Menu

ಬಾಕಿ ಉಳಿಸಿಕೊಂಡಿದ್ದ ಪಡಿತರ ಸಾಗಾಟ ವೆಚ್ಚ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ

kh muniyappa

ಬೆಂಗಳೂರು: ಕಳೆದ 4 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ಪಡಿತರ ಸಾಗಾಟ ವೆಚ್ಚದ ಬಾಕಿ ಮೊತ್ತವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಕಳೆದ ಫೆಬ್ರವರಿಯಿಂದ ಮೇ ತಿಂಗಳವರೆಗೆ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿದ್ದ ಪಡಿತರ ಸಾಗಾಟ ವೆಚ್ಚವಾದ 2082.99 ಕೋಟಿ ರೂ. ವನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಬಾಕಿ ಉಳಿಸಿಕೊಂಡಿರುವ ಸಾಗಾಟ ವೆಚ್ಚ ಬಿಡುಗಡೆ ಮಾಡುವವರೆಗೆ ಪ್ರತಿಭಟನೆ ನಡೆಸುವುದಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟಗಾರರು ಕರೆ ನೀಡಿದ್ದ ಪ್ರತಿಭಟನೆ ವಾಪಸ್ ಪಡೆಯುವ ಸಾಧ್ಯತೆ ಇದೆ.

Related Posts

Leave a Reply

Your email address will not be published. Required fields are marked *