Monday, September 14, 2026
Menu

ಪೊಲೀಸರು ನಿಷೇಧಿಸಿದ ಮಸೀದಿ ಜಾಗದಿಂದಲೇ ಮೆರವಣಿಗೆ ಮಾಡುತ್ತೇವೆ: ಆರ್‌ ಅಶೋಕ

ಪೊಲೀಸರು ನಿಷೇಧಿಸಿದ ಮಸೀದಿ ಇರುವ ಜಾಗದಿಂದಲೇ ನಾವು ಮೆರವಣಿಗೆ ಮಾಡುತ್ತೇವೆ. ನಾವೆಲ್ಲರೂ ನ್ಯಾಯಕ್ಕಾಗಿ ಈ ಮೂಲಕ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ  ನಾಯಕ ಆರ್‌ ಅಶೋಕ ಎಚ್ಚರಿಕೆ ನೀಡಿದ್ದಾರೆ.

ಗಣೇಶ ಹಬ್ಬದಲ್ಲಿ ಸರ್ಕಾರ ಎಲ್ಲ ಕಡೆ ತೊಂದರೆ ನೀಡುತ್ತಿದೆ. ಧ್ವನಿವರ್ಧಕ ಬಳಸಬಾರದು, ಮೆರವಣಿಗೆ ಹೋಗಬಾರದು ನಿಯಮಗಳನ್ನು ಹೇರಲಾಗಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುತ್ತಿದೆ. ನಾವು ಹೋರಾಟದ ಜೊತೆಗೆ ಪೊಲೀಸರ ಜೊತೆ ಸಂಧಾನ ಸಭೆ ಮಾಡಿದ್ದೇವೆ. ಆದರೆ ಸರ್ಕಾರ ಹಠಮಾರಿತನ ತೋರಿಸಿದೆ. ಆದ್ದರಿಂದ ಪೊಲೀಸರು ನಿಷೇಧಿಸಿದ ಮಸೀದಿ ಇರುವ ಜಾಗದಿಂದಲೇ ನಾವು ಮೆರವಣಿಗೆ ಮಾಡುತ್ತೇವೆ. ನಾವೆಲ್ಲರೂ ನ್ಯಾಯಕ್ಕಾಗಿ ಈ ಮೂಲಕ ಹೋರಾಟ ಮಾಡುತ್ತೇವೆ. ಇಡೀ ಸರ್ಕಾರ ಜನರ ಬದಲಿಗೆ ಒಬ್ಬ ಇನ್ಸ್‌ಪೆಕ್ಟರ್‌ ಪರವಾಗಿ ನಿಂತಿರುವುದು ದುರ್ದೈವ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರ ರಕ್ತದಲ್ಲೇ ಹಿಂದೂ ವಿರೋಧಿ ಗುಣವಿದೆ. ಇಂತಹ ತುಘಲಕ್‌ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪೊಲೀಸ್‌ ಠಾಣೆಗಳು ಗೂಂಡಾ ಠಾಣೆಗಳಾಗಿವೆ ಎಂದರು.

ಟಿ.ನರಸೀಪುರದಲ್ಲಿ ಗಣೇಶ ಹಬ್ಬದ ಮೆರವಣಿಗೆಗೆ ನಿರ್ಬಂಧ ವಿಧಿಸಿದ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಖಂಡಿಸಿ ಅಶೋಕ ಅವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆ ಮಾಡಿದರು.  ಟಿ.ನರಸೀಪುರಕ್ಕೆ ಭೇಟಿ ನೀಡಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದ ಯುವಕರೊಂದಿಗೆ ಚರ್ಚಿಸಿದ ಅವರು, ಪೊಲೀಸ್‌ ದೌರ್ಜನ್ಯವನ್ನು ಖಂಡಿಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಕೂಡಲೇ ಇನ್ಸ್‌ಪೆಕ್ಟರ್‌ ಧನಂಜಯ್‌ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಚೌತಿ ಪೊಲೀಸರ ಹಬ್ಬವಾಗಬಾರದು, ಇದು ಜನರ ಹಬ್ಬವಾಗಬೇಕು. ಯಾವುದೇ ನಿಯಮಗಳನ್ನು ಪೊಲೀಸರು ಭಕ್ತರ ಮೇಲೆ ಹೇರಬಾರದು. ಹಿಂದಿನ ಕಾಲದಲ್ಲಿ ನಡೆಯುವಂತೆಯೇ ಈಗಲೂ ಹಬ್ಬದ ಆಚರಣೆ ನಡೆಯಬೇಕು. ಆದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಭಕ್ತರಿಗೆ ಬೆದರಿಕೆ ಹಾಕಿದ ಇನ್ಸ್‌ಪೆಕ್ಟರ್‌ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಈ ಕುರಿತು ನಾನು ಡಿಜಿಪಿ ಬಳಿ ಚರ್ಚೆ ಮಾಡಿದ್ದೇನೆ. ಎಸ್‌ಪಿಯಿಂದ ಸಂಧಾನ ಸಭೆ ಕೂಡ ನಡೆದಿದೆ. ಮೂರು ನಾಲ್ಕು ದಿನದಲ್ಲಿ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ ನಮಗೆ ಅದು ಬೇಕಿಲ್ಲ. ಜನರ ಮೇಲೆ ಗೂಂಡಾಗಿರಿ ಮಾಡಿದ ಇನ್ಸ್‌ಪೆಕ್ಟರ್‌ ಆ ಸ್ಥಾನದಲ್ಲಿ ಇರಬಾರದು ಎಂಬುದು ನಮ್ಮ ಆಗ್ರಹ ಎಂದರು.

ಗಣೇಶ ಹಬ್ಬದಲ್ಲಿ ಸರ್ಕಾರ ಎಲ್ಲ ಕಡೆ ತೊಂದರೆ ನೀಡುತ್ತಿದೆ. ಧ್ವನಿವರ್ಧಕ ಬಳಸಬಾರದು, ಮೆರವಣಿಗೆ ಹೋಗಬಾರದು ಎಂಬಿತ್ಯಾದಿ ನಿಯಮಗಳನ್ನು ಹೇರಲಾಗಿದೆ. ಇನ್ನೂ ಒಂದು ತಿಂಗಳ ಕಾಲ ಗಣೇಶ ಹಬ್ಬದ ಆಚರಣೆ ನಡೆಯಲಿದೆ. ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುತ್ತಿದೆ. ನಾವು ಹೋರಾಟದ ಜೊತೆಗೆ ಪೊಲೀಸರ ಜೊತೆ ಸಂಧಾನ ಸಭೆ ಮಾಡಿದ್ದೇವೆ. ಆದರೆ ಸರ್ಕಾರ ಹಠಮಾರಿತನ ತೋರಿಸಿದೆ. ಆದ್ದರಿಂದ ಪೊಲೀಸರು ನಿಷೇಧಿಸಿದ ಮಸೀದಿ ಇರುವ ಜಾಗದಿಂದಲೇ ನಾವು ಮೆರವಣಿಗೆ ಮಾಡುತ್ತೇವೆ. ನಾವೆಲ್ಲರೂ ನ್ಯಾಯಕ್ಕಾಗಿ ಈ ಮೂಲಕ ಹೋರಾಟ ಮಾಡುತ್ತೇವೆ. ಇಡೀ ಸರ್ಕಾರ ಜನರ ಬದಲಿಗೆ ಒಬ್ಬ ಇನ್ಸ್‌ಪೆಕ್ಟರ್‌ ಪರವಾಗಿ ನಿಂತಿರುವುದು ದುರ್ದೈವ. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿಯವರ ರಕ್ತದಲ್ಲೇ ಹಿಂದೂ ವಿರೋಧಿ ಗುಣವಿದೆ. ಇಂತಹ ತುಘಲಕ್‌ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಪೊಲೀಸ್‌ ಠಾಣೆಗಳು ಗೂಂಡಾ ಠಾಣೆಗಳಾಗಿವೆ ಎಂದು ಹೇಳಿದರು.

ನಾವು ಪ್ರಜಾಪ್ರಭುತ್ವದ ರೀತಿಯಲ್ಲೇ ಹೋರಾಟ ಮಾಡುತ್ತೇವೆ. ಯಾವುದೇ ಹಿಂದೂಗಳಿಗೆ ತೊಂದರೆಯಾದರೂ ನಾವು ಅಲ್ಲಿಗೆ ಹೋಗಿ ಬೆಂಬಲ ನೀಡುತ್ತೇವೆ. ಗಣೇಶ ಹಬ್ಬದಲ್ಲಿ ಯಾವುದೇ ತೊಂದರೆಯಾಗದಂತೆ ನಾವು ಕಾಪಾಡುತ್ತೇವೆ ಎಂದರು.

Related Posts

Leave a Reply

Your email address will not be published. Required fields are marked *