Menu

ನಾಗರಪಂಚಮಿಯಂದು ಸರಳ ಆರೋಗ್ಯಕರ ಅರಶಿಣ ಎಲೆ ಕಡುಬು

ನಾಗರ ಪಂಚಮಿಯಂದು ವಿಶೇಷವಾಗಿ ಕೆಲವು ಕಡೆಗಳಲ್ಲಿ ಅರಶಿಣ ಎಲೆಯ ಕಡುಬನ್ನು ಮಾಡುವುದು ರೂಢಿಯಲ್ಲಿದೆ. ಇದು ಬಹಳ ಸರಳ, ಆರೋಗ್ಯಕರ ಮತ್ತು ಮಾಡಲು ಸುಲಭವಾಗಿರುವ ತಿಂಡಿ. ಇದು ಬಾಯಿ ರುಚಿಗಿಂತ ಸೋಂಕು ನಿವಾರಕ ಶಕ್ತಿ ಹೊಂದಿರುವ ಅರಶಿಣ ಎಲೆ ಹೊಂದಿರುವ ಔಷಧೀಯ ಗುಣವನ್ನು ಈ ಋತುಮಾನದಲ್ಲಿ ನಮ್ಮ ದೇಹಕ್ಕೆ ಸೇರಿಸುವ ಒಂದು ಪ್ರಕ್ರಿಯೆಯೂ ಹೌದು.

ಇದನ್ನು ಮಾಡುವುದು ಹೇಗೆ: ನಿಮಗೆ ಬೇಕಿರುವಷ್ಟು ಅಕ್ಕಿ (ಬೆಳ್ತಿಗೆ/ಕುಚ್ಚಲು)ಯನ್ನು ಚೆನ್ನಾಗಿ ತೊಳೆದು ಐದು ಗಂಟೆ ನೆನೆಸಿಟ್ಟು ಬಳಿಕ ತೆಳು ಗಟ್ಟಿ ಅಲ್ಲದ ಮಧ್ಯಮ ಹದದಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ರುಬ್ಬಿಕೊಳ್ಳಿ, ಅರಶಿಣ ಎಲೆಯನ್ನು ಸ್ವಚ್ಛಗೊಳಿಸಿ ಒಣ ಬಟ್ಟೆಯಲ್ಲಿ ಒರೆಸಿದ ಬಳಿಕ ರುಬ್ಬಿಟ್ಟ ಹಿಟ್ಟನ್ನು ಆ ಎಲೆಗೆ ಸವರಿ ಅದರ ಮೇಲೆ ತುರಿದ ಕಾಯಿ, ಬೆಲ್ಲ, ಏಲಕ್ಕಿಪುಡಿ, ಸ್ವಲ್ಪ ತುಪ್ಪದ ಮಿಶ್ರಣವನ್ನು ಹರಡಿ ಎಲೆಯನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿಕೊಳ್ಳಿ. ಅಲ್ಲಿಗೆ ಆರೋಗ್ಯಕರ ಅರಶಿಣ ಕಡುಬು ತಿನ್ನಲು ರೆಡಿ.

 

Related Posts

Leave a Reply

Your email address will not be published. Required fields are marked *