Saturday, December 06, 2025
Menu

ಶಬರಿಮಲೆ ಅಯ್ಯಪ್ಪ ಭಕ್ತರ ಕಾರಿಗೆ ಮತ್ತೊಂದು ಕಾರು ಡಿಕ್ಕಿ: 5 ಮಂದಿ ದುರ್ಮರಣ

shabarimala accident

ರಸ್ತೆ ಬದಿ ನಿಲ್ಲಿಸಿದ್ದ ಶಬರಿಮಲೆ ಅಯ್ಯಪ್ಪ ಭಕ್ತರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಅಯ್ಯಪ್ಪ ಭಕ್ತರು ಸೇರಿ 5 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಝಕಾರೈ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಆಂಧ್ರ ಪ್ರದೇಶದ ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಡಿಎಂಕೆ ಮುನ್ಸಿಪಲ್​ ಕೌನ್ಸಿಲ್​ ಅಧ್ಯಕ್ಷರ ಕಾರು ಚಾಲಕ ಮೃತಪಟ್ಟಿದ್ದಾರೆ.

ಮೃತರ ಅಯ್ಯಪ್ಪ ಸ್ವಾಮಿ ಭಕ್ತರನ್ನು ಆಂಧ್ರಪ್ರದೇಶದ ರಾಮಚಂದ್ರ ರಾವ್​, ಅಪ್ಪಾರಾವ್​ ನಾಯ್ಡು, ಬಂಡಾರಾ ಚಂದ್ರಾರಾವ್​, ರಾಮಾರ್ ಹಾಗೂ ಡಿಎಂಕೆ ಪಾಲಿಕೆಯ ಅಧ್ಯಕ್ಷರ ಕಾರು ಚಾಲಕ ಮುಸ್ತಾಖ್ ಅಹ್ಮದ್​ ಎಂದು ಗುರುತಿಸಲಾಗಿದೆ. 5 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಮೇಶ್ವರಂಗೆ ತೆರಳುವ ಮಾರ್ಗದ ಕೀಝಕಾರೈ ಬೀಚ್​ ರಸ್ತೆಯ ಬದಿ ಬೆಳಗ್ಗೆ ವಿಶ್ರಾಂತಿಗಾಗಿ ಕಾರನ್ನು ನಿಲ್ಲಿಸಿದ್ದಾಗ ಡಿಎಂಕೆ ಮುನ್ಸಿಪಲ್​ ಕೌನ್ಸಿಲ್​ ಅಧ್ಯಕ್ಷರ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.

ಸಾವನ್ನಪ್ಪಿದವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಮನಾಥಪುರಂ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 

Related Posts

Leave a Reply

Your email address will not be published. Required fields are marked *