹೇರುವ ಮೂಲಕ ಅನುಷ್ಠಾನಗೊಳಿಸುವುದಾಗಿದೆ. ಗ್ರಾಮೀಣ ,ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದ ಎಲ್ಲರನ್ನೊಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ಈಗ ‘ ರಾಷ್ಟ್ರೀಯ ಮಾನದಂಡ’ ದ ಹೆಸರಿನಲ್ಲಿ ಹಾಳುಗೆಡವಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಕಾಗದದ ಮೇಲೆ ಎಷ್ಟೇ ಮಹತ್ವಾಕಾಂಕ್ಷಿಯಾಗಿ ತೋರಿದರೂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ‘ಎಲ್ಲರಿಗೂ ಒಂದೇ ಅಳತೆ’ ಎಂಬ ಮಾದರಿ ಅಪಾಯಕಾರಿಯಾಗಿದೆ ಎಂದರು.
ಏಕರೂಪತೆಯ ಹೆಸರಿನಲ್ಲಿ ನಮ್ಮ ವೈವಿಧ್ಯತೆಯನ್ನು ಅಳಿಸಿಹಾಕುವ ಪ್ರತಿ ಪ್ರಯತ್ನವನ್ನೂ ನಾವು ವಿರೋಧಿಸಬೇಕು. ಏಕೆಂದರೆ ಭಾರತಕ್ಕೆ ತನ್ನ ಬಲ ದೊರಕಿರು ವುದು ಏಕರೂಪತೆಯಿಂದಲ್ಲ- ಬದಲಿಗೆ ವೈವಿಧ್ಯತೆಯಿಂದ ಸಿಕ್ಕಿದೆ. ಭಾರತದ ಸುಂದರ , ಬಹುತ್ವದ ಆತ್ಮವನ್ನು ಕಾಪಾಡಲು ನಾವು ಇಂದು ಸಂಕಲ್ಪ ಮಾಡೋಣ. ಅದುವೇ ಸಾಂವಿಧಾನಿಕ ಮಾರ್ಗ ಎಂದು ಮುಖ್ಯಮಂತ್ರಿ ಹೇಳಿದರು.
ಶಿಕ್ಷಣ, ಅಭಿವೃದ್ಧಿ ಮತ್ತು ನಮ್ಮ ಯುವ ಜನಾಂಗವನ್ನು ಅವಕಾಶಗಳ ಜಗತ್ತಿಗೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಮನಸ್ಸುಗಳನ್ನು ಒಡೆಯಲು, ಸತ್ಯವನ್ನು ತಿರುಚಲು ಹಾಗೂ ಸೌಹಾರ್ದತೆಯನ್ನು ಹಾಳು ಮಾಡಲು ತಂತ್ರಜ್ಞಾನವನ್ನು ಅಸ್ತ್ರವ ನ್ನಾಗಿಸಿಕೊಳ್ಳಲಾಗಿದೆ. ವೈಚಾರಿಕ ಚಿಂತನೆಯನ್ನು ಪೋಷಿಸುವ ಬದಲಿಗೆ, ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಆಂದೋಲನವನ್ನೇ ಕೈಗೊಳ್ಳಲಾಗುತ್ತಿದೆ. ವಿಜ್ಞಾನ ಮತ್ತು ಕರುಣೆಯನ್ನು ಹೇಳಿಕೊಡುವ ಬದಲು, ಭಯ ಮತ್ತು ಕ್ರೋಧವನ್ನು ಹುಟ್ಟುಹಾಕಲು ವಿನ್ಯಾಸಗೊಳಿಸಿರುವ ಹಿಂದುತ್ವದ ಪ್ರಸರಣದಿಂದ ಆಲ್ಗೋರಿ ದಮ್ ಗಳನ್ನು ಭರ್ತಿಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದೂ ಧರ್ಮವು ಸಹಿಷ್ಣುತೆ, ಶಾಂತಿ, ಶೋಧನೆ ಮತ್ತು ಒಳಗೊಳ್ಳುವಿಕೆಯಲ್ಲಿ ನಂಬಿಕೆಯಿರಿಸಿದೆ. ಆದರೆ ನಾವು ಹಿಂದುತ್ವ ಎಂಬ ದ್ವೇಷವನ್ನೇ ಬೋಧಿಸುವ, ಇತರನ್ನು ಹೊರತುಪಡಿಸುವ ಮತ್ತು ಮಹಾನ್ ಧರ್ಮವನ್ನು ಅಧಿಕಾರಕ್ಕಾಗಿ ಬಳಸುವ ಸಾಧನವಾಗಿರುವ ರಾಜಕೀಯ ಸಿದ್ಧಾಂತವನ್ನು ತಿರಸ್ಕರಿಸುತ್ತೇವೆ ಎನ್ನು ವುದನ್ನು ನಾನು ಸ್ಪಷ್ಟಪಡಿಸುತ್ತೇನೆ ಎಂದರು.
ಭಾರತಕ್ಕೆ ಇನ್ನಷ್ಟು ಗೋಡೆಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇಕಿರುವುದು ಸೇತುವೆಗಳು. ಭಾರತಕ್ಕೆ ಇನ್ನಷ್ಟು ದ್ವೇಷವಲ್ಲ: ಇನ್ನಷ್ಟು ಆಶಾವಾದದ ಅಗತ್ಯವಿದೆ.
ವ್ಯಕ್ತಿತ್ವವನ್ನು ದ್ವೇಷದ ಮೇಲೆ ಕಟ್ಟಲಾಗುವುದಿಲ್ಲ, ಈ ದೇಶವನ್ನು ಒಗ್ಗಟ್ಟು, ಪ್ರೀತಿ ಮತ್ತು ಸತ್ಯದ ಆಧಾರದ ಮೇಲೆ ಕಟ್ಟಬೇಕು” ಎಂದು ಸ್ವಾಮಿ ವಿವೆಕಾನಂದರು ಹೇಳಿದ್ದನ್ನು ಸ್ಮರಿಸೋಣ ಎಂದು ಹೇಳಿದರು.