ಎಂಎಸ್ಸಿ ಇನ್ ಅಗ್ರಿಕಲ್ಚರ್ ಪದವಿ ಮುಗಿಸಿ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಉಪನ್ಯಾಸಕ ಕೆಲಸ ಮಾಡುತ್ತಿದ್ದ ಯುವಕನಿಗೆ ಪಿಯುಸಿ ಫೇಲ್ ಆದ ಯುವಕ ಲಂಡನ್ನಲ್ಲಿ ಉದ್ಯೋಗದ ಆಮಿಷವೊಡ್ಡಿ ಹನ್ನೊಂದು ಲಕ್ಷ ರೂ. ವಸೂಲಿ ಮಾಡಿ ಕೊನೆಗೆ ಕೊಲೆ ಮಾಡಿದ್ದಾನೆ.
ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಜಿ ರಾಮಪುರ ಗ್ರಾಮದ ರಾಮಾಂಜಿ (30) ಕೊಲೆಯಾದ ಯುವಕ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಲಂಡನ್ಗೆ ಕರೆದುಕೊಂಡು ಹೋಗುತ್ತೇವೆ ಅಂತ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಇತ್ತೀಚೆಗೆ ಕೆಂಪದೇನಹಳ್ಳಿ ತೋಟದ ಬಾವಿಯಲ್ಲಿ ಶವ ಪತ್ತೆ ಆಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಸುಧಾಕರ್, ಮನೋಜ್ ಮತ್ತು ಮಂಜುನಾಥ್ರನ್ನು ಪೊಲೀಸರು ಬಂಧಿಸಿದ್ದಾರೆ.
ಎಂಎಸ್ಸಿ ಪದವೀಧರ ರಾಮಾಂಜಿ ಬೆಂಗಳೂರಿನ ಯಲಹಂಕದಲ್ಲಿ ಕೋಚಿಂಗ್ ಸೆಂಟರ್ನಲ್ಲಿ ಉಪನ್ಯಾಸಕರಾಗಿದ್ದರು. ಸ್ವಗ್ರಾಮ ಜಿ ರಾಮಪುರದ ಪಕ್ಕದ ದೊಡ್ಡ ಗುಟ್ಟಹಳ್ಳಿಯ ಸುಧಾಕರ್ ಎಂಬಾತನ ಪರಿಚಯವಾಗಿದೆ. ಬೆಂಗಳೂರಲ್ಲಿ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್, ನೀನು ಲಂಡನ್ನಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ. ಸಂಬಳ ಕೊಡುತ್ತಾರೆ ಎಂದು ನಂಬಿಸಿದ್ದಾನೆ. ನನಗೆ ಅವರು ಗೊತ್ತು, ಇವರು ಗೊತ್ತು, ಲಂಡನ್ನಲ್ಲಿ ಕೆಲಸ ಕೊಡಿಸುತ್ತೇನೆ. ಮೊದಲೇ ಅವರಿಗೆ ದುಡ್ಡು ಕೊಡಬೇಕು ಎಂದು ನಂಬಿಸಿ 11 ಲಕ್ಷ ರೂ. ಪಡೆದುಕೊಂಡು ಮೋಜು ಮಸ್ತಿ ಮಾಡಿ ವಂಚಿಸಿದ್ದಾನೆ.
ರಾಮಾಂಜಿ ಯಾವಾಗ ಕೆಲಸ ಕೊಡಿಸುತ್ತಿ ಅಂತ ಕೇಳಿದಾಗ ಇಂದು, ನಾಳೆ ಆಗುತ್ತೆ. ವೀಸಾ ಸಮಸ್ಯೆ ಅಂತ ಕಥೆ ಹೇಳಿ, ಕೆಲವು ಸರಿ ಏರ್ಪೋರ್ಟ್ಗೆ ಕರೆದುಕೊಂಡು ಹೋಗಿ ಅಲ್ಲಿಂದ ಏನೋ ಕಾರಣ ಹೇಳಿ ವಾಪಸ್ ಕರೆದುಕೊಂಡು ಬಂದಿದ್ದ. ರೋಸಿ ಹೋದ ರಾಮಾಂಜಿ ಕೆಲಸ ಕೊಡಿಸು, ಇಲ್ಲ ದುಡ್ಡು ವಾಪಾಸ್ ಕೊಡು ಕೇಳಿದ್ದಕ್ಕೆ ರಾಮಾಂಜಿಯನ್ನು ಕೊಲೆ ಮಾಡುವ ಪ್ಲ್ಯಾನ್ ಮಾಡಿದ್ದಾನೆ.
ತನ್ನ ಸಹೋದರ ಮನೋಜ್ ಹಾಗೂ ಸಹೋದ್ಯೋಗಿ ಮಂಜುನಾಥ್ ಜೊತೆ ಸೇರಿ ರಾಮಾಂಜಿಯ ಹತ್ಯೆಗೆ ಸಂಚು ರೂಪಿಸಿದ್ದ. ಬಾಡಿಗೆಗೆ ಥಾರ್ ಕಾರು ಪಡೆದು ರಾಮಾಂಜಿ ಮನೆಗೆ ಹೋಗಿ, ಬಾ ಕೆಲಸ ಕನ್ಪರ್ಮ್ ಆಗಿದೆ, ಲಂಡನ್ಗೆ ಕಳುಹಿಸಿ ಕೊಡುತ್ತೇವೆ ಎಂದು ನಂಬಿಸಿ ಜೂನ್ 16 ರಂದು ಕಾರಲ್ಲಿ ಕೂರಿಸಿಕೊಂಡು ಹೋಗಿದ್ದರು.
ಜೂನ್ 16 ರಂದು ಫ್ಲೈಟ್ ಟಿಕೆಟ್, ವೀಸಾ ಅಂತ ಸುಳ್ಳು ಹೇಳಿ ಚಿಂತಾಮಣಿಯ ಲಾಡ್ಜ್ನಲ್ಲಿ ಇದ್ದು, ಮರು ದಿನ ಏರ್ಪೋರ್ಟ್ಗೆ ಹೋಗೋಣ ಎಂದು ಹೊರಟು ಕೆಂಪದೇನಹಳ್ಳಿ ಬಳಿ ಥಾರ್ ಕಾರಿನಲ್ಲಿ ಮುಂಬದಿ ಕೂತಿದ್ದವನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಮಾಂಜಿ ಮೃತದೇಹಕ್ಕೆ ಸೈಜುಗಲ್ಲುಗಳನ್ನ ಕಟ್ಟಿ ಬಾವಿಗೆ ಬಿಸಾಡಿದ್ದಾರೆ. 5 ದಿನಕ್ಕೆ ಮೃತದೇಹ ಬಾವಿಯಿಂದ ಮೇಲೆ ಬಂದು ಪ್ರಕರಣ ಬಹಿರಂಗಗೊಂಡಿದೆ.